Home / ಲೇಖನ / ವಿಜ್ಞಾನ / ರಕ್ತದ ಚಲನೆ ಮತ್ತು ಹೃದಯದ ಬಡಿತ

ರಕ್ತದ ಚಲನೆ ಮತ್ತು ಹೃದಯದ ಬಡಿತ

ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್‌ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್‍ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (೨೦೦ ರಿಂದ ೧೨೦೦ ಜಾನ್ಸ್)ವರೆಗೂ ಏರುಪೇರಾಗಬಹುದು. ಸರಾಸರಿ ಒಂದು ನಿಮಿಷದಲ್ಲಾಗುವ ೭೦ ಬಡಿತದಲ್ಲಿ ಸು ೫೦೦೦ ಗ್ರಾಂ. ೧೫ ಕೆ.ಜಿ.) ಆಗುತ್ತದೆ. ಇದೇ ಲೆಕ್ಕದಲ್ಲಿ ಮುಂದುವರಿದು ನೋಡಿದಾಗ ಒಂದು ವರ್ಷದಲ್ಲಿ ಸು. ೬ ಲಕ್ಷ ೮೦ ಸಾವಿರ ಗ್ರ್ಯಾಮ್ ಅಥವಾ ೩೧ ಲಕ್ಷ ಲೀಟರ್ ನಷ್ಟು ರಕ್ತ ಪಂಪ್ ಆಗಿರುವುದನ್ನು ಕಂಡು ಯಾರೊಬ್ಬರಿಗೂ ಈ ಅದ್ಭುತ ಪಂಪ್ ಬಗ್ಗೆ ಅಶ್ಚರ್‍ಯ ಅನ್ನಿಸದೇ ಇರಲಾರರು. ರಕ್ತ ಹೃದಯದಿಂದ ಕಾಲಿನವರೆಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಬರುತ್ತದೆ. ಈ ಅಂಶವನ್ನು ಮೊದಲಿಗೆ ಹೊರಗೆಡವಿದ್ದವರು ವಿಲಿಯಂ ಹಾರ್‍ವೆ (೧೫೭೮-೧೬೭೫) ಆದರೆ ಇವನು ಹೃದಯದ ಬಡಿತದ ಬಗೆಗೆ ತಿಳಿಯಲಾಗದೇ ಹತಾಶನಾಗಿದ್ದ. ರಕ್ತ ಹೃದಯದಿಂದ ತದೇಕವಾಗಿ ಪಂಪ್ ಆಗಿದ್ದರೆ ದೇಹದ ಯಾವುದೇ ಜೀವಕೋಶಗಳನ್ನು ಜೀವಂತವಾಗಿಯೂ ಚುರುಕಾಗಿಯೂ ಇಡಲು ಸಾಧ್ಯವಿಲ್ಲ ಜೀವಕೋಶಗಳ ಉಳುವಿಗೆ ಬೇಕಾದ ಆಮ್ಲಜನಕ ಈ ರಕ್ತದಿಂದ ಒದಗುತ್ತಿರುತ್ತದೆ. ಆಮ್ಲಜನಕ ರಕ್ತ ದೇಹದ ಎಲ್ಲ ಜೀವಕೋಶಗಳಿಗೂ ತಲುಪಿ ಅಲ್ಲಿಂದ ಆಮ್ಲ ಜನಕಕಳೆದುಕೊಂಡ ರಕ್ತಹೃದಯದ ಮೇಲ್ಬಾಗದ ಬಲ ಕವಾಟಿಗೆ ಬರುತ್ತದೆ. ಈ ಭಾಗಕ್ಕೆ ಬಂದ ರಕ್ತ ಬಲ ಶ್ವಾಸಕೋಶಕ್ಕೆ ಪಂಪ್ ಆಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...