ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (೨೦೦ ರಿಂದ ೧೨೦೦ ಜಾನ್ಸ್)ವರೆಗೂ ಏರುಪೇರಾಗಬಹುದು. ಸರಾಸರಿ ಒಂದು ನಿಮಿಷದಲ್ಲಾಗುವ ೭೦ ಬಡಿತದಲ್ಲಿ ಸು ೫೦೦೦ ಗ್ರಾಂ. ೧೫ ಕೆ.ಜಿ.) ಆಗುತ್ತದೆ. ಇದೇ ಲೆಕ್ಕದಲ್ಲಿ ಮುಂದುವರಿದು ನೋಡಿದಾಗ ಒಂದು ವರ್ಷದಲ್ಲಿ ಸು. ೬ ಲಕ್ಷ ೮೦ ಸಾವಿರ ಗ್ರ್ಯಾಮ್ ಅಥವಾ ೩೧ ಲಕ್ಷ ಲೀಟರ್ ನಷ್ಟು ರಕ್ತ ಪಂಪ್ ಆಗಿರುವುದನ್ನು ಕಂಡು ಯಾರೊಬ್ಬರಿಗೂ ಈ ಅದ್ಭುತ ಪಂಪ್ ಬಗ್ಗೆ ಅಶ್ಚರ್ಯ ಅನ್ನಿಸದೇ ಇರಲಾರರು. ರಕ್ತ ಹೃದಯದಿಂದ ಕಾಲಿನವರೆಗೆ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿಯೇ ಬರುತ್ತದೆ. ಈ ಅಂಶವನ್ನು ಮೊದಲಿಗೆ ಹೊರಗೆಡವಿದ್ದವರು ವಿಲಿಯಂ ಹಾರ್ವೆ (೧೫೭೮-೧೬೭೫) ಆದರೆ ಇವನು ಹೃದಯದ ಬಡಿತದ ಬಗೆಗೆ ತಿಳಿಯಲಾಗದೇ ಹತಾಶನಾಗಿದ್ದ. ರಕ್ತ ಹೃದಯದಿಂದ ತದೇಕವಾಗಿ ಪಂಪ್ ಆಗಿದ್ದರೆ ದೇಹದ ಯಾವುದೇ ಜೀವಕೋಶಗಳನ್ನು ಜೀವಂತವಾಗಿಯೂ ಚುರುಕಾಗಿಯೂ ಇಡಲು ಸಾಧ್ಯವಿಲ್ಲ ಜೀವಕೋಶಗಳ ಉಳುವಿಗೆ ಬೇಕಾದ ಆಮ್ಲಜನಕ ಈ ರಕ್ತದಿಂದ ಒದಗುತ್ತಿರುತ್ತದೆ. ಆಮ್ಲಜನಕ ರಕ್ತ ದೇಹದ ಎಲ್ಲ ಜೀವಕೋಶಗಳಿಗೂ ತಲುಪಿ ಅಲ್ಲಿಂದ ಆಮ್ಲ ಜನಕಕಳೆದುಕೊಂಡ ರಕ್ತಹೃದಯದ ಮೇಲ್ಬಾಗದ ಬಲ ಕವಾಟಿಗೆ ಬರುತ್ತದೆ. ಈ ಭಾಗಕ್ಕೆ ಬಂದ ರಕ್ತ ಬಲ ಶ್ವಾಸಕೋಶಕ್ಕೆ ಪಂಪ್ ಆಗುತ್ತದೆ.
*****
Related Post
ಸಣ್ಣ ಕತೆ
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…