Home / ಲೇಖನ / ವಿಜ್ಞಾನ / ಪ್ಲೋರೋ ಕಾರ್‍ಬನ್ ಹೊಸ ರಕ್ತ

ಪ್ಲೋರೋ ಕಾರ್‍ಬನ್ ಹೊಸ ರಕ್ತ

ಅಶಕ್ತರಿಗೆ, ರೋಗಿಗಳಿಗೆ, ರಕ್ತಹೀನರಿಗೆ ಅಗತ್ಯವಾದ ರಕ್ತವನ್ನು ಅವರಿವರಿಂದ ದಾನ ಪಡೆಯಲಾಗುತ್ತದೆ. ಅಥವಾ ಬ್ಲಡ್ ಬ್ಯಾಂಕಿನಿಂದ ಹಣ ತೆತ್ತು ತಂದು ರಕ್ತವನ್ನು ರೋಗಿಗಳಿಗೆ ಪೊರೈಸಲಾಗುತ್ತದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಕೆಲವರ ರಕ್ತದಿಂದ ಏಡ್ಸ್‌ನಂತ ಮಹಾರೋಗ ತಗುಲಬಹುದು ಮತ್ತು ದುಬಾರಿ ಬೆಲೆ ಕೊಟ್ಟು ಬಡವರಿಗೆ ಕೊಳ್ಳಲಾಗದಿರಬಹುದು. ಇಂಥಹ ಅಡ್ಡಪರಿಣಾಮಗಳನ್ನು ಹೋಗಲಾಡಿಸಲೆಂದೇ ವಿಜ್ಞಾವಿಗಳು ‘ಪ್ಲೋರೋ ಕಾರ್‍ಬನ್’ ನಿಂದ ರೋಗಿಗೆ ರಕ್ತವೃದ್ಧಿಯಾಗುವ ಸಂಶೋಧನೆಯನ್ನು ಮಾಡಿದ್ದಾರೆ. (ಇಲ್ಲಿ ರಕ್ತದ ವರ್‍ಗ ಸಹಿತ ಬದಲಾಗಬಹುದು)

ಅಮೇರಿಕಾದ ವಿಜ್ಞಾನಿಗಳಾದ ಡಾ|| ಪ್ರಾಂಕ್‌ಗೊರನ್ ಮತ್ತು ಡಾ|| ರೆಲ್ಯಾಂಡ್ ಕ್ಲಾರ್‍ಕ್‌ರು ಇದರ ಅದ್ಭುತ ಗುಣವನ್ನು ಬಯಲಿಗೆಳೆದರು. ಫ್ಲೂರೋ ಕಾರ್‍ಬನನ್ನು ದೇಹಕ್ಕೆ ಸೇರಿಸಿದರೆ ಅಡ್ಡಪರಿಣಾಮಗಳಾಗದೇ ಅದು ರಕ್ತವು ಎಷ್ಟು ಅಂಗಾರಾಮ್ಲ, ಆಮ್ಲಜನಕಗಳನ್ನು ಹೀರಿಕೊಳ್ಳುವುದೋ ಅದರ ೧೫ ಪಾಲಿನಷ್ಟು ಅಧಿಕವಾಗಿ ಹೀರಿಕೊಂಡು ರೋಗಿ ಸಾಯುವುದನ್ನು ತಪ್ಪಿಸಬಲ್ಲದು ಎಂದು ದೃಧೀಕರಿಸುತ್ತಾರೆ.

೧೯೭೨ ರಲ್ಲಿ ಅಮೇರಿಕಾದ ಡಾ || ವಿಲಿಯಂ ಕೋಸೆನ್‌ಬಾಂ ಅವರು ಇಲಿಗಳ ಮೇಲೆ ಅವುಗಳ ರಕ್ತದ ಪ್ರತಿಶತ ೭೫ ರಷ್ಟು ಪ್ರಮಾಣದಲ್ಲಿ ಫ್ಲೂರೋ ಕಾರ್‍ಬನನ್ನೂ ಪೂರೈಸಿ ನೋಡಿದರು. ಅದರಿಂದ ಇಲಿಗಳ ಮಿದುಳು ಮತ್ತು ಹೃದಯದ ಕ್ರಿಯೆಗಳಲ್ಲಿ ವ್ಯತ್ಯಾಸವುಂಟಾಗಲಿಲ್ಲ. ಬಹುಬೇಗನೆ ಫ್ಲೂರೋಕಾರ್ಬನ್ ಅಂಶ ದೇಹದಿಂದ ಮಾಯವಾಗಿ ರಕ್ತವು ಅಧಿಕಗೊಳ್ಳುತ್ತಿರುವುದು ಕಂಡು ಬಂದಿತು. ಇಲಿ ಮತ್ತು ನಾಯಿಗಳ ದೇಹಕ್ಕೆ ಫ್ಲೂರೋಕಾರ್‍ಬನನ್ನು ಪ್ರಯೋಗಿಸಿ ಅವು ದೀರ್‍ಘಕಾಲ ಏನೂ ತೊಂದರೆ ಇಲ್ಲದೇ ಬದುಕಿದ್ದನ್ನು ಮನಗಂಡರು.

ಹಾರ್ವರ್ಡ್‌ ವಿಶ್ವವಿದ್ಯಾಲಯರಲ್ಲಿ ೧,೫೦೦ ಕ್ಕಿಂತ ಹೆಚ್ಚುರ ರೀತಿ ಫ್ಲೂರೋ ಕಾರ್‍ಬನ ಮಾದರಿ ಚುಚ್ಚು ಮದ್ದುಗಳನ್ನು ತಯಾರಿಸಿ ಅಧ್ಯಯನ ಮಾಡುವ ಕಾರ್‍ಯ ಮುಂದುವರೆದಿದೆ. ಇದರಲ್ಲಿ ಯಾವ ಮಾದರಿಯ ಪ್ರಯೋಗದಿಂದ ಬಲುಬೇಗನೆ ತಾನಾಗಿ ರಕ್ತತುಂಬಿಗೊಳ್ಳುತ್ತದೆ ಎಂಬುದರ ಸೂಕ್ಷ್ಮ ಪರೀಕ್ಷೆಯೂ ನಡೆಯುತ್ತದೆ. ಈ ಶತಮಾನದ ಕೊನೆಗೆ ರಕ್ತಹಾನಿಯ ಅಗತ್ಯವಿಲ್ಲದೇ ನಿಜರಕ್ತವಿಲ್ಲದೇ ಹೊಸ ಮಾದರಿಯ ರಕ್ತ ಗಳಿಸುವ ಸಂಶೋಧನೆ ಬೆಳಕಿಗೆ ಬರುತ್ತದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...