ಬೆಪ್ಪು ಕಡಲು

ತನ್ನಾಳ ಅಗಲ ಶಕ್ತಿ
ತಿಳಿಯದಿವರು
ದಡಗಳ ಕಟ್ಟಿ
ನನಗೇ ಮಿತಿಯೊಡ್ಡುವರೇ?
ತೀರಗಳಾಚೆಯ ಬದುಕಿಗೆ
ತೆರೆಯೆಳೆಯುವರೇ?
ರೋಷಾವೇಶದಿ ಹೂಂಕರಿಸಿ
ಕಡಲು
ದೈತ್ಯಾಕಾರದ ತೆರೆಗಳನ್ನೆಬ್ಬಿಸಿ
ದಡಕ್ಕೆ ಬಡಿದು
ಕಣ್ಣರಳಿಸಿ

ಏನಿದೆ ಇಲ್ಲಿ
ಬರೀ ರಸ ಹೀರಿ ಒಗೆದ ಕಸ
ಬೇಡೆಂದು ನಾನೇ ಒತ್ತರಿಸಿದ
ಒಡೆದ ಖಾಲಿ ಕಪ್ಪೆಚಿಪ್ಪು?
ಇದ ನೋಡಲು ತೀರಕೆ
ಬಂದನೇ ಬೆಪ್ಪು?
ನನ್ನೊಳಗಿನೊಳ ಕೋಣೆಯಲಿ
ಅದೆಷ್ಟು ಹವಳ ಮುತ್ತು!

ನನಗಷ್ಟೇ ಗೊತ್ತು
ನನ್ನ ಅಪೂರ್ವ ಶಕ್ತಿ
ಎಲ್ಲ ಶೂನ್ಯಕೂ ಮುಕ್ತಿ!

ಇದ್ದಕ್ಕಿದ್ದಂತೆ
ಅರಿವು ಮೂಡಿ
ಒಳಸರಿದು
ತನ್ನಾಳದಾಳಕೆ ಇಳಿಯುವಾಗ

ನಾರದ ಗಾಳಿಯ ಗಾಳಿಮಾತು
ನಕ್ಷತ್ರಿಕ ಸೂರ್ಯನ ಸುಳ್ಳುಮಾತು
ಮಾಯಾವಿನಿ ಭೂಮಿಯ
ಭರವಸೆಯ ನುಡಿಕೇಳಿ
ಮತ್ತೆ ರೋಷ ಉಕ್ಕುಕ್ಕಿ

ತನ್ನೊಳಹೊರಗಿನ ಬಗೆಗೆಲ್ಲಾ
ತನಗೇ ತಿಳಿದಿದ್ದರೂ
ಅದೇ ಹೊರಧುಮ್ಮಿಕ್ಕುವ
ಶಾಂತವಾಗಿ ಒಳ ಮೆಲ್ಲನೆ
ಸರಿಯುವ,
ಮತ್ತೆ ಸಿಟ್ಟೇರಿ ಭೋರ್ಗರೆವ
ಹುಚ್ಚರಾಟ
ಈ ಬೆಪ್ಪು ಕಡಲಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ
Next post ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys