Home / ಲೇಖನ / ವಿಜ್ಞಾನ / ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಪರಿಸರಕ್ಕೆ ಕಂಟಕ ಪ್ರಾಯವಾಗಿ ವಾಯುಮಾಲಿನ್ಯವನ್ನು ಹದಗೆಡಿಸುವ, ಮತ್ತು ಭೂಮಿಯಲ್ಲಿ ಕರಗದೇ ರೈತರಿಗೆ ವೈರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಎಲ್ಲರಿಗೂ ಗೊತ್ತು. ಇದು ಹೇಗೆ ಮಾಡಿದರೂ ನಾಶ ಹೊಂದಲಾರದು, ಕನಿಷ್ಟ ಮೂರು ನಾಲ್ಕು ನೂರು ವರ್ಷಗಳವರೆಗೆ ಭೂಮಿಯಲ್ಲಿ ಕರಗದೇ ಜಲ ಸಂಚಯಕ್ಕೆ ತೊಡಕಾಗುತ್ತಿತ್ತು ಸುಟ್ಟರೂ ಸಹಿತ ಪರಿಸರ ಕಷ್ಮಲಗೊಳ್ಳುವ ಇಂಗಾಲ ಡೈ ಆಕ್ಸೈಡ್ ಉತ್ಪತ್ತಿಯಾಗಿ ಜನರ ಉಸಿರಾಟಕ್ಕೆ ಮಾರಕವಾಗಿತ್ತು. ಇದರ ನಿರ್ನಾಮಕ್ಕೆ ಮದ್ದೇ ಇರಲಿಲ್ಲ ಎಂಬ ಸಂದರ್ಭದಲ್ಲಿ ಭಾರತೀಯ ಯುವ ವಿಜ್ಞಾನಿ ಪಂಕಜ ಅವಧಿಯು ಅವರ ಈ ಪಾಲಥಿನ್ ಅನ್ನು ಭಕ್ಷಿಸುವ ೪-೫ ಕೀಟಗಳನ್ನು ಶೋಧಿಸಿದ್ದಾರೆ.

ಛತ್ತೀಸಗಡದ ಕೃಷಿ ವಿಜ್ಞಾನಿಯಾದ ಇವರು ಸೊಸೈಟಿ ಫಾರ್ ಪಾರ್ಥೇನಿಯಂ ಮ್ಯಾನೇಜ್‌ಮೆಂಟ್ ಸಂಯೋಜಕರಾಗಿ ತಮ್ಮ ಖಾಸಗಿ ಪ್ರಯೋಗಾಲಯದಲ್ಲಿ ೧೩೫ ವಿವಿಧ ಕೀಟಗಳ ಮೇಲೆ ೨ ವರ್ಷ ಪ್ರಯೋಗ ನಡೆಯಿಸಿದರು. ಕೊನೆಗೆ ೫ ವಿವಿಧ ಕೀಟಗಳು ಪಾಲಿಥಿನ್ ತಿನ್ನುವಂತಹವು ಎಂಬುವುದು ಖಚಿತವಾಯಿತು. ಇದಕ್ಕಾಗಿ ‘ಪ್ಲಾಸ್ಟಿಕ್ ಈಟಿಂಗ್ ಆರ್ಗೆನಿಸಂ ಪರಿಯೋಜನಾ’ ಹುಟ್ಟು ಹಾಕಿದರು. ಈ ಪ್ಲಾಸ್ಬಿಕ್ ತಿನ್ನುವ ಕೀಟಗಳಿಗೆ ‘ಪ್ಲಾಸಿಕ್ ಬಗ್’ ಎಂದು ಹೆಸರಿಸಿದ್ದಾರೆ. ಸದ್ಯಕ್ಕೆ ಈ ಕೀಟದ ಇನ್ನಿತರ ವಿವರಗಳು ಮತ್ತು ಅದರ ವೈಜ್ಞಾನಿಕ ಹೆಸರುಗಳನ್ನು ಅವಧಿಯು ರಹಸ್ಯವಾಗಿ ಇರಿಸಿದ್ದಾರೆ.

೧೯೯೯ ರಲ್ಲಿಯೇ ಈ ಬಗ್ಸ್‌ಗಳನ್ನು ಕಂಡು ಹಿಡಿದರೂ ಇವುಗಳ ಜೀವನ ಚಕ್ರ ಇನ್ನು ವಿಸ್ತಾರವಾದ ಅಧ್ಯಯನಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತೆಂದು ಹೇಳುತ್ತಾರೆ. ಚಳಿಗಾಲದಲ್ಲಿ ಸಕ್ರಿಯವಾಗಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆಂದೂ ಹೇಳುತ್ತಾರೆ. ಈ ಕೀಟಗಳು ೮೦ ವಿವಿಧ ಗಿಡಗಳ ಎಲೆಗಳನ್ನು ತಿನ್ನುವುದರ ಜತೆಗೆ ಅಲ್ಲಿನ ಕೆಲವು ಮುಖ್ಯ ಬೆಳೆಗಳಿಗೆ ವೈರಿಯಾಗಿರುವ ಕಳೆಗಿಡಗಳನ್ನು ತಿಂದು ಹಾಕುತ್ತವೆ. ಇನ್ನೂಂದು ವಿಶೇಷವೆಂದರೆ ಕಪ್ಪು ಬಣ್ಣದ ಪಾಲಿಥಿನ್ ತಿನ್ನುವುದು ಇದರಲ್ಲಿ ಒಂದು ಕೀಟಕ್ಕೆ ಬಹು ಇಷ್ಟವೆಂದು ಹೇಳುತ್ತಾರೆ. ಇವು ಹಣ್ಣಾದ ಮಾವಿನ ಎಲೆಯಂಥಹ ೧೦-೧೨ ಪಾಲಿಥಿನ್ ಎಲೆಗಳನ್ನು ೩-೪ ಗಂಟೆಗಳಲಿ ತುಂಬ ರುಚಿವಹಿಸಿ ತಿನ್ನುತ್ತವೆ ಮತ್ತು ಜೀರ್ಣಿಸಿಕೊಳುತ್ತವೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...