Home / ಕವನ / ಕವಿತೆ / ರನ್ನದುಡುಗುಣಿ

ರನ್ನದುಡುಗುಣಿ

ರನ್ನ ದುಡುಗುಣಿ ಚಿನ್ನದ ಕೊಂಡಿ
ಹೊನ್ನಿನಾ ಡಾಬಾ ಇಟ್ಟಿದಳಽ|
ಎಣಕೆನಿಲ್ಲದೆ ಮಾಣಿಕಸಽರ
ಎದಿಬದಿ ತಾನು ಹಾಕುವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧||

ಕಸೂತಿ ಕುಬಸಾ ಕೈಯಲಿ ಕನ್ನಡಿ
ನೆರಽಳ ನೋಡಿ ಹಿಗ್ಗುವಳಽ|
ಬಸವೇಸೂರನ ಎಡದಲಿ ಕುಂತು
ಹಸ್ಯಾಮಾಡಿ ತಾ ನಗುವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೨||

ಮುಗಿನಾಗ ಹೊಳೆವ ಮುತ್ತಿನ ಮೂಗುತಿ
ಮಿಗಿಲಾದ ಆಭರಣಿಟ್ಟಿದಳಽ|
ಅಚ್ಚರಂಗದ ಶಾಲನುಟ್ಟು
ಅನಂತ ಕೋಟಿ ರೂಪವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೩||

ದುಂಡಗೈಯವಳು ದಿಮಿದಿಮಿಗಾರಳು
ದುಂಡಮುತ್ತಿನ ವಾರಳಽ|
ಹಿಂಡ ಗೆಳದ್ಯಾರು ಕಂಡುಸಿ ಕರದರ
ಹೆಣೂಲ ಭಂಗಾರ ಹಾಕುವಳಽ
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೪||

ಧನೂರ ಬಣ್ಣಾ ಶಾಲ ಕೈಯಲಿ
ಐದು ಅಂಕುಶಾ ಹಿಡಿದವಳಽ
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೫||
*****

ಈ ಹಾಡಿನಲ್ಲಿ ಪಸ್ತ್ರಾಭರಣಗಳ ವರ್ಣನೆಯಿದೆ.

ಛಂದಸ್ಸು:- ಮಂದಾನಿಲ ರಗಳೆ

ಶಬ್ದಪ್ರಯೋಗಗಳು:- ಇಟ್ಟಿದಳ=ಇಟ್ಟದ್ದಾಳೆ. ಎಣಿಕಿನಿಲ್ಲದೆ=ಎಣಿಕೆ ಇಲ್ಲದೆ, ಹಸ್ಯಾ ಮಾಡಿ=ಹಾಸ್ಯ ಮಾಡಿ. ದಿಮಿದಿಮಿಗಾರಳ=ತುಂಬು ಮೈಯವಳು. ವಾರಳು=ಓರಣವುಳ್ಳವಳ. ಕಂಡುಸಿ=ಖಂಡಿತವಾಗಿ. ಧನೂರ ಬಣ್ಣ=ಧನ್ನೂರಿನ ಸೀರೆ.

“ಬಸವೇಸೂರನ ಮಡದಿ.” ಇಲ್ಲಿ ವರನನ್ನು ಬಸವೇಶ್ವರನಿಗೆ ಹೋಲಿಸಿದೆ. ಹೀಗೆ ಇಂತಹ ಹಾಡುಗಳಲ್ಲಿ ಗಂಡಹೆಂಡಿರನ್ನು ಶಿವಪಾರ್ವತಿಯರಿಗೂ ಹರಿಲಕ್ಷ್ಮಿಯರಿಗೂ ಹೋಲಿಸುವುದುಂಟು.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...