ಕಂಡಿದ್ದೇನೆ ನಾನು

ಧರ್‍ಮದ ಠೇಕೇದಾರರಿಂದ
ಭೂಮಿಯ ಮೇಲೆ ದೆವ್ವದ ಕುಣಿತ
ನೋಡಿದ್ದೇನೆ ನಾನು!
ಗುಜರಾತಿನ ನರಮೇಧದಲ್ಲಿ
ಮನುಷ್ಯತ್ವದ ಕತ್ತು
ನಾಚಿಕೆಯಿಂದ ಕೆಳಗಾಗಿದ್ದನ್ನು
ಕಂಡಿದ್ದೇನೆ ನಾನು!
ಧರ್‍ಮ ರಾಜಕೀಯದಲಿ ಅಧರ್‍ಮದ
ಕತ್ತಿ ಝಾಳಪಿಸಿದ ಗುಜರಾತನು
ಕಣ್ಣಾರೆ ಕಂಡಿದ್ದೇನೆ ನಾನು!
ತುಂಬು ಗರ್‍ಭಿಣಿಯ ಹೊಟ್ಟೆಸೀಳಿ
ಹೊರ ತೆಗೆದ ಮಗುವಿಗೆ
ಚುಚ್ಚಿ ಚುಚ್ಚಿ ಸಾಯಿಸಿದ ಪಾತಕಿಗಳನ್ನು
ಕಣ್ಣಾರೆ ಕಂಡಿದ್ದೇನೆ ನಾನು
ಗುಜರಾತಿನ ರಾಜಬೀದಿಗಳಲ್ಲಿ
ಮಾನಿನಿಯ ಮಾನ ಹರಜಾದದ್ದನ್ನು
ಕಂಡಿದ್ದೇನೆ ನಾನು
ಯುವಕ, ಮುದುಕ, ಮಹಿಳೆಯರ
ರಕ್ತದ ಹೊಳೆ ಹರಿಸಿದ್ದನ್ನು
ಕಂಡಿದ್ದೇನೆ ನಾನು
ದೇಶ ವಿಭಜನೆಯಾದಾಗ
ತಾಪಿ, ನರ್‍ಮದೆಯ ಅಲೆಗಳಲ್ಲಿ
ತೇಲಿ ಹೋಗುತ್ತಿರುವ ಹೆಣಗಳನ್ನು
ಕಣ್ಣಾರೆ ಕಂಡಿದ್ದೇನೆ ನಾನು

ಸಾಯುವಾಗಿನ ನೋವಿನ ಆರ್‍ತನಾದ
ರಕ್ಷಕರ ಎದುರಿನಲ್ಲೇ ಬಿಕ್ಕುತ್ತಿರುವ
ಮನುಷ್ಯತ್ವದ ಕಂಡಿದ್ದೇನೆ ನಾನು
ಗುಜರಾತಿನ ಗಲ್ಲಿಗಳಲ್ಲಿ
ಸುಟ್ಟು ಕರಕಲಾಗುತ್ತಿರುವ
ಮನುಷ್ಯತ್ವ ಕಣ್ಣಾರೆ ಕಂಡಿದ್ದೇನೆ ನಾನು.

ಲೋಕವೇ ಕಣ್ಣಾರೆ ಕಂಡಿದೆ
ಗುಜರಾತಿನಲಿ ಕರಗಿ ಹೋದ
ಮಾನವೀಯತೆಯ ಚಿಗುರುಗಳ
ಅವನ ಅಂತ್ಯದ ದಿನಗಳಲಿ
ಕಟಕಟೆಯಲ್ಲಿ ನಿಲ್ಲಿಸಿ ಕೇಳುವೆ
ನಿರಪರಾಧಿಗಳ ರಕ್ತ ಹರಿಸಿದ್ದಕ್ಕೆ
ನಿನಗೆ ದೊರಕಿದ್ದಾದರೂ ಏನು?
ನಿನ್ನ ರಾಮನಿಗೆ ತೋರಿಸುವುದಕೆ
ನಿನಗೆ ಮುಖವಾದರೂ ಇದೆಯೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತದ ಚಲನೆ ಮತ್ತು ಹೃದಯದ ಬಡಿತ
Next post ನಿರೀಶ್ವರನನ್ನು ಕುರಿತು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…