Home / ಕವನ / ಕವಿತೆ / ಸಂತರಾಗದವರು

ಸಂತರಾಗದವರು

ಸಂತೆ ಗದ್ದಲದಲಿ ಕೂತು
ಸಂತರಾಗುವ ಹುಚ್ಚು!

ನೂರಾರು ಆಮಿಷಗಳ
ಚುಂಬಕ ಸೆಳೆತದಲೂ
ಏನೂ ಬೇಡೆನುತ
ಕಣ್ಮುಚ್ಚಿ ಕುಳಿತರೂ
ಮತ್ತದೇ ಸೆಳೆವ
ಬಣ್ಣದ ಚಿತ್ರಗಳು.

ಗಳಿಗೆಗೊಮ್ಮೆ
ಅಲ್ಲಿಲ್ಲಿ ಹಾರುವ
ಹುಚ್ಚು ಮನಸಿಗೆ
ಕಲಿಸುವುದೆಂತು
ಸ್ಥಿತಪ್ರಜ್ಞತೆಯ ಪಾಠ?
ನಿರ್ಲಿಪ್ತತೆಯ ಮುಗಿಯದಧ್ಯಾಯ?

ಸಂತರಾಗಬೇಕೆಂದರೆ
ಸಂತೆಯದೆಲ್ಲಾ ಆಮಿಷ ಕೊಡವಿ
ಬಯಲಿಗೆ ಮುಖ ಮಾಡಬೇಕೇ?
ಸಂತರಾಗುವ
ಬಯಕೆಯೇ ಬರಿಯ ಬಯಲೇ?

ಸೂಜಿಗಲ್ಲಿನ ಸೆಳೆತಕ್ಕೆ
ಹೆದರಿ ಓಡುವವ ಹೇಡಿ
ಇದರಲ್ಲೇ ಇದ್ದು
ಇದನ್ನೇ ಗೆದ್ದು
ನಿಲ್ಲುವವನೇ ಧೀರ
ಎಂದೋ ಯಾರೋ ಹೇಳಿದ
ತತ್ವ ತಲೆಹೊಕ್ಕು
ಮತ್ತದೇ ಸಂತೆಯೊಳಗೆ ಬಿದ್ದು
ಇನ್ನಾವುದೂ ಬೇಡ
ಎಂದೆನ್ನುತ್ತೆನ್ನುತ್ತಲೇ
ಏಳುವಾಗಲೆಲ್ಲಾ ಮತ್ತೆಮತ್ತೆ
ಅದರಲ್ಲೇ ಜಾರಿ.

ಇತಿಹಾಸಕ್ಕೆ ಮಾನ್ಯರಾಗದೇ
ಸಂತೆಯೊಳಗೂ ಲೆಕ್ಕಕ್ಕೆ ಸಿಗದೇ
ಇತ್ತ ಸಂತರೂ ಆಗದೇ
ಅತ್ತ ಸಂತೆಗೂ ನಿಷ್ಠರಾಗದೇ
ಉಳಿದು ಬಿಡುವ
ಇವರು ಸಂತೆನುಂಗಿದ
ಸಂತರಾಗದವರು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...