ದೀಕ್ಷಾ ಗೀತೆ

ತಡೆಯುವ ಬನ್ನಿ ಸೋದರರೆ
ಕನ್ನಡ ತಾಯಿಯ ಕಣ್ಣೀರ
ಬಾಡಿದ ಆ ಕಣ್ಣುಗಳಲ್ಲಿ
ಹರಿಸಲು ಇಂದೇ ಪನ್ನೀರ
ಬೆಳಗಾವಿಯನು ಉಳಿಸುತಲಿ
ಸ್ವಾಭಿಮಾನವ ಮೆರೆಸೋಣ
ಪರಭಾಷಾ ಕಳೆ ಕೀಳುತಲಿ
ನಮ್ಮತನವನು ಬೆಳೆಸೋಣ
ಕನ್ನಡ ನಾಡನು ಕಾಯುತಲಿ
ಕನ್ನಡ ತಾಯಿಯ ಉಳಿಸೋಣ
ನಲುಗಿದ ಆ ಕಣ್ಣುಗಳಲ್ಲಿ
ನಲ್ಮೆಯ ಧಾರೆ ಹರಿಸೋಣ
ಕಾವೇರಿಯನು ತಡೆಯುತಲಿ
ನಮ್ಮಯ ನ್ಯಾಯವ ಗಳಿಸೋಣ
ಧ್ವನಿ ಎತ್ತುತ್ತ ಆ ಕೇಂದ್ರದಲಿ
ಕರ್ನಾಟಕವ ಕಾಯೋಣ
ಕನ್ನಡ ಶಕ್ತಿಯ ತೋರುತಲಿ
ಅನ್ಯಾಯಗಳ ಮೆಟ್ಟೋಣ
ಸೊರಗಿದ ತಾಯಿಯ ಕಂಗಳಲಿ
ಆಶಾ ಜ್ಯೋತಿಯ ಬೆಳಗೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾಮಿ ಯಾಕೆ ಮಾತಾಡಲಿಲ್ಲ?
Next post ಬರ್ದಿಲ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…