ಸತ್ತವನ ಮನೆಯಲ್ಲಿ

ಸತ್ತವನ ಮನೆಯಲ್ಲಿ ಸಂಜೆ
ಅವರಿವರು ತಂದಿಟ್ಟ
ಬಗೆ ಬಗೆಯ ಊಟ
ಅವರಿವರು ತಂದಿಟ್ಟ
ಹಲವು ಹತ್ತು ಸಮಸ್ಯೆ.
ಸಂತಾಪಕೆ ಬಂದವರ
ಮಾತು ನಗೆ ಕೇಕೆ
ಸರಸ ಸಂಭಾಷಣೆ!
ನವ ವಿಧವೆ ಸೊಂಟದಲ್ಲಿ
ಬೀಗದ ಕೈಗೊಂಚಲು ಭದ್ರ.
ಮಗ ಮಗಳು ಸೊಸೆ ಅಳಿಯ
ಎಲ್ಲರದೂ ಒಂದೇ ಚಿಂತೆ
ಚಿತೆ ಏರಿದವನ ಅಸ್ತಿ
ಲಪಟಾಯಿಸುವ ಸಂಚು.
ಗೃಹ ಕಲಹ, ಶೀತಲ ಯುದ್ಧ
ಎಲ್ಲ ಈಗಲೇ ಆಗಬೇಕು
ಬಿಸಿ ಆರುವ ಮುನ್ನ
ತಟ್ಟಿದರೆ ತಾನೆ ಕಬ್ಬಿಣ ಮೆದು.
ಸಾಲ ಕೊಡದವರೂ ಬಂದರು ವಸೂಲಿಗೆ.
ಆಫೀಸಿನಿಂದ ಬಂತು ವಂತಿಗೆ
ಮರಣೋತ್ತರ ನಿಧಿ
ಗ್ರಾಚ್ಯುಟಿ ಜತೆಗೆ ಭವಿಷ್ಯ ನಿಧಿ.
ನಿಧಿ ಕಂಡು ಎಲ್ಲರ ಮುಖ
ಅರಳಿತು – ಮರೆಯಿತು ದುಃಖ
ಅಳುವರಾರಿಲ್ಲ ಇಲ್ಲಿ
ಆಸಯೊಂದೇ ತುಂಬಿತ್ತು,
ಎಲ್ಲರ ಕಣ್ಣುಗಳಲ್ಲಿ.
ಸತ್ತವನ ಫೋಟೋ ಬಂತು
ಹೂವಿನ ಹಾರ, ಊದುಬತ್ತಿ
ಪುರೋಹಿತರ ಮಂತ್ರ-ತಂತ್ರ
ಎಲ್ಲ ಸಾಂಗೋಪಾಂಗ
ಸತ್ತವ ಮೇಲಿಂದ ನೋಡಿ ನೊಂದ
ಯಾರಿಗೂ ಬೇಡವಾದ ನಾನು
ಈ ಸುಖಕ್ಕೆ ಸಾಯಬೇಕಿತ್ತೇನು?
*****
೩೧-೦೫-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕುಂದರಾಜ್: ‘ಮುಳ್ಳಿನ ಕಿರೀಟ’
Next post ಕವಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys