Home / ಕವನ / ಕವಿತೆ / ಬಲ್ಲುದೆ ಲತೆ ಫಲಂ ತನ್ನ

ಬಲ್ಲುದೆ ಲತೆ ಫಲಂ ತನ್ನ

ಬಲ್ಲುದೆ ಲತೆ ಫಲಂ ತನ್ನ
ಸಿಹಿಯೊ ಕಹಿಯೊ ಎಂಬುದನ್ನ?
ಒಗೆದಂತೊದಗಿಸಲು ಬನ್ನ
ಮೇನೊ? ಬಳ್ಳಿಯಾ ೪
ಹಲವೊ ಕೆಲವೊ ಸವಿದು ಹಣ್ಣ,
ಸಿಹಿಯಾದಡೆ ಕೊಳುವುದುಣ್ಣ
ಕಹಿಯಾದಡೆ ಕಳೆವುದಣ್ಣ
ಲತೆಯ ತಳ್ಳಿಯಾ ೮

ಪ್ರಕೃತಿವಶಮೆ ಫಲಿಸ ಬಲ್ಲ
ಲತೆಗೆ ರುಚಿಯ ಗೊಡವೆ ಸಲ್ಲ-
ರುಚಿಯರಿಯದೆ ಸಸ್ಯಮೆಲ್ಲ
ಫಲಿಸಲಾರವೆ? ೧೨
ರುಚಿಯೊ? ರಸಿಕರೊಡವೆ! ಮುನ್ನ
ಸವಿದೆ ಪೊಗಳಿ ತೆಗಳಿದನ್ನ,
ಸವಿದೊಲ್ಲಡೆ ಲತೆಗೆ ತನ್ನ
ಫಲಂ ಭಾರವೆ? ೧೬

ತಾನೆ ತನ್ನ ಫಲಮನುಂಬ
ಬಳ್ಳಿ ಫಲಿಸಲುಂಟೆ? ಕೊಂಬ
ರಿಲ್ಲದಂತೆನಿತೊ ಫಲಂ ಬ
ಳುಂಕಲಡಿಯಲಿ, ೨೦
ಬಗೆಯ ಬಳ್ಳಿಗದುವೆ ಗೊಬ್ಬ
ರಾಗದೆ? ಮರುವೆಳಸು ಕೊಬ್ಬ
ದಿಹುದೆ? ಹೊಸತೆ ಬಳ್ಳಿ ಹಬ್ಬ
ವೆನಿತೊ ಮಡಿಯಲಿ? ೨೪

ಇಂದಿಗರಿದನೊಲ್ಲಡೆಂದೊ
ಬರುವರಾರೊ ಸವಿವರೆಂದೊ
ಕಾವ ಲತೆಯೊಳಾವ ಕುಂದೊ?
ನಾಳೆಯ ನಂಬೆ, ೨೮
ಇಂದಿನೇಕೆ ವೃಥಾ ತಂಟೆ?
ನಂಬಿಕೆ ಬರಡಾಗಲುಂಟೆ?
ಬರಿಯ ನಿರಾಶೆಗೆ ಮುರುಂಟೆ
ಫಲಿಸುವ ಹಂಬೆ? ೩೨

ಮುಂಬಿಗರಿದನಂತೆ ನೂಕೆ,
ಬಳ್ಳಿ ಬರಿದೆ ಕೊರಗಲೇಕೆ?
ಹೆತ್ತಳೈಸೆ ಫಲಮನಾಕೆ
ಕಡು ಸಾಜತೆಗೆ? ೩೬
ಯಾರೊಲ್ಲಡೆ ಗಾಳಿ ಬೀಸೆ
ತನ್ನುದುರಿದ ಫಲದ ಸೇಸೆ
ಭೂಮಾತೆಯ ಮುಡಿಗೆ ಸೂಸೆ
ಸಾಲದೆ ಲತೆಗೆ? ೪೦

ಅಥವಾ ಪೊಗಳಿಕೆಗೆ ಹಿಗ್ಗ
ಲೊಲ್ಲಡೆ, ತೆಗಳಿಕೆಗೆ ಕುಗ್ಗ
ಲಾರದೆ, ಲತೆ ಫಲಕೆ ಸಿಗ್ಗ
ಲೇಕೆ? ಕಾಲದೆ ೪೪
ಫಲಿಸುವಂತೆ ಫಲಿಸಿ ಹೆಚ್ಚೆ-
ಕೊಳುವುದುಳಿವುದನ್ಯರಿಚ್ಚೆ-
ತನ್ನ ಗೆಯ್ಮೆ ಗೆಯ್ದ ನಚ್ಚೆ
ಲತೆಗೆ ಸಾಲದೆ? ೪೮

ಮೆಚ್ಚಿಸದೊಡಿದಾರನೆಂದಿ
ಗೀ ಲತೆಗೀ ಫಲಮನೊಂದಿ
ಸಿದ ಸೃಷ್ಟಿಯ ಕರ್ಮಬಂದಿ
ಗಿದೇನೊಪ್ಪದೆ?
ಲತೆಯಿದನನ್ಯಥಾ ಫಲಿಸೆ,
ಫಲಮಿದನನ್ಯಥಾ ಮೆಲಿಸೆ-
ಪ್ರಕೃತಿಯನನ್ಯಥಾ ಸಲಿಸೆ
ಅವನಿಗಪ್ಪುದೆ? ೫೬
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...