Home / ಕವನ / ಕವಿತೆ / ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ
ಒಬ್ಬನೊಳಗೆ ಇಬ್ಬನೇ
ಇಬ್ಬನೇ ಮೂವನೇ
ಒಬ್ಬನೊಳಗೆ ಎಷ್ಟನೇ

ಒಂದು ಒಡಲ ನೋಡಿ ನಾವು
ಒಬ್ಬನೆನುವೆವು
ಒಂದು ಒಡಲಿಗೊಬ್ಬನೇ
ಎಂದುಕೊಳುವೆವು

ಒಬ್ಬನಲ್ಲ ಇಬ್ಬನಲ್ಲ
ಒಳಗಿರುವವನಿಗೆ ಲೆಕ್ಕವಿಲ್ಲ
ಬಂದು ಹೋಗಿ ಮಾಡುತಾರೆ
ಒಕ್ಕಲಿಗರೆ ಎಲ್ಲರೂ

ಒಬ್ಬನೆಂದು ಯಾರು ಇಲ್ಲ
ಒಬ್ಬರನೊಬ್ಬ ಒತ್ತುತ್ತಾರೆ
ತಳ್ಳಿ ಜಾಗ ಮಾಡುತಾರೆ
ಆಚೆ ಈಚೆ ನಿಲ್ಲುತಾರೆ

ನೆರಳಿನಲ್ಲಿ ಅಡಗುತಾರೆ
ಸಮಯ ಕಾಯುತಿರುತಾರೆ
ಅಂದುಕೊಳ್ಳದಿರುವಾಗ
ಮುಂದೆ ಕಾಣಿಸಿಕೊಳ್ಳುತಾರೆ

ಮುಂಜಾನೆ ಕಂಡವನೇ
ಸಂಜೆ ಹಾಗೇ ಇರುತಾನೆಯೆ
ಹಗಲು ನಗುತ ಇದ್ದವನೆ
ಇರುಳು ಅಳುತ ಇದ್ದಾನೆಯೆ

ಒಬ್ಬರನೊಬ್ಬರು ಕೆಣಕುತಾರೆ
ಪರಸ್ಪರ ದೂರುತ್ತಾರೆ
ನೀನು ತಾನು ಎನುತಾರೆ
ತಪ್ಪು ಯಾರೂ ಒಪ್ಪಿಕೊಳರು
ತಾವೇ ಸರಿ ಎನುವರು

ಕ್ಷಣಕ್ಷಣವು ಬದಲಾವಣೆ
ಇದ್ದಂತೆಯೆ ಇರುವುದಿಲ್ಲ
ಪಾಪಿಯಿಂದು ಸಂತ ನಾಳೆ
ನಿನ್ನೆಯ ಆರೋಪಿಯೇ
ಈವತ್ತು ನ್ಯಾಯಾಧೀಶನು

ಯಾರ ನೀನು ಹಳಿಯುವಿ
ಯಾರ ಹಾಡಿ ಹೊಗಳುವಿ
ಒಂದೆ ಒಡಲ ಮನದ ಪರಿಯ
ಹೇಗ ಅರಿಯುವಿ

ಮನವೆಂಬುದು ಅತಿ ವಿಚಿತ್ರ
ಬರೆದರಿಲ್ಲ ಅದರ ಚಿತ್ರ
ಭಾಷೆ ಕೂಡ ಸೋಲುವುದು
ಅದರ ರೀತಿ ಹಿಡಿಯಲು

ಒಬ್ಬನಲ್ಲ ನೀನು ನಾನು
ನನ್ನೊಳಗೆ ನಿನ್ನ ಭಾವ
ನಿನ್ನೊಳಗೆ ನನ್ನ ಭಾವ
ಅದಲುಬದಲು ಆಗುವೆವು

ನಿನ್ನ ಮನದ ಗಾಯವೆ
ನನ್ನೊಳಗೂ ವೇದನೆ
ನಿನ್ನ ಸಂತೋಷವೆ
ಕಿಂಚಿದೂನು ನನ್ನದೆನೆ

ನೀನು ಯಾರು ನಾನು ಯಾರು
ಒಬ್ಬನಲ್ಲ ಸಹಸ್ರ
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...