Home / ಕವನ / ಕವಿತೆ / ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ
ಒಬ್ಬನೊಳಗೆ ಇಬ್ಬನೇ
ಇಬ್ಬನೇ ಮೂವನೇ
ಒಬ್ಬನೊಳಗೆ ಎಷ್ಟನೇ

ಒಂದು ಒಡಲ ನೋಡಿ ನಾವು
ಒಬ್ಬನೆನುವೆವು
ಒಂದು ಒಡಲಿಗೊಬ್ಬನೇ
ಎಂದುಕೊಳುವೆವು

ಒಬ್ಬನಲ್ಲ ಇಬ್ಬನಲ್ಲ
ಒಳಗಿರುವವನಿಗೆ ಲೆಕ್ಕವಿಲ್ಲ
ಬಂದು ಹೋಗಿ ಮಾಡುತಾರೆ
ಒಕ್ಕಲಿಗರೆ ಎಲ್ಲರೂ

ಒಬ್ಬನೆಂದು ಯಾರು ಇಲ್ಲ
ಒಬ್ಬರನೊಬ್ಬ ಒತ್ತುತ್ತಾರೆ
ತಳ್ಳಿ ಜಾಗ ಮಾಡುತಾರೆ
ಆಚೆ ಈಚೆ ನಿಲ್ಲುತಾರೆ

ನೆರಳಿನಲ್ಲಿ ಅಡಗುತಾರೆ
ಸಮಯ ಕಾಯುತಿರುತಾರೆ
ಅಂದುಕೊಳ್ಳದಿರುವಾಗ
ಮುಂದೆ ಕಾಣಿಸಿಕೊಳ್ಳುತಾರೆ

ಮುಂಜಾನೆ ಕಂಡವನೇ
ಸಂಜೆ ಹಾಗೇ ಇರುತಾನೆಯೆ
ಹಗಲು ನಗುತ ಇದ್ದವನೆ
ಇರುಳು ಅಳುತ ಇದ್ದಾನೆಯೆ

ಒಬ್ಬರನೊಬ್ಬರು ಕೆಣಕುತಾರೆ
ಪರಸ್ಪರ ದೂರುತ್ತಾರೆ
ನೀನು ತಾನು ಎನುತಾರೆ
ತಪ್ಪು ಯಾರೂ ಒಪ್ಪಿಕೊಳರು
ತಾವೇ ಸರಿ ಎನುವರು

ಕ್ಷಣಕ್ಷಣವು ಬದಲಾವಣೆ
ಇದ್ದಂತೆಯೆ ಇರುವುದಿಲ್ಲ
ಪಾಪಿಯಿಂದು ಸಂತ ನಾಳೆ
ನಿನ್ನೆಯ ಆರೋಪಿಯೇ
ಈವತ್ತು ನ್ಯಾಯಾಧೀಶನು

ಯಾರ ನೀನು ಹಳಿಯುವಿ
ಯಾರ ಹಾಡಿ ಹೊಗಳುವಿ
ಒಂದೆ ಒಡಲ ಮನದ ಪರಿಯ
ಹೇಗ ಅರಿಯುವಿ

ಮನವೆಂಬುದು ಅತಿ ವಿಚಿತ್ರ
ಬರೆದರಿಲ್ಲ ಅದರ ಚಿತ್ರ
ಭಾಷೆ ಕೂಡ ಸೋಲುವುದು
ಅದರ ರೀತಿ ಹಿಡಿಯಲು

ಒಬ್ಬನಲ್ಲ ನೀನು ನಾನು
ನನ್ನೊಳಗೆ ನಿನ್ನ ಭಾವ
ನಿನ್ನೊಳಗೆ ನನ್ನ ಭಾವ
ಅದಲುಬದಲು ಆಗುವೆವು

ನಿನ್ನ ಮನದ ಗಾಯವೆ
ನನ್ನೊಳಗೂ ವೇದನೆ
ನಿನ್ನ ಸಂತೋಷವೆ
ಕಿಂಚಿದೂನು ನನ್ನದೆನೆ

ನೀನು ಯಾರು ನಾನು ಯಾರು
ಒಬ್ಬನಲ್ಲ ಸಹಸ್ರ
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...