ಪ್ಲೋರೋ ಕಾರ್‍ಬನ್ ಹೊಸ ರಕ್ತ

ಪ್ಲೋರೋ ಕಾರ್‍ಬನ್ ಹೊಸ ರಕ್ತ

ಅಶಕ್ತರಿಗೆ, ರೋಗಿಗಳಿಗೆ, ರಕ್ತಹೀನರಿಗೆ ಅಗತ್ಯವಾದ ರಕ್ತವನ್ನು ಅವರಿವರಿಂದ ದಾನ ಪಡೆಯಲಾಗುತ್ತದೆ. ಅಥವಾ ಬ್ಲಡ್ ಬ್ಯಾಂಕಿನಿಂದ ಹಣ ತೆತ್ತು ತಂದು ರಕ್ತವನ್ನು ರೋಗಿಗಳಿಗೆ ಪೊರೈಸಲಾಗುತ್ತದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಕೆಲವರ ರಕ್ತದಿಂದ ಏಡ್ಸ್‌ನಂತ ಮಹಾರೋಗ ತಗುಲಬಹುದು ಮತ್ತು ದುಬಾರಿ ಬೆಲೆ ಕೊಟ್ಟು ಬಡವರಿಗೆ ಕೊಳ್ಳಲಾಗದಿರಬಹುದು. ಇಂಥಹ ಅಡ್ಡಪರಿಣಾಮಗಳನ್ನು ಹೋಗಲಾಡಿಸಲೆಂದೇ ವಿಜ್ಞಾವಿಗಳು ‘ಪ್ಲೋರೋ ಕಾರ್‍ಬನ್’ ನಿಂದ ರೋಗಿಗೆ ರಕ್ತವೃದ್ಧಿಯಾಗುವ ಸಂಶೋಧನೆಯನ್ನು ಮಾಡಿದ್ದಾರೆ. (ಇಲ್ಲಿ ರಕ್ತದ ವರ್‍ಗ ಸಹಿತ ಬದಲಾಗಬಹುದು)

ಅಮೇರಿಕಾದ ವಿಜ್ಞಾನಿಗಳಾದ ಡಾ|| ಪ್ರಾಂಕ್‌ಗೊರನ್ ಮತ್ತು ಡಾ|| ರೆಲ್ಯಾಂಡ್ ಕ್ಲಾರ್‍ಕ್‌ರು ಇದರ ಅದ್ಭುತ ಗುಣವನ್ನು ಬಯಲಿಗೆಳೆದರು. ಫ್ಲೂರೋ ಕಾರ್‍ಬನನ್ನು ದೇಹಕ್ಕೆ ಸೇರಿಸಿದರೆ ಅಡ್ಡಪರಿಣಾಮಗಳಾಗದೇ ಅದು ರಕ್ತವು ಎಷ್ಟು ಅಂಗಾರಾಮ್ಲ, ಆಮ್ಲಜನಕಗಳನ್ನು ಹೀರಿಕೊಳ್ಳುವುದೋ ಅದರ ೧೫ ಪಾಲಿನಷ್ಟು ಅಧಿಕವಾಗಿ ಹೀರಿಕೊಂಡು ರೋಗಿ ಸಾಯುವುದನ್ನು ತಪ್ಪಿಸಬಲ್ಲದು ಎಂದು ದೃಧೀಕರಿಸುತ್ತಾರೆ.

೧೯೭೨ ರಲ್ಲಿ ಅಮೇರಿಕಾದ ಡಾ || ವಿಲಿಯಂ ಕೋಸೆನ್‌ಬಾಂ ಅವರು ಇಲಿಗಳ ಮೇಲೆ ಅವುಗಳ ರಕ್ತದ ಪ್ರತಿಶತ ೭೫ ರಷ್ಟು ಪ್ರಮಾಣದಲ್ಲಿ ಫ್ಲೂರೋ ಕಾರ್‍ಬನನ್ನೂ ಪೂರೈಸಿ ನೋಡಿದರು. ಅದರಿಂದ ಇಲಿಗಳ ಮಿದುಳು ಮತ್ತು ಹೃದಯದ ಕ್ರಿಯೆಗಳಲ್ಲಿ ವ್ಯತ್ಯಾಸವುಂಟಾಗಲಿಲ್ಲ. ಬಹುಬೇಗನೆ ಫ್ಲೂರೋಕಾರ್ಬನ್ ಅಂಶ ದೇಹದಿಂದ ಮಾಯವಾಗಿ ರಕ್ತವು ಅಧಿಕಗೊಳ್ಳುತ್ತಿರುವುದು ಕಂಡು ಬಂದಿತು. ಇಲಿ ಮತ್ತು ನಾಯಿಗಳ ದೇಹಕ್ಕೆ ಫ್ಲೂರೋಕಾರ್‍ಬನನ್ನು ಪ್ರಯೋಗಿಸಿ ಅವು ದೀರ್‍ಘಕಾಲ ಏನೂ ತೊಂದರೆ ಇಲ್ಲದೇ ಬದುಕಿದ್ದನ್ನು ಮನಗಂಡರು.

ಹಾರ್ವರ್ಡ್‌ ವಿಶ್ವವಿದ್ಯಾಲಯರಲ್ಲಿ ೧,೫೦೦ ಕ್ಕಿಂತ ಹೆಚ್ಚುರ ರೀತಿ ಫ್ಲೂರೋ ಕಾರ್‍ಬನ ಮಾದರಿ ಚುಚ್ಚು ಮದ್ದುಗಳನ್ನು ತಯಾರಿಸಿ ಅಧ್ಯಯನ ಮಾಡುವ ಕಾರ್‍ಯ ಮುಂದುವರೆದಿದೆ. ಇದರಲ್ಲಿ ಯಾವ ಮಾದರಿಯ ಪ್ರಯೋಗದಿಂದ ಬಲುಬೇಗನೆ ತಾನಾಗಿ ರಕ್ತತುಂಬಿಗೊಳ್ಳುತ್ತದೆ ಎಂಬುದರ ಸೂಕ್ಷ್ಮ ಪರೀಕ್ಷೆಯೂ ನಡೆಯುತ್ತದೆ. ಈ ಶತಮಾನದ ಕೊನೆಗೆ ರಕ್ತಹಾನಿಯ ಅಗತ್ಯವಿಲ್ಲದೇ ನಿಜರಕ್ತವಿಲ್ಲದೇ ಹೊಸ ಮಾದರಿಯ ರಕ್ತ ಗಳಿಸುವ ಸಂಶೋಧನೆ ಬೆಳಕಿಗೆ ಬರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲ್ಲುದೆ ಲತೆ ಫಲಂ ತನ್ನ
Next post ಒಂದು ಸಾವಿನ ಸುತ್ತ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…