ಬರ್ದಿಲ

ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ
೧ಗಾನಗಳಿಲ್ಲ- ಧಾರಿಣಿ ತನತ್ತುರೆ ಗೆತ್ತಣಮಿಲ್ಲವಿಂದಿಗೆ!
ಕಬ್ಬದೊಳಾದೊಡಂದಿಗೊಗೆತಂದೊಲೆ ನಿಂದಿಹವಿಂದಿಗೆಂದಿಗುಂ –
ಬರ್ದಿನ ವಾರ್ಧಿಯಿಂದೊಸರ್ದಮರ್ದೆನೆ ಕಬ್ಬಮದೊಂದೆ ಬರ್ದಿಲಂ. ೪

ಯಾವೆನಿತೆಲ್ಲ ರಾಜ್ಯವಳಿವೋದುದೊ? ಮಂದಿಯೆ ಕುಂದಿ ಮಾದುದೊ?
ವೀರರ ಕೀರ್ತಿ ನೆತ್ತರೊಳಗಾಳ್ದುದೊ? ಮೂವಿಡಿ ಬೂದಿ ತೂಳ್ದುದೊ?
ತಾನಿದು ತನ್ನದೆಂದವರು ಸಂದರೆ? ಎಂಬವರಿನ್ನು ಕಾಂಬರೆ?-
ಬಂದೊಲೆ ಪೋಪರೆಲ್ಲ; ಬಲುಗಬ್ಬಿಗನೊಬ್ಬನೆ ಬಾಳ್ವ ಬರ್ದಿಲಂ. ೮

ಉಷೆಗೆರವಿತ್ತ ಮುಂಬೆಳಕು ಸಂಜೆಗೆ ನೇಸರನಯ್ದುವಂತೆ ಶ್ರೀ
ರಘುವರನಯ್ದೆ, ಕೊಂಚೆಯೆಣೆಯಾಣ್ಗೆ ಹಲುಂಬಿದನುಷ್ಟುಭಶ್ರುವಿಂ
ದಿಳೆಗಿಳಿತಂದ ಪಾಲ್ಗಡಲೊಳಾತನ ಬರ್ದಿಲ ಕಾದ ಬರ್ದಿಲಂ
ಕವಿಯೆನಲಾರ್ತರುಂಟೆ ಕವಿಯಲ್ಲದೆ ಕೊಳ್ಕೊಡಲಿಂತು ಬರ್ದಿಲಂ? ೧೨

ಕಬ್ಬದೊಳಿಂತು ಕಬ್ಬಿಗನ ಬರ್ದಿಲನೀಕ್ಷಿಸಿ, ವಿಶ್ವಕಾವ್ಯಮಂ
ದಂದಿಗೆ ಸೋಸುವೀ ನೆವದೊಳಾದನೆ ಕಾಲನನಿತ್ತೆ ಬರ್ದಿಲಂ?
*****
೧ ಕಾನ = ನೋಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಕ್ಷಾ ಗೀತೆ
Next post ರಕ್ತದ ಚಲನೆ ಮತ್ತು ಹೃದಯದ ಬಡಿತ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…