ಸಂತರಾಗದವರು

ಸಂತೆ ಗದ್ದಲದಲಿ ಕೂತು
ಸಂತರಾಗುವ ಹುಚ್ಚು!

ನೂರಾರು ಆಮಿಷಗಳ
ಚುಂಬಕ ಸೆಳೆತದಲೂ
ಏನೂ ಬೇಡೆನುತ
ಕಣ್ಮುಚ್ಚಿ ಕುಳಿತರೂ
ಮತ್ತದೇ ಸೆಳೆವ
ಬಣ್ಣದ ಚಿತ್ರಗಳು.

ಗಳಿಗೆಗೊಮ್ಮೆ
ಅಲ್ಲಿಲ್ಲಿ ಹಾರುವ
ಹುಚ್ಚು ಮನಸಿಗೆ
ಕಲಿಸುವುದೆಂತು
ಸ್ಥಿತಪ್ರಜ್ಞತೆಯ ಪಾಠ?
ನಿರ್ಲಿಪ್ತತೆಯ ಮುಗಿಯದಧ್ಯಾಯ?

ಸಂತರಾಗಬೇಕೆಂದರೆ
ಸಂತೆಯದೆಲ್ಲಾ ಆಮಿಷ ಕೊಡವಿ
ಬಯಲಿಗೆ ಮುಖ ಮಾಡಬೇಕೇ?
ಸಂತರಾಗುವ
ಬಯಕೆಯೇ ಬರಿಯ ಬಯಲೇ?

ಸೂಜಿಗಲ್ಲಿನ ಸೆಳೆತಕ್ಕೆ
ಹೆದರಿ ಓಡುವವ ಹೇಡಿ
ಇದರಲ್ಲೇ ಇದ್ದು
ಇದನ್ನೇ ಗೆದ್ದು
ನಿಲ್ಲುವವನೇ ಧೀರ
ಎಂದೋ ಯಾರೋ ಹೇಳಿದ
ತತ್ವ ತಲೆಹೊಕ್ಕು
ಮತ್ತದೇ ಸಂತೆಯೊಳಗೆ ಬಿದ್ದು
ಇನ್ನಾವುದೂ ಬೇಡ
ಎಂದೆನ್ನುತ್ತೆನ್ನುತ್ತಲೇ
ಏಳುವಾಗಲೆಲ್ಲಾ ಮತ್ತೆಮತ್ತೆ
ಅದರಲ್ಲೇ ಜಾರಿ.

ಇತಿಹಾಸಕ್ಕೆ ಮಾನ್ಯರಾಗದೇ
ಸಂತೆಯೊಳಗೂ ಲೆಕ್ಕಕ್ಕೆ ಸಿಗದೇ
ಇತ್ತ ಸಂತರೂ ಆಗದೇ
ಅತ್ತ ಸಂತೆಗೂ ನಿಷ್ಠರಾಗದೇ
ಉಳಿದು ಬಿಡುವ
ಇವರು ಸಂತೆನುಂಗಿದ
ಸಂತರಾಗದವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವು ಜೋಕು
Next post ಪೋಲಿಟ್ರಿಕ್ಟ್ ಸೀರಿಯಸ್ ಆಗಿ ತಗಾತೀನಿ ಅಂದ ರೆಬಲ್‌ಸ್ಟಾರು

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…