Home / ಲೇಖನ / ವಿಜ್ಞಾನ / ರಕ್ತದ ಚಲನೆ ಮತ್ತು ಹೃದಯದ ಬಡಿತ

ರಕ್ತದ ಚಲನೆ ಮತ್ತು ಹೃದಯದ ಬಡಿತ

ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್‌ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್‍ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (೨೦೦ ರಿಂದ ೧೨೦೦ ಜಾನ್ಸ್)ವರೆಗೂ ಏರುಪೇರಾಗಬಹುದು. ಸರಾಸರಿ ಒಂದು ನಿಮಿಷದಲ್ಲಾಗುವ ೭೦ ಬಡಿತದಲ್ಲಿ ಸು ೫೦೦೦ ಗ್ರಾಂ. ೧೫ ಕೆ.ಜಿ.) ಆಗುತ್ತದೆ. ಇದೇ ಲೆಕ್ಕದಲ್ಲಿ ಮುಂದುವರಿದು ನೋಡಿದಾಗ ಒಂದು ವರ್ಷದಲ್ಲಿ ಸು. ೬ ಲಕ್ಷ ೮೦ ಸಾವಿರ ಗ್ರ್ಯಾಮ್ ಅಥವಾ ೩೧ ಲಕ್ಷ ಲೀಟರ್ ನಷ್ಟು ರಕ್ತ ಪಂಪ್ ಆಗಿರುವುದನ್ನು ಕಂಡು ಯಾರೊಬ್ಬರಿಗೂ ಈ ಅದ್ಭುತ ಪಂಪ್ ಬಗ್ಗೆ ಅಶ್ಚರ್‍ಯ ಅನ್ನಿಸದೇ ಇರಲಾರರು. ರಕ್ತ ಹೃದಯದಿಂದ ಕಾಲಿನವರೆಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಬರುತ್ತದೆ. ಈ ಅಂಶವನ್ನು ಮೊದಲಿಗೆ ಹೊರಗೆಡವಿದ್ದವರು ವಿಲಿಯಂ ಹಾರ್‍ವೆ (೧೫೭೮-೧೬೭೫) ಆದರೆ ಇವನು ಹೃದಯದ ಬಡಿತದ ಬಗೆಗೆ ತಿಳಿಯಲಾಗದೇ ಹತಾಶನಾಗಿದ್ದ. ರಕ್ತ ಹೃದಯದಿಂದ ತದೇಕವಾಗಿ ಪಂಪ್ ಆಗಿದ್ದರೆ ದೇಹದ ಯಾವುದೇ ಜೀವಕೋಶಗಳನ್ನು ಜೀವಂತವಾಗಿಯೂ ಚುರುಕಾಗಿಯೂ ಇಡಲು ಸಾಧ್ಯವಿಲ್ಲ ಜೀವಕೋಶಗಳ ಉಳುವಿಗೆ ಬೇಕಾದ ಆಮ್ಲಜನಕ ಈ ರಕ್ತದಿಂದ ಒದಗುತ್ತಿರುತ್ತದೆ. ಆಮ್ಲಜನಕ ರಕ್ತ ದೇಹದ ಎಲ್ಲ ಜೀವಕೋಶಗಳಿಗೂ ತಲುಪಿ ಅಲ್ಲಿಂದ ಆಮ್ಲ ಜನಕಕಳೆದುಕೊಂಡ ರಕ್ತಹೃದಯದ ಮೇಲ್ಬಾಗದ ಬಲ ಕವಾಟಿಗೆ ಬರುತ್ತದೆ. ಈ ಭಾಗಕ್ಕೆ ಬಂದ ರಕ್ತ ಬಲ ಶ್ವಾಸಕೋಶಕ್ಕೆ ಪಂಪ್ ಆಗುತ್ತದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...