Home / ಕವನ / ಕವಿತೆ / ಕೇಳಿಸದ ಕರೆ

ಕೇಳಿಸದ ಕರೆ

(ಹಾಡು)

ಗಿಳಿಬಾಗಿಲ ತೆರೆಯೆಯಾ? ಹೂ
ದನಿಯಿನೆನ್ನ ಕರೆಯೆಯಾ?
ಬದಲು ಬಿದುವ ತೋರೆಯಾ? ತಾ
ರಾಕಟಾಕ್ಷ ಬೀರೆಯಾ? ೪

ಹಣತೆಹುಳವ ನಂದಿಸಿ, ಬಾ
ವಲಿಯ ತಕ್ಕಡಿಯೊಂದಿಸಿ,
ಇರುಳ ಮಳಿಗೆ ಮುಗಿಯಿತು, ನೈ
ದಿಲೆಯ ಬೀಗ ಬಿಗಿಯಿತು. ೮

ಪಡುಹಾಸಂಗಿಯೆಡೆಯಲಂ
ಗಾತ ಬಿದ್ದ ಕವಡೆಯ
ಬಗೆವಳೆ ಉಷೆ ದಾಯಮಂ
ನಿನಗುಲಿಸಲೆಲರ ಗೇಯಮಂ? ೧೨

ನಿನಗೆ ತೆತ್ತು ನೆನಸನು, ನಿ
ನ್ನಿಂದ ಕೊಳಲು ಕನಸನು,
ನಿನ್ನ ಕಣ್ಣ ಸಂತೆಗೆ ರವಿ
ಬಂದನಿದೊ ಕದಂ ತೆಗೆ! ೧೬

ನಲಿನಿಯ ನನೆಮುನಿಸಿನ, ಕೋ
ಗಿಲೆಯ ಕೊರಳ ಕನಸಿನ,
ಮುಗಿಲಿನ ೧ಮಿರುವರಿಕೆಯ ಸ
ಲ್ಲುತಿದೆ ನೋಡ ಹರಕೆಯ! ೨೦

೨ಪತಂಗದಂಚೆಗರಿಯಲಿ, ವಿ
ಹಂಗದೆಲರ ತರಿಯಲಿ,
ಅಲರ ಪರಿಸೆಯಲಿ ನಿನ್ನ ನಾ
ಪಾರ್‍ವೆನೊಸಗೆಯನುದಿನ! ೨೪

ನೆನವ ಮೊಗ್ಗೆಯಲಿ ನಿನ್ನ
೩ಸೂವರಿಪಾಸೆಯನೆನ್ನ
ಸೆರೆಬಿಡಿಸೆಯ ನೆಟ್ಟಗೆನ್ನ
ಕಾವ ಕಣ್ಣಿನ ೪ಹುಟ್ಟಿಗೆ ? ೨೮

ಎದುರು ಕನ್ನಡಿಯಿಲ್ಲದೆ
ಕಣ್ಣು ಕಣ್ಣನು ಬಲ್ಲುದೆ?
ಹೆರದೆ ಬಸಿರ ಮಗುವನು ತಾ
ಯರಿಯಳದರ ಮೊಗವನು! ೩೨

ಕಣ್ಣ ನಗೆಯ ಸೆಲೆಯೊಲು, ಬಿರಿ
ವೂಗಳ ೫ಕಾದಲೆಯೊಲು,
ಉಲಿಸಾಲದ ಬಾಸೆಯಂ ಕೇ
ಳಿಸಿ ತುಂಬೆನ್ನಾಸೆಯಂ! ೩೬

ಬದುಕು ಗಾಳಿಪಟವೆನ್ನ ಮುಂ
೬ಬೆಳೆಯದೆಳೆಯನೆಳೆವನ್ನ,
ಕಡಿಯೆ-ಕತ್ತಲ ಕಾಡಿಗೊ? ನೀ
ನಿರುವ ನೇಸರ ನಾಡಿಗೊ? ೪೦
*****
೧ ಮಿರ್ರನೆ ಓಡುವಿಕೆ
೨ ಅಂಚೆ=ಟಪ್ಪಾಲು
೩ ಸೂ ಎಂದು ಮೊರೆವ
೪ ಜೇನ ಹುಟ್ಟಿ
೫ ಕಾದಲ್ಮೆ
೬ ಯೆಳೆ=ನೂಲು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...