ಕತ್ತಲೆಯ ತಕರಾರು

ಕತ್ತಲೆ ರಾತ್ರಿ
ಘನಘೋರ ಕಡುರಾತ್ರಿ
ದಶ ದಿಕ್ಕುಗಳೆಲ್ಲ
ಕಪ್ಪು ಹಚ್ಚಡ ಹೊದ್ದು
ಮೌನದ ಮಂಜುಗಡ್ಡೆ
ಕರಗಿ ಹನಿಹನಿಯಾಗಿ
ಒಂದೊಂದಾಗಿ ತೊಟ್ಟಿಕ್ಕಿ
ಹೆಪ್ಪುಗಟ್ಟಿದ ಕಪ್ಪು
ಕರಾಳತೆಯನು ಘನೀಕರಿಸಿ
ಪಟಪಟನೆ ಬೀಳುವ
ಮಳೆ ಹನಿಗಳ ಶಬ್ದ
ಸಮುದ್ರ ತೀರದ ಅಲೆಗಳ ಅಬ್ಬರ
ಹಬ್ಬಿದ ಮರಳ ಗುಡ್ಡೆದಾಟಿ ಬರಲು
ಅಲೆಗಳ ಅವಿರತ ಪ್ರಯತ್ನ
ಏರುಪೇರುಗಳ ಸಮವಾಗಿಸಲು
ನದಿಯ ಅಂತರಂಗದ ಲೋಕ
ಕಪ್ಪೆಗಳ ವಟಗಟ್ಟುವಿಕೆ
ಜೀಕಿದ ತೊಟ್ಟಿಲ ಹಗ್ಗದ ಶಬ್ದ
ಜೀರುಂಡೆಗಳ ಝೇಂಕಾರ
ಹೆಪ್ಪುಗಟ್ಟಿದ ಕತ್ತಲೆ ಸೀಳಿ
ಮಿಂಚು, ಗುಡುಗು, ಸಿಡಿಲು
ತೆಂಗಿನ ತೋಪುಗಳ ನಡುವಲ್ಲಿ
ನಡುಕ ಹುಟ್ಟಿಸಿದ ರಾತ್ರಿ
ಸುಳಿಬಾಳೆ ಎಳೆಬಾಳೆ ಎಲೆ ತೋಟ
ಕಂಪಿಸಿದ ಕಡು ರಾತ್ರಿಯಲಿ
ಬೆಚ್ಚನೆಯ ಹಚ್ಚಡ ಸುಖ ಬಯಸಿದ
ಕಪ್ಪು ನೆರಳುಗಳು ಅಪ್ಪಿಕೊಂಡವು.
ರಾತ್ರಿ ದೀಪ ಆರದ್ದಿದ್ದರೆ
ಬೈರಾಗಿ ದೀಪಗಳ ತಕರಾರೇನು?
ದಿನವೋ ಹಗಲು ರಾತ್ರಿಗಳು
ಹುಟ್ಟುತ್ತವೆ ಸಾಯುತ್ತವೆ
ಹಿಗ್ಗುತ್ತವೆ ಕುಗ್ಗುತ್ತವೆ ನೆರಳು
ಕತ್ತಲೆಯ ತಕರಾರೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಟಗಾತಿಯರ ಕತೆ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…