Home / ಕವನ / ಕವಿತೆ / ಕರ್ನಾಟಕ ವೈಭವ

ಕರ್ನಾಟಕ ವೈಭವ

ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು
ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು
ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು
ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು
ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ
ಪೊನ್ನ ಜನ್ನ ಕುಮಾರವ್ಯಾಸರ ಹಿರಿಮೆಯ ಸೆಲೆಯಿಲ್ಲಿ
ಬೇಂದ್ರೆ ಮಾಸ್ತಿ ಕುವೆಂಪುರವರ ಕೃಷಿಯ ನೋಡಿಲ್ಲಿ
ಡಿ.ವಿ.ಜಿ.ಯ ಮಂಕುತಿಮ್ಮನ ಕಗ್ಗ ಕೇಳಿಲ್ಲ
ಪಟ್ಟದಕಲ್ಲು ಬೇಲೂರುಗಳ ವೈಭವ ನೋಡಿಲ್ಲಿ
ವಿಜಯನಗರ ವರ ಹಳೆಬೀಡುಗಳ ಕತೆಯ ಹಾಡಿಲ್ಲಿ
ಶ್ರವಣ ಬೆಳ್ಗೊಳ ಬೆಳವಲ ನಾಡಿನ ಚರಿತ್ರೆ ಕೇಳಿಲ್ಲಿ
ಎಲ್ಲಾ ಕೇಳಿ ಎಲ್ಲಾ ಮರೆತು ಮಾನವನಾಗಿಲ್ಲಿ
ವಿಷ್ಣುವರ್ಧನ ಪುಲಿಕೇಶಿಯರ ಪ್ರತಾಪ ಕೇಳಿಲ್ಲ
ವೀರ ವನಿತೆ ಚೆನ್ನಮ್ಮನ ಬಲು ಪ್ರೌಢಿಮೆ ಹಾಡಿಲ್ಲಿ
ನಾಟ್ಯ ವಿಶಾರದೆ ಶಾಂತಲೆಯ ಗೆಜ್ಜೆಯ ನದಿಯಲ್ಲಿ
ಸ್ವಾಭಿಮಾನದ ಕೆಚ್ಚೆದೆ ನೋಡಲು ಕೂಡಲೆ ಬಾ ಇಲ್ಲಿ
ತುಂಗಾಭದ್ರೆ ಕಾವೇರಿಯ ಹೊಳೆ ಜುಳು ಜುಳು ರವದಲ್ಲಿ
ಹರಿಯುತ ಕಂಡಿದೆ ಕನ್ನಡತಿಯ ಚೆಲುವಿನ ಕೊರಳಲ್ಲಿ
ಸಹ್ಯಾದ್ರಿಯ ನೆಲೆ ಮಲೆನಾಡಿನ ಮಲೆ ಮಕುಟಶ್ರಿಯಾಗಿ
ಭುವನೇಶ್ವರಿಯ ಮುಡಿಯನ್ನೇರಿ ಬೆಳಗಿದೆ ನೋಡಿಲ್ಲಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...