ಹಳೆಯ ಪ್ರಶಸ್ತಿ ಗೊತ್ತೇ?

ಹಳೆಯ ಪ್ರಶಸ್ತಿ ಗೊತ್ತೇ?

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ಇಂದಿನ ಮಕ್ಕಳೆಲ್ಲ ವಿಜ್ಞಾನದತ್ತ ಒಲವು ತೋರಿಸಬೇಕು. ಅದರಲ್ಲೂ ಭೌತವಿಜ್ಞಾನವನ್ನು ಅಭ್ಯಸಿಸಬೇಕು. ಜ್ಞಾನ ವಿಜ್ಞಾನದ ಮುನ್ನಡೆ ದೇಶದ ಮುನ್ನೆಡೆಯಾಗಿದೆ.

ಪ್ರತಿವರ್‍ಷ ಲಂಡನ್‌ನ ರಾಯಲ್ ಸೊಸೈಟಿ ನೀಡುವ ವಿಶ್ವದ ತೀರಾ ಹಳೆಯದಾದ ವಿಜ್ಞಾನ ಪ್ರಶಸ್ತಿಯಾದ ‘ಕೋಪ್ಲೆ ಮೆಡಲ್’ ಗೆ ಭೌತವಿಜ್ಞಾನಿ ಪೀಟರ್ ಹಿಗ್ಸ್ ಅವರು ಇತ್ತೀಚೆಗೆ ಆಯ್ಕೆಯಾಗಿರುವರು. ಅವರ ‘ದೇವಕಣ’ ಶೋಧನೆಗಾಗಿ ಈ ಪ್ರಶಸ್ತಿ ನೀಡಿದೆ.

ಪೀಟರ್ ಹಿಗ್ಸ್ ದೇವಕಣ ಕುರಿತು ೧೯೬೪ ರಲ್ಲೇ ತಮ್ಮ ಸಿದ್ಧಾಂತವನ್ನು ಮಂಡಿಸಿದ್ದರು. ಇದೇ ವೇಳೆಯಲ್ಲೇ ಫ್ರಾಂಸ್ವಾ ಎನ್‌ಗ್ಲೆರ್‍ಟ್ ಇದೇ ಸಿದ್ಧಾಂತದ ಮೇಲೆ ಕೆಲಸ ಮಾಡಿದ್ದರು!

ಹೀಗಾಗಿ ಹಲವು ಪ್ರಯೋಗಗಳ ನಂತರ ೨೦೧೨ ರಲ್ಲಿ ಹಿಗ್ಸ್ ಅವರ ಸಿದ್ಧಾಂತಕ್ಕೆ ಮಾನ್ಯತೆ ನೀಡಿದೆ ಎಂದು ವರದಿಯಾಗಿದೆ. ಈ ಮಹತ್ವದ ಸಾಧನೆಗಾಗಿ ಪೀಟರ್ ಹೀಗ್ಸ್- ಎನ್‌ಗ್ಲೆರ್‍ಟ್ ಫ್ರಾಂಸ್ವಾ ಅವರಿಗೆ ೨೦೧೩ ರಲ್ಲಿ ಜೋಡಿಯಾಗಿ ೨೦೧೩ ರಲ್ಲಿ ನೊಬೆಲ್ ಬಹುಮಾನ ನೀಡಿ ಗೌರವಿಸಲಾಗಿತ್ತು!

ಜ್ಞಾನ ವಿಜ್ಞಾನ ಕಾರ್‍ಯಕ್ಷೇತ್ರದಲ್ಲಿನ ತೀರಾ ಮಹತ್ವದ ಸಾಧನೆ ಮಾಡಿದವರಿಗಾಗಿ ರಾಯಲ್ ಸೊಸೈಟಿಯು ಈ ಪುರಸ್ಕಾರವನ್ನು ನೀಡಿ ಗೌರವಿಸುವುದು.

ಈಗಾಗಲೇ ಸ್ಟೀಫನ್ ಹಾಂಕಿಂಗ್, ಅಲೆಸ್ ಜೆಫ್ರಿ, ಆಂಡ್ರೆ ಜೆಮ್ ಮೊದಲಾದ ವಿಜ್ಞಾನಿಗಳಿಗೆ ಈ ಗೌರವ ಸಂದಿರುವುದು.

ವಿಜ್ಞಾನ ಕ್ಷೇತ್ರದಲ್ಲಿ ತೀರಾ ಹಳೆಯ ಪ್ರಶಸ್ತಿಯಾದ ಕೋಪ್ಲೆ ಮೆಡಲ್ ಪಡೆದ ಚಾರ್ಲ್ಸ್ ಡಾರ್ವಿನ್- ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಲಿಗೆ ಪೀಟರ್ ಹೀಗ್ಸ್ ವಯಸ್ಸು ೮೬ ವರ್ಷ ಇವರೂ ಈಗ ಸೇರ್‍ಪಡೆಯಾಗಿರುವರು.

ಮೊತ್ತ ಮೊದಲ ನೊಬೆಲ್ ಬಹುಮಾನ ನೀಡುವುದಕ್ಕಿಂತ ಸುಮಾರು ೧೭೦ ವರ್ಷಗಳಿಗೆ ಮೊದಲು ಅಂದರೆ ೧೭೩೧ ರಲ್ಲಿ ರಾಯಲ್ ಸೊಸೈಟಿಯು ಕೋಪ್ಲೆ ಮೆಡಲ್ ಪ್ರಶಸ್ತಿ ನೀಡಲು ಮೊದಲಾಯಿತು. ಹೀಗಾಗಿ ಇದು ವಿಜ್ಞಾನ ಕ್ಷೇತ್ರದ ಹಳೆಯ ಪ್ರಶಸ್ತಿ ಎಂಬ ಹಿರಿಮೆಯನ್ನು ಹೊಂದಿದೆ.

ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರಿಗೆ ಹೀಗೆ ಪ್ರಶಸ್ತಿಗಳ ಸುರಿಮಳೆ ವಿಶ್ವದಾದ್ಯಂತ ಇದೆಯೆಂಬುದನ್ನು ನಾವು ನೀವು ಮನಗಾಣಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಳಿಸದ ಕರೆ
Next post ರನ್ನದುಡುಗುಣಿ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys