ಕರ್ನಾಟಕ ವೈಭವ

ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು
ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು
ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು
ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು
ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ
ಪೊನ್ನ ಜನ್ನ ಕುಮಾರವ್ಯಾಸರ ಹಿರಿಮೆಯ ಸೆಲೆಯಿಲ್ಲಿ
ಬೇಂದ್ರೆ ಮಾಸ್ತಿ ಕುವೆಂಪುರವರ ಕೃಷಿಯ ನೋಡಿಲ್ಲಿ
ಡಿ.ವಿ.ಜಿ.ಯ ಮಂಕುತಿಮ್ಮನ ಕಗ್ಗ ಕೇಳಿಲ್ಲ
ಪಟ್ಟದಕಲ್ಲು ಬೇಲೂರುಗಳ ವೈಭವ ನೋಡಿಲ್ಲಿ
ವಿಜಯನಗರ ವರ ಹಳೆಬೀಡುಗಳ ಕತೆಯ ಹಾಡಿಲ್ಲಿ
ಶ್ರವಣ ಬೆಳ್ಗೊಳ ಬೆಳವಲ ನಾಡಿನ ಚರಿತ್ರೆ ಕೇಳಿಲ್ಲಿ
ಎಲ್ಲಾ ಕೇಳಿ ಎಲ್ಲಾ ಮರೆತು ಮಾನವನಾಗಿಲ್ಲಿ
ವಿಷ್ಣುವರ್ಧನ ಪುಲಿಕೇಶಿಯರ ಪ್ರತಾಪ ಕೇಳಿಲ್ಲ
ವೀರ ವನಿತೆ ಚೆನ್ನಮ್ಮನ ಬಲು ಪ್ರೌಢಿಮೆ ಹಾಡಿಲ್ಲಿ
ನಾಟ್ಯ ವಿಶಾರದೆ ಶಾಂತಲೆಯ ಗೆಜ್ಜೆಯ ನದಿಯಲ್ಲಿ
ಸ್ವಾಭಿಮಾನದ ಕೆಚ್ಚೆದೆ ನೋಡಲು ಕೂಡಲೆ ಬಾ ಇಲ್ಲಿ
ತುಂಗಾಭದ್ರೆ ಕಾವೇರಿಯ ಹೊಳೆ ಜುಳು ಜುಳು ರವದಲ್ಲಿ
ಹರಿಯುತ ಕಂಡಿದೆ ಕನ್ನಡತಿಯ ಚೆಲುವಿನ ಕೊರಳಲ್ಲಿ
ಸಹ್ಯಾದ್ರಿಯ ನೆಲೆ ಮಲೆನಾಡಿನ ಮಲೆ ಮಕುಟಶ್ರಿಯಾಗಿ
ಭುವನೇಶ್ವರಿಯ ಮುಡಿಯನ್ನೇರಿ ಬೆಳಗಿದೆ ನೋಡಿಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಬಂಧ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…