Home / ಕವನ / ಕವಿತೆ / ಕತ್ತಲೆಯ ತಕರಾರು

ಕತ್ತಲೆಯ ತಕರಾರು

ಕತ್ತಲೆ ರಾತ್ರಿ
ಘನಘೋರ ಕಡುರಾತ್ರಿ
ದಶ ದಿಕ್ಕುಗಳೆಲ್ಲ
ಕಪ್ಪು ಹಚ್ಚಡ ಹೊದ್ದು
ಮೌನದ ಮಂಜುಗಡ್ಡೆ
ಕರಗಿ ಹನಿಹನಿಯಾಗಿ
ಒಂದೊಂದಾಗಿ ತೊಟ್ಟಿಕ್ಕಿ
ಹೆಪ್ಪುಗಟ್ಟಿದ ಕಪ್ಪು
ಕರಾಳತೆಯನು ಘನೀಕರಿಸಿ
ಪಟಪಟನೆ ಬೀಳುವ
ಮಳೆ ಹನಿಗಳ ಶಬ್ದ
ಸಮುದ್ರ ತೀರದ ಅಲೆಗಳ ಅಬ್ಬರ
ಹಬ್ಬಿದ ಮರಳ ಗುಡ್ಡೆದಾಟಿ ಬರಲು
ಅಲೆಗಳ ಅವಿರತ ಪ್ರಯತ್ನ
ಏರುಪೇರುಗಳ ಸಮವಾಗಿಸಲು
ನದಿಯ ಅಂತರಂಗದ ಲೋಕ
ಕಪ್ಪೆಗಳ ವಟಗಟ್ಟುವಿಕೆ
ಜೀಕಿದ ತೊಟ್ಟಿಲ ಹಗ್ಗದ ಶಬ್ದ
ಜೀರುಂಡೆಗಳ ಝೇಂಕಾರ
ಹೆಪ್ಪುಗಟ್ಟಿದ ಕತ್ತಲೆ ಸೀಳಿ
ಮಿಂಚು, ಗುಡುಗು, ಸಿಡಿಲು
ತೆಂಗಿನ ತೋಪುಗಳ ನಡುವಲ್ಲಿ
ನಡುಕ ಹುಟ್ಟಿಸಿದ ರಾತ್ರಿ
ಸುಳಿಬಾಳೆ ಎಳೆಬಾಳೆ ಎಲೆ ತೋಟ
ಕಂಪಿಸಿದ ಕಡು ರಾತ್ರಿಯಲಿ
ಬೆಚ್ಚನೆಯ ಹಚ್ಚಡ ಸುಖ ಬಯಸಿದ
ಕಪ್ಪು ನೆರಳುಗಳು ಅಪ್ಪಿಕೊಂಡವು.
ರಾತ್ರಿ ದೀಪ ಆರದ್ದಿದ್ದರೆ
ಬೈರಾಗಿ ದೀಪಗಳ ತಕರಾರೇನು?
ದಿನವೋ ಹಗಲು ರಾತ್ರಿಗಳು
ಹುಟ್ಟುತ್ತವೆ ಸಾಯುತ್ತವೆ
ಹಿಗ್ಗುತ್ತವೆ ಕುಗ್ಗುತ್ತವೆ ನೆರಳು
ಕತ್ತಲೆಯ ತಕರಾರೇನು?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...