ನುಡಿಮನವೆ

ನುಡಿ ಮನವೆ ನುಡಿ ಮನವೆ
ಕನ್ನಡ ನನ್ನದೆಂದು ನುಡಿ ಮನವೆ
ನುಡಿಯಿದುವೆ ನವ ಚೇತನವು ಬಾಳಿಗೆ||

ನುಡಿಯದಿರಲೇನು ಚೆನ್ನ
ನುಡಿ ಇದುವೆ ಕಸ್ತೂರಿ ರನ್ನ ನೀ ತಿಳಿಯೆ||

ತಾಯ್ ನುಡಿಯಿದುವೆ
ಸವಿ ಜೇನು ಸಿಹಿ ಜೇನು
ಸವಿಯದಿರಲೇನು ನೀನು
ನೆಲೆಯಿಲ್ಲದಿರಲೇನು ಮೈಲಿಗೆ
ಕನ್ನಡವೇ ಸತ್ಯವೆಂದ ಮನಕೆ||

ಅಂಬಾ ಎಂದ ಕರುವೂ
ಅಮ್ಮನೆಂದ ಮಗುವೂ
ಕಂದನ ಕರೆಯ ಓ ಗೊಟ್ಟ ಮನವೂ
ಕಂಪನು ಸೂಸಿ ನಲಿಯಲು ತನುವು
ಮಮತೆಯ ತಾಯ ನುಡಿಯಿದುವೆ
ಆನಂದದಾ ಹೊನಲು||

ಬಾಳೆ ಬಾಗಿರಲೇನು
ಹಸಿರೇ ಹಾಸಿರಲೇನು
ಯಾವ ತಾಯ ಮಡಿಲ
ಹೂವಾಗಿರಲೇನು ನೀ ತಿಳಿಯೆ
ನುಡಿಯದಿರಲೇನು ಚೆನ್ನ
ಕನ್ನಡವೇ ಕಸೂರಿ ತಿಳಿಯದಿರಲೇನು ಚೆನ್ನ
ಕನ್ನಡವೇ ಸತ್ಯ ನಿತ್ಯ ಚೇತನವಾಗುಮನವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವನ ಬಾಳಿನ ನಾಲ್ಕು ಹಂತಗಳು

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…