Home / ಕವನ / ಕವಿತೆ / ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು)

ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ
ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ||

ಪುಣ್ಯಭೂಮಿ ನೀ ಗಣ್ಯಭೂಮಿ ಎಂದೇನೇನೋ ನಿನ ಹೊಗಳಿದರು
ದಿವ್ಯ ಭವ್ಯ ಭಾರತ ಅಂತಂದು ಬಾಯ್ತುಂಬ ಸುಳ್ಳೇ ಹಾಡಿದರು ||೧||

ಕೀರುತಿವಂತೆ ಖ್ಯಾತಿವಂತೆ ದಿಕ್ಕಿಲ್ಲದಂಥ ದುರ್ಗತಿ
ಯಾರಿಗಾಗಿ ನೀ ಬಾಳುವಿಯೇನೋ ಬದುಕಿದ್ದೂ ನೀ ಸತ್ತಿ ||೨||

ಲಂಡ ಭಂಡ ಪುಂಡಾಟದ ಕಂತ್ರಾಟ ರಾಜಕಾರಣಂದೋ ಯಾಪಾರ
ಹಾಡ ಹಗಲೆ ನಿನ್ನ ಲೂಟಿ ಮಾಡ್ಯಾರ ಮಂತ್ರಿ ಶಾಸಕರು ಕೈಯಾರ ||೩||

ವೋಟಿಗೆ ನೋಟನು ತೂರಿದ ಮಂತ್ರಿಗೆ ನಿನ್ನೆನಪ್ಹ್ಯಾಂಗ ಬರತೈತಿ
ಒಂದಕ್ಕ ನೂರ್ರಷ್ಟು ಬಳಕೊಳ್ಳಾಕ ಹಗಲಿಳ್ಳು ಸಾಲದು ಬಂದೈತೆ ||೪||

ಸಾವುಕಾರನಿಗೊ ಸಾವಿರ ಕೆಲಸ ಆಸ್ತಿ ಪಾಸ್ತಿ ಅಂತ ಬೆಳೆಸೋದೆ
ಬಡವರ ಬೆನ್ ಮ್ಯಾಲೆ ಸವ್ವಾರಿ ಮಾಡತಾ ದೇಶಾನ್ನ ನರಕಕೆ ಕಳಸೋದೆ ||೫||

ವ್ಯಾಪಾರಿ ತೂಗತಾನೆ ಅನ್ಯಾಯ ತಕ್ಕಡಿ ರೊಕ್ಕಾನೇ ಅವ್ಗೆ ಮನೆದೇವ್ರು
ಗಂಟು ಬಡ್ಡಿಗಳ ಹಣದ ಮೂಟೆಗಳು ದೇಶನ್ಯಾಕೆ ನೆನಸ್ತಾರೆ ಅಂಥಾವ್ರು ||೬||

ತಲೆಗಳ ಬೋಳಿಸಿ ಕೂಡಿಟ್ಟ ಭಂಡವಾಳ ಭಂಡತನವನ್ನೇ ಕಲಿಸ್ಯೈತಿ
ದೊಡ್ಡ ದೊಡ್ಡ ಬಿಜಿನೆಸು ದೊಡ್ಡದಾಗಿ ಬೆಳದಾವೆ ತಾಯಿಯ ಒಡಲೋ ಬರಿದೈತೆ ||೭||

ಲಂಚ ಲಂಚ ಅಂತ ನಾಲಿಗೆ ಚಾಚುತ ರೈತನ್ನ ರಗುತ ಹೀರುತ್ತ
ಉಬ್ಬುವ ಕೊಬ್ಬುವ ಅಧಿಕಾರಿಗಳಿಗೆ ದೇಶದ ಮಾತೇ ಅತ್ತತ್ತ ||೮||

ಸಂಬಳ ಸಾಲದು ಭಡತೀ ಸಾಲದು ಗಿಂಬಳಕಾಗೀ ಪೈಪೋಟಿ
ಸಾವಿರ ಲಕ್ಷದ ನೌಕರಿದಾರರು ತಾಯಿಗೆ ಸುಖವು ಯಾಪಾಟಿ ||೯||

ಊರೂರಿಗೊಬ್ಬೊಬ್ಬ ಜಗದ್ದ್ ಗುರುವು ಶ್ರೀಮಂತ ಶಿಷ್ಯರ ಒಡನಾಟ
ಭೇದವ ಬೆಳೆಸೀ ಬಡದಾಡಕ್ಹಚ್ಚಿ ಮೆರೆಯೋರ್ ದೇಶಕೆ ಭಂಡಾಟ ||೧೦||

ತಿಮ್ಮಪ್ಪ ಬೊಮ್ಮಪ್ಪ ಎಲ್ಲವ್ವ ಹುಲಿಗೆವ್ವ ನೂರಾರು ದೇವರು ಮನೆಮನೆಗೆ
ಎಲ್ಲಾವು ಜನರನು ಹರಕೊಂಡು ತಿನುವಾಗ ಭಾರತಿ ದೇವಿಗೆ ಏನ್ ಕೊನೆಗೆ ||೧೧||

ಪೂಜಾರಿ ಚಿಂತೆ ಕಾಣಿಕೆ ಕಡೆಗೆ ಭಕ್ತರ ಚಿಂತೆ ಹೊರಗಡೆಗೆ
ಪುರಾಣ ನೀತಿ ಹೇಳುವ ಶಾಸ್ತ್ರಿಗೆ ಸುಂಭಾವನೆಯೇ ಕಡೆ ಗಳಿಗೆ ||೧೨||

ಬರೆಯುವ ಕವಿಗೆ ಸನ್ಮಾನ ಭಾಷಣ ಕೊರೆವಗೆ ಧನಮಾನ
ಭಾರತ ಮಾತೆಯ ಎಲ್ಲರು ಬಳಸಿ ಲಂಪಟತನದಲೆ ದಿನಮಾನ ||೧೩||

ಹರೇದ ಹುಡುಗ್ರಿಗೆ ಬಣ್ಬಣ್ಣ ಹುಡುಕೋದು ಮೀಸೆ ಬಂದಾಗ ದೇಶ ಕಾಣದು
ಹರೇದ ಹುಡುಗ್ಗೆ‍ಗೆ ಬಣ್ಬಣ್ಣ ಮೆರೆಯೋದು ದೇಶ ಅಂತಂದ್ರೆ ಗೊತ್ತಾಗದು ||೧೪||

ಖಾಕೀಯ ಉಡುಪಿಗೆ ಕೇಸೀನ ಬ್ಯಾಟಿ ಖಾದಿ ಉಡುಪಿಗಂತು ದೇಶನೆ ಬ್ಯಾಟಿ
ಕರ್ರನ್ನ ಉಡುಪಿಗೆ ಕೊಲೆಗಡ್ಕುರನುಳುಸೋದು ನ್ಯಾಯಾಲಯ್ದಾಗೆ ನ್ಯಾಯ ಲೂಟಿ ||೧೫||

ದುಡಿಯುವ ರೈತಗೆ ಶ್ರಮ ಜೀವಿಗಳಿಗೆ ಹೊಟ್ಟೇನ ತುಂಬೋದೆ ಕಡುಚಿಂತೆ
ಸುಲಿದು ತಿನ್ನುವಂಥ ಹದ್ದು ಕಾಗೆಗಳ ಕೈಯಾಗೆ ನರಳುವ ಜೀವ ಚಿತೆ ||೧೬||

ನೆಲದ ಮಕ್ಕಳೇ ನಿನ್ನ ಮಕ್ಕಳು ಅವರ ದುಸ್ಥಿತಿಯೆ ನಿನ್ನ ಸ್ಥಿತಿ
ಮಣ್ಣಿನ ಮಕ್ಕಳು ಕಣ್ಣು ಬಿಟ್ಟು ನಿಲ್ಲೋವರೆಗೆ ತಾಯಿ ನಿನಗಂತೂ ಇದೇ ಗತಿ ||೧೭||

೧೩.೬.೮೬
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...