Home / ಕವನ / ಕವಿತೆ / ಬಲ್ಲುದೆ ಲತೆ ಫಲಂ ತನ್ನ

ಬಲ್ಲುದೆ ಲತೆ ಫಲಂ ತನ್ನ

ಬಲ್ಲುದೆ ಲತೆ ಫಲಂ ತನ್ನ
ಸಿಹಿಯೊ ಕಹಿಯೊ ಎಂಬುದನ್ನ?
ಒಗೆದಂತೊದಗಿಸಲು ಬನ್ನ
ಮೇನೊ? ಬಳ್ಳಿಯಾ ೪
ಹಲವೊ ಕೆಲವೊ ಸವಿದು ಹಣ್ಣ,
ಸಿಹಿಯಾದಡೆ ಕೊಳುವುದುಣ್ಣ
ಕಹಿಯಾದಡೆ ಕಳೆವುದಣ್ಣ
ಲತೆಯ ತಳ್ಳಿಯಾ ೮

ಪ್ರಕೃತಿವಶಮೆ ಫಲಿಸ ಬಲ್ಲ
ಲತೆಗೆ ರುಚಿಯ ಗೊಡವೆ ಸಲ್ಲ-
ರುಚಿಯರಿಯದೆ ಸಸ್ಯಮೆಲ್ಲ
ಫಲಿಸಲಾರವೆ? ೧೨
ರುಚಿಯೊ? ರಸಿಕರೊಡವೆ! ಮುನ್ನ
ಸವಿದೆ ಪೊಗಳಿ ತೆಗಳಿದನ್ನ,
ಸವಿದೊಲ್ಲಡೆ ಲತೆಗೆ ತನ್ನ
ಫಲಂ ಭಾರವೆ? ೧೬

ತಾನೆ ತನ್ನ ಫಲಮನುಂಬ
ಬಳ್ಳಿ ಫಲಿಸಲುಂಟೆ? ಕೊಂಬ
ರಿಲ್ಲದಂತೆನಿತೊ ಫಲಂ ಬ
ಳುಂಕಲಡಿಯಲಿ, ೨೦
ಬಗೆಯ ಬಳ್ಳಿಗದುವೆ ಗೊಬ್ಬ
ರಾಗದೆ? ಮರುವೆಳಸು ಕೊಬ್ಬ
ದಿಹುದೆ? ಹೊಸತೆ ಬಳ್ಳಿ ಹಬ್ಬ
ವೆನಿತೊ ಮಡಿಯಲಿ? ೨೪

ಇಂದಿಗರಿದನೊಲ್ಲಡೆಂದೊ
ಬರುವರಾರೊ ಸವಿವರೆಂದೊ
ಕಾವ ಲತೆಯೊಳಾವ ಕುಂದೊ?
ನಾಳೆಯ ನಂಬೆ, ೨೮
ಇಂದಿನೇಕೆ ವೃಥಾ ತಂಟೆ?
ನಂಬಿಕೆ ಬರಡಾಗಲುಂಟೆ?
ಬರಿಯ ನಿರಾಶೆಗೆ ಮುರುಂಟೆ
ಫಲಿಸುವ ಹಂಬೆ? ೩೨

ಮುಂಬಿಗರಿದನಂತೆ ನೂಕೆ,
ಬಳ್ಳಿ ಬರಿದೆ ಕೊರಗಲೇಕೆ?
ಹೆತ್ತಳೈಸೆ ಫಲಮನಾಕೆ
ಕಡು ಸಾಜತೆಗೆ? ೩೬
ಯಾರೊಲ್ಲಡೆ ಗಾಳಿ ಬೀಸೆ
ತನ್ನುದುರಿದ ಫಲದ ಸೇಸೆ
ಭೂಮಾತೆಯ ಮುಡಿಗೆ ಸೂಸೆ
ಸಾಲದೆ ಲತೆಗೆ? ೪೦

ಅಥವಾ ಪೊಗಳಿಕೆಗೆ ಹಿಗ್ಗ
ಲೊಲ್ಲಡೆ, ತೆಗಳಿಕೆಗೆ ಕುಗ್ಗ
ಲಾರದೆ, ಲತೆ ಫಲಕೆ ಸಿಗ್ಗ
ಲೇಕೆ? ಕಾಲದೆ ೪೪
ಫಲಿಸುವಂತೆ ಫಲಿಸಿ ಹೆಚ್ಚೆ-
ಕೊಳುವುದುಳಿವುದನ್ಯರಿಚ್ಚೆ-
ತನ್ನ ಗೆಯ್ಮೆ ಗೆಯ್ದ ನಚ್ಚೆ
ಲತೆಗೆ ಸಾಲದೆ? ೪೮

ಮೆಚ್ಚಿಸದೊಡಿದಾರನೆಂದಿ
ಗೀ ಲತೆಗೀ ಫಲಮನೊಂದಿ
ಸಿದ ಸೃಷ್ಟಿಯ ಕರ್ಮಬಂದಿ
ಗಿದೇನೊಪ್ಪದೆ?
ಲತೆಯಿದನನ್ಯಥಾ ಫಲಿಸೆ,
ಫಲಮಿದನನ್ಯಥಾ ಮೆಲಿಸೆ-
ಪ್ರಕೃತಿಯನನ್ಯಥಾ ಸಲಿಸೆ
ಅವನಿಗಪ್ಪುದೆ? ೫೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...