Home / ಕವನ / ಕವಿತೆ / ಕತ್ತಲೆಯ ತಕರಾರು

ಕತ್ತಲೆಯ ತಕರಾರು

ಕತ್ತಲೆ ರಾತ್ರಿ
ಘನಘೋರ ಕಡುರಾತ್ರಿ
ದಶ ದಿಕ್ಕುಗಳೆಲ್ಲ
ಕಪ್ಪು ಹಚ್ಚಡ ಹೊದ್ದು
ಮೌನದ ಮಂಜುಗಡ್ಡೆ
ಕರಗಿ ಹನಿಹನಿಯಾಗಿ
ಒಂದೊಂದಾಗಿ ತೊಟ್ಟಿಕ್ಕಿ
ಹೆಪ್ಪುಗಟ್ಟಿದ ಕಪ್ಪು
ಕರಾಳತೆಯನು ಘನೀಕರಿಸಿ
ಪಟಪಟನೆ ಬೀಳುವ
ಮಳೆ ಹನಿಗಳ ಶಬ್ದ
ಸಮುದ್ರ ತೀರದ ಅಲೆಗಳ ಅಬ್ಬರ
ಹಬ್ಬಿದ ಮರಳ ಗುಡ್ಡೆದಾಟಿ ಬರಲು
ಅಲೆಗಳ ಅವಿರತ ಪ್ರಯತ್ನ
ಏರುಪೇರುಗಳ ಸಮವಾಗಿಸಲು
ನದಿಯ ಅಂತರಂಗದ ಲೋಕ
ಕಪ್ಪೆಗಳ ವಟಗಟ್ಟುವಿಕೆ
ಜೀಕಿದ ತೊಟ್ಟಿಲ ಹಗ್ಗದ ಶಬ್ದ
ಜೀರುಂಡೆಗಳ ಝೇಂಕಾರ
ಹೆಪ್ಪುಗಟ್ಟಿದ ಕತ್ತಲೆ ಸೀಳಿ
ಮಿಂಚು, ಗುಡುಗು, ಸಿಡಿಲು
ತೆಂಗಿನ ತೋಪುಗಳ ನಡುವಲ್ಲಿ
ನಡುಕ ಹುಟ್ಟಿಸಿದ ರಾತ್ರಿ
ಸುಳಿಬಾಳೆ ಎಳೆಬಾಳೆ ಎಲೆ ತೋಟ
ಕಂಪಿಸಿದ ಕಡು ರಾತ್ರಿಯಲಿ
ಬೆಚ್ಚನೆಯ ಹಚ್ಚಡ ಸುಖ ಬಯಸಿದ
ಕಪ್ಪು ನೆರಳುಗಳು ಅಪ್ಪಿಕೊಂಡವು.
ರಾತ್ರಿ ದೀಪ ಆರದ್ದಿದ್ದರೆ
ಬೈರಾಗಿ ದೀಪಗಳ ತಕರಾರೇನು?
ದಿನವೋ ಹಗಲು ರಾತ್ರಿಗಳು
ಹುಟ್ಟುತ್ತವೆ ಸಾಯುತ್ತವೆ
ಹಿಗ್ಗುತ್ತವೆ ಕುಗ್ಗುತ್ತವೆ ನೆರಳು
ಕತ್ತಲೆಯ ತಕರಾರೇನು?
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...