Home / ಲೇಖನ / ವಿಜ್ಞಾನ / ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಜಗತ್ತಿನಲ್ಲಿ ಅಸಂಖ್ಯ ಜೀವಕೋಶಗಳಿವೆ. ಪ್ರಾಣಿ, ಪಕ್ಷಿ ಕೀಟ, ಉರುಗಜಾತಿಯ ಕಸೇರಕುಗಳು, ಈ ಭೂಮಿಯ ಮೇಲೆ ಹುಟ್ಟಿ ವರ್ಣವೈವಿಧ್ಯಮಯವಾಗಿ ಬದುಕುತ್ತಿವೆ. ಈ ಎಲ್ಲ ಜೀವಿಗಳಲ್ಲಿ ಅರಿವು ಹೊಂದಿದ, ಪಂಚೇಂದ್ರಿಯಗಳ ಸಾಕ್ಷಿಯುಳ್ಳ ಮಾನವನ ಉಗಮವು ೨ ದಶಲಕ್ಷ ವರ್ಷಗಳ ಹಿಂದೆ ಆಯಿತು ಮತ್ತು ಆಫ್ರಿಕಾ ಖಂಡವೇ ಈ ಮಾನವ ಜೀವಿಯ ಜನನ ಸ್ಥಳವಾಯಿತು! ಸುಮಾರು ೨೦೦೦ ದಶಲಕ್ಷ ವರ್ಷಗಳ ಹಿಂದೆ ಸಮುದ್ರದಲ್ಲಿ “ಸಣ್ಣ ಬ್ಯಾಕ್ಟೀರಿಯಾಗಳು ಕಾಣಿಸಿಕೊಂಡವು. ಇದೇ ಭೂಮಿಯ ಮೇಲೆ ಕಾಣಿಸಿಕೊಂಡು “ಪ್ರಥಮ ಜೀವಿಗಳು” ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಕಾಲಾನುಕ್ರಮದಲ್ಲಿ ನೆಲದಮೇಲೆ ಸಸ್ಯಗಳು, ಪಾಚಿಗಳೂ, ನೀರಿನಲ್ಲಿ ಹುಳುಗಳೂ ಮತ್ತು ಅಂಬಲಿ ಮೀನಿನಂತಹ ಜೀವಿಗಳೂ ಕಂಡು ಬಂದವು. ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುವುದರ ಮೂಲಕ “ಓಜೋನ್” ಪದರ ರಚನೆಯಾಯಿತು. ಈ ಪದರವು ಸೂರ್ಯನಿಂದ ಹೊರಹೊಮ್ಮಿದ ಅಪಾಯಕಾರಿ ಕಿರಣಗಳನ್ನು ಭೂಮಿಗೆ ತಲುಪದಂತೆ ತಡೆಯುವುದರ ಮೂಲಕ ಜೀವಿಗಳ ಏಳಿಗೆಗೆ ಅನುವು ಮಾಡಿಕೊಟ್ಟಿತು. ಸುಮಾರು ೪೫೦ ದಶಲಕ್ಷ ವರ್ಷಗಳ ಹಿಂದೆ ಜಲಾಂತರಾಳದಲ್ಲಿ ಚಿಪ್ಪನ್ನು ಹೊಂದಿದ “ಟ್ರೈಲೋಬೈಟ್ಸ್‌” ಎಂಬ ಪ್ರಾಣಿಗಳು ಹುಟ್ಟಿಕೊಂಡವು. ಮತ್ತೆ ದಶಲಕ್ಷ ವರ್ಷಗಳ ಹಿಂದೆ ನೀರಿನಲ್ಲಿ ಜೀವಿಗಳು ಅಭಿವೃದ್ಧಿ ಹೊಂದಿದವು. ಇದೇ ವೇಳೆ ನೀರಿನಲ್ಲಿ ಪ್ರಥಮ ಮೀನುಗಳು ಮತ್ತು ನೆಲದ ಮೇಲೆ ‘ಕುಕ್ ಸೋನಿಯಾ’ ಎಂಬ ನಿಜವಾದ ಅಧಿಕೃತ ಸಸ್ಯಗಳು ಹುಟ್ಟಿಕೊಂಡವು.

ಸುಮಾರು ೧೫೦ ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ‘ಡೈನೋಸಾರ್’ಗಳು ಕಾಣಿಸಿಕೊಂಡವು. ಈ ಪ್ರಾಣಿಗಳು ವಿವಿಧ ರೀತಿಯ ಸರಿಸೃಪಗಳನ್ನು ಮತ್ತು ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದ ‘ಟೇರೊಸಾಸರ್’ಗಳನ್ನು ಒಳಗೊಂಡಿದ್ದವು. ಹೆಚ್ಚಿನ ಡೈನೋಸಾಗಳು ಬೃಹದಾಕಾರದ ದೇಹದೊಂದಿಗೆ ಹಾವಿನಂತಹ ತೆಳುವಾದ ಕತ್ತು ಸಣ್ಣ ತಲೆಗಳನ್ನು ಹೊಂದಲಾರಂಭಿಸಿದವು ಸುಮಾರು ೬೫ ದಶಲಕ್ಷವರ್ಷಗಳ ಹಿಂದೆ ‘ಡೈನೋಸಾರ್’ ಅವನತಿ ಹೊಂದುವರೆಗೂ ಭೂಮಿಯ ಮೇಲೆ ಪ್ರಾಣಿ ಮತ್ತು ಸಸ್ಯವರ್ಗಗಳೆರಡಲ್ಲೂ ಈ ಜೀವಿಗಳು ವಿಕಾಸ ಹೊಂದಿದವು. ಹೀಗೆ ಭೂಮಿಯ ಮೇಲೆ ಜೀವಿಗಳ ಜೀವವಿಕಾಸವಾದ
ಚರಿತ್ರೆ ವಿಜ್ಞಾನ ಜಗತ್ತಿನಲ್ಲಿ ಮೂಡಿಬಂದಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...