ಬರ್ದಿಲ

ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ
೧ಗಾನಗಳಿಲ್ಲ- ಧಾರಿಣಿ ತನತ್ತುರೆ ಗೆತ್ತಣಮಿಲ್ಲವಿಂದಿಗೆ!
ಕಬ್ಬದೊಳಾದೊಡಂದಿಗೊಗೆತಂದೊಲೆ ನಿಂದಿಹವಿಂದಿಗೆಂದಿಗುಂ –
ಬರ್ದಿನ ವಾರ್ಧಿಯಿಂದೊಸರ್ದಮರ್ದೆನೆ ಕಬ್ಬಮದೊಂದೆ ಬರ್ದಿಲಂ. ೪

ಯಾವೆನಿತೆಲ್ಲ ರಾಜ್ಯವಳಿವೋದುದೊ? ಮಂದಿಯೆ ಕುಂದಿ ಮಾದುದೊ?
ವೀರರ ಕೀರ್ತಿ ನೆತ್ತರೊಳಗಾಳ್ದುದೊ? ಮೂವಿಡಿ ಬೂದಿ ತೂಳ್ದುದೊ?
ತಾನಿದು ತನ್ನದೆಂದವರು ಸಂದರೆ? ಎಂಬವರಿನ್ನು ಕಾಂಬರೆ?-
ಬಂದೊಲೆ ಪೋಪರೆಲ್ಲ; ಬಲುಗಬ್ಬಿಗನೊಬ್ಬನೆ ಬಾಳ್ವ ಬರ್ದಿಲಂ. ೮

ಉಷೆಗೆರವಿತ್ತ ಮುಂಬೆಳಕು ಸಂಜೆಗೆ ನೇಸರನಯ್ದುವಂತೆ ಶ್ರೀ
ರಘುವರನಯ್ದೆ, ಕೊಂಚೆಯೆಣೆಯಾಣ್ಗೆ ಹಲುಂಬಿದನುಷ್ಟುಭಶ್ರುವಿಂ
ದಿಳೆಗಿಳಿತಂದ ಪಾಲ್ಗಡಲೊಳಾತನ ಬರ್ದಿಲ ಕಾದ ಬರ್ದಿಲಂ
ಕವಿಯೆನಲಾರ್ತರುಂಟೆ ಕವಿಯಲ್ಲದೆ ಕೊಳ್ಕೊಡಲಿಂತು ಬರ್ದಿಲಂ? ೧೨

ಕಬ್ಬದೊಳಿಂತು ಕಬ್ಬಿಗನ ಬರ್ದಿಲನೀಕ್ಷಿಸಿ, ವಿಶ್ವಕಾವ್ಯಮಂ
ದಂದಿಗೆ ಸೋಸುವೀ ನೆವದೊಳಾದನೆ ಕಾಲನನಿತ್ತೆ ಬರ್ದಿಲಂ?
*****
೧ ಕಾನ = ನೋಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಕ್ಷಾ ಗೀತೆ
Next post ರಕ್ತದ ಚಲನೆ ಮತ್ತು ಹೃದಯದ ಬಡಿತ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…