ಒಬ್ಬನೆಂದರೊಬ್ಬನೇ

ಒಬ್ಬನೆಂದರೊಬ್ಬನೇ
ಒಬ್ಬನೊಳಗೆ ಇಬ್ಬನೇ
ಇಬ್ಬನೇ ಮೂವನೇ
ಒಬ್ಬನೊಳಗೆ ಎಷ್ಟನೇ

ಒಂದು ಒಡಲ ನೋಡಿ ನಾವು
ಒಬ್ಬನೆನುವೆವು
ಒಂದು ಒಡಲಿಗೊಬ್ಬನೇ
ಎಂದುಕೊಳುವೆವು

ಒಬ್ಬನಲ್ಲ ಇಬ್ಬನಲ್ಲ
ಒಳಗಿರುವವನಿಗೆ ಲೆಕ್ಕವಿಲ್ಲ
ಬಂದು ಹೋಗಿ ಮಾಡುತಾರೆ
ಒಕ್ಕಲಿಗರೆ ಎಲ್ಲರೂ

ಒಬ್ಬನೆಂದು ಯಾರು ಇಲ್ಲ
ಒಬ್ಬರನೊಬ್ಬ ಒತ್ತುತ್ತಾರೆ
ತಳ್ಳಿ ಜಾಗ ಮಾಡುತಾರೆ
ಆಚೆ ಈಚೆ ನಿಲ್ಲುತಾರೆ

ನೆರಳಿನಲ್ಲಿ ಅಡಗುತಾರೆ
ಸಮಯ ಕಾಯುತಿರುತಾರೆ
ಅಂದುಕೊಳ್ಳದಿರುವಾಗ
ಮುಂದೆ ಕಾಣಿಸಿಕೊಳ್ಳುತಾರೆ

ಮುಂಜಾನೆ ಕಂಡವನೇ
ಸಂಜೆ ಹಾಗೇ ಇರುತಾನೆಯೆ
ಹಗಲು ನಗುತ ಇದ್ದವನೆ
ಇರುಳು ಅಳುತ ಇದ್ದಾನೆಯೆ

ಒಬ್ಬರನೊಬ್ಬರು ಕೆಣಕುತಾರೆ
ಪರಸ್ಪರ ದೂರುತ್ತಾರೆ
ನೀನು ತಾನು ಎನುತಾರೆ
ತಪ್ಪು ಯಾರೂ ಒಪ್ಪಿಕೊಳರು
ತಾವೇ ಸರಿ ಎನುವರು

ಕ್ಷಣಕ್ಷಣವು ಬದಲಾವಣೆ
ಇದ್ದಂತೆಯೆ ಇರುವುದಿಲ್ಲ
ಪಾಪಿಯಿಂದು ಸಂತ ನಾಳೆ
ನಿನ್ನೆಯ ಆರೋಪಿಯೇ
ಈವತ್ತು ನ್ಯಾಯಾಧೀಶನು

ಯಾರ ನೀನು ಹಳಿಯುವಿ
ಯಾರ ಹಾಡಿ ಹೊಗಳುವಿ
ಒಂದೆ ಒಡಲ ಮನದ ಪರಿಯ
ಹೇಗ ಅರಿಯುವಿ

ಮನವೆಂಬುದು ಅತಿ ವಿಚಿತ್ರ
ಬರೆದರಿಲ್ಲ ಅದರ ಚಿತ್ರ
ಭಾಷೆ ಕೂಡ ಸೋಲುವುದು
ಅದರ ರೀತಿ ಹಿಡಿಯಲು

ಒಬ್ಬನಲ್ಲ ನೀನು ನಾನು
ನನ್ನೊಳಗೆ ನಿನ್ನ ಭಾವ
ನಿನ್ನೊಳಗೆ ನನ್ನ ಭಾವ
ಅದಲುಬದಲು ಆಗುವೆವು

ನಿನ್ನ ಮನದ ಗಾಯವೆ
ನನ್ನೊಳಗೂ ವೇದನೆ
ನಿನ್ನ ಸಂತೋಷವೆ
ಕಿಂಚಿದೂನು ನನ್ನದೆನೆ

ನೀನು ಯಾರು ನಾನು ಯಾರು
ಒಬ್ಬನಲ್ಲ ಸಹಸ್ರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಋತದ ಮೊದಲ ಕಣಸು
Next post ಉಮರನ ಒಸಗೆ – ೨೦

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…