Home / ಕವನ / ಕವಿತೆ / ತನ್ನ ತಾನು ಗೆದ್ದವನೇ

ತನ್ನ ತಾನು ಗೆದ್ದವನೇ

ತನ್ನ ತಾನು ಗೆದ್ದವನೇ
ನಮ್ಮ ಚೆಲುವ
ಗೆದ್ದುದೆಲ್ಲವನೊದ್ದವನೇ
ನಮ್ಮ ಚೆಲುವ

ಬೆಟ್ಟದೆತ್ತರ ಬೆಳೆದವನೇ
ನಮ್ಮ ಚೆಲುವ
ದಿಗಂಬರವನುಟ್ಟವನೇ
ನಮ್ಮ ಚೆಲುವ

ಸೂರ್‍ಯನಿಗೆ ಪ್ರತಿಸೂರ್‍ಯನೇ
ನಮ್ಮ ಚೆಲುವ
ಚಂದ್ರನಿಗೆ ಪ್ರತಿಚಂದ್ರನೇ
ನಮ್ಮ ಚೆಲುವ

ಕಲ್ಲರಳಿ ಹೂವಾದನೆ
ನಮ್ಮ ಚೆಲುವ
ತುಟಿ ಮುಗುಳ ದಳವಾದನೆ
ನಮ್ಮ ಚೆಲುವ

ಇವನಿಗಿವನೆ ಎಣೆಯಲ್ಲವೆ
ನಮ್ಮ ಚೆಲುವ
ಕಂಡವರ ಕಣ್ಮಣಿಯಲ್ಲವೆ
ನಮ್ಮ ಚೆಲುವ

ಪಡೆದಿವನ ನೆಲ ನೆಲವಲ್ಲವೆ
ನಮ್ಮ ಚೆಲುವ
ಕಡೆದಿವನ ಕೈ ಕೈಯಲ್ಲವೆ
ನಮ್ಮ ಚೆಲುವ

ಆಡಲಿವನ ಮಾತೆ ಮಾತಲ್ಲವೆ
ನಮ್ಮ ಚೆಲುವ
ನೋಡಲಿವನ ಕಣ್ಣೆ ಕಣ್ಣಲ್ಲವೆ
ನಮ್ಮ ಚೆಲುವ

ನಿರಾವಲಂಬ ನಿರಾಯುಧ
ನಮ್ಮ ಚೆಲುವ
ನಿಷ್ಕಳಂಕ ನಿರಾತಂಕ
ನಮ್ಮ ಚೆಲುವ

ಅನಂತತೆಯೆ ರೂಪವೆತ್ತ
ನಮ್ಮ ಚೆಲುವ
ಭೂವ್ಯೋಮವ ಒಂದಾಗಿಸಿ
ನಮ್ಮ ಚೆಲುವ

ಜಗದ ಸಂತ ಅರಿ ಹಂತ
ನಮ್ಮ ಚೆಲುವ
ಓಂ ಣಮೋ ಮಹಾವೀರ
ನಮ್ಮ ಚೆಲುವ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...