ಸಂತರಾಗದವರು

ಸಂತೆ ಗದ್ದಲದಲಿ ಕೂತು
ಸಂತರಾಗುವ ಹುಚ್ಚು!

ನೂರಾರು ಆಮಿಷಗಳ
ಚುಂಬಕ ಸೆಳೆತದಲೂ
ಏನೂ ಬೇಡೆನುತ
ಕಣ್ಮುಚ್ಚಿ ಕುಳಿತರೂ
ಮತ್ತದೇ ಸೆಳೆವ
ಬಣ್ಣದ ಚಿತ್ರಗಳು.

ಗಳಿಗೆಗೊಮ್ಮೆ
ಅಲ್ಲಿಲ್ಲಿ ಹಾರುವ
ಹುಚ್ಚು ಮನಸಿಗೆ
ಕಲಿಸುವುದೆಂತು
ಸ್ಥಿತಪ್ರಜ್ಞತೆಯ ಪಾಠ?
ನಿರ್ಲಿಪ್ತತೆಯ ಮುಗಿಯದಧ್ಯಾಯ?

ಸಂತರಾಗಬೇಕೆಂದರೆ
ಸಂತೆಯದೆಲ್ಲಾ ಆಮಿಷ ಕೊಡವಿ
ಬಯಲಿಗೆ ಮುಖ ಮಾಡಬೇಕೇ?
ಸಂತರಾಗುವ
ಬಯಕೆಯೇ ಬರಿಯ ಬಯಲೇ?

ಸೂಜಿಗಲ್ಲಿನ ಸೆಳೆತಕ್ಕೆ
ಹೆದರಿ ಓಡುವವ ಹೇಡಿ
ಇದರಲ್ಲೇ ಇದ್ದು
ಇದನ್ನೇ ಗೆದ್ದು
ನಿಲ್ಲುವವನೇ ಧೀರ
ಎಂದೋ ಯಾರೋ ಹೇಳಿದ
ತತ್ವ ತಲೆಹೊಕ್ಕು
ಮತ್ತದೇ ಸಂತೆಯೊಳಗೆ ಬಿದ್ದು
ಇನ್ನಾವುದೂ ಬೇಡ
ಎಂದೆನ್ನುತ್ತೆನ್ನುತ್ತಲೇ
ಏಳುವಾಗಲೆಲ್ಲಾ ಮತ್ತೆಮತ್ತೆ
ಅದರಲ್ಲೇ ಜಾರಿ.

ಇತಿಹಾಸಕ್ಕೆ ಮಾನ್ಯರಾಗದೇ
ಸಂತೆಯೊಳಗೂ ಲೆಕ್ಕಕ್ಕೆ ಸಿಗದೇ
ಇತ್ತ ಸಂತರೂ ಆಗದೇ
ಅತ್ತ ಸಂತೆಗೂ ನಿಷ್ಠರಾಗದೇ
ಉಳಿದು ಬಿಡುವ
ಇವರು ಸಂತೆನುಂಗಿದ
ಸಂತರಾಗದವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವು ಜೋಕು
Next post ಪೋಲಿಟ್ರಿಕ್ಟ್ ಸೀರಿಯಸ್ ಆಗಿ ತಗಾತೀನಿ ಅಂದ ರೆಬಲ್‌ಸ್ಟಾರು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys