Home / ಕವನ / ಕವಿತೆ / ಕಾದಿದೆ ಬಹುಮಾನ

ಕಾದಿದೆ ಬಹುಮಾನ

ಕನ್ನಡಾಂಬೆ ಎಲ್ಲಿರುವಳೊ ಅಣ್ಣ
ಕರ್ನಾಟಕದಲ್ಲಿ
ದಿಕ್ಕು ದಿಕ್ಕಲೂ ಹುಡುಕಿದರಲ್ಲ
ಕಾಣೆಯಾದಳೆಲ್ಲಿ?

ಬೆಂಗಳೂರಲಿ ಸುತ್ತಿ ನೋಡಿದೆ
ಕಡತಗಳಲ್ಲಿ ಕಣ್ಣಾಡಿಸಿದೆ
ವಿಧಾನಸೌಧ ಮೆಟ್ಟಿಲೇರಿದೆ
ಎಲ್ಲು ಕಾಣಲಿಲ್ಲ.

ನಾಡಗೌಡ ಆ ಕೆಂಪೇಗೌಡ
ಅವನ ಕೂಡ ನಾ ತೋಡಿದೆ ದುಗುಡ
ಕನ್ನಡಾಂಬೆ ಎಲ್ಲಿ? ನನ್
ಕನ್ನಡಾಂಬೆ ಎಲ್ಲಿ??

ಕಲ್ಲು ಮೂರ್ತಿ ಮಾತಾಡಿದನಲ್ಲಿ
ಖಡ್ಗ ಹಿಡಿದ ಕೈ ಕೆಳಕ್ಕೆ ಚೆಲ್ಲಿ
ಕಂಪನಿಯನು ಚೆಲ್ಲಿ!

“ಕನ್ನಡಾಂಬೆ ಎಲ್ಲಿರುವಳೊ ಇಲ್ಲಿ
ನಿನ್ನ ಹಾಗೆ ನಾನ್ ತಬ್ಬಲಿ ಇಲ್ಲಿ”
ತೆರಳು ತೆರಳು ಹುಚ್ಚ!
ನೋಡಿ ನನ್ನ, ಹುಚ್ಚ!

ಬೆಳಗಾವಿಯಲ್ಲಿ ಕನ್ನಡ ಇಲ್ಲ
ಬಳ್ಳಾರಿಯಲಿ ತೆಲುಗೇ ಎಲ್ಲ
ಕೊಡಗಿನಲಿ ಮಲಯಾಳಿ ಸೊಲ್ಲ…
ತಲೆಗೇರಿತು ಅಮಲು!

ಇಲ್ಲಿಲ್ಲದ ಕನ್ನಡತಿಯ ಅರಸಿ
ಪರನಾಡಿಗೆ ನಾ ಪಯಣವ ಬೆಳೆಸಿ
ಹುಡುಕಿದೆ ಎಲ್ಲೆಲ್ಲೂ!

ಆಂಧ್ರದಲೆಲ್ಲಾ ತೆಲುಗು ತಾಯೆ
ದ್ರಾವಿಡ ದೇಶದಿ ತಮಿಳಿನ ಮಾಯೆ
ಆಯಾ ನಾಡಲಿ ಆ ತಾಯ್ ವೈಭವ…
ಸೋಲುಂಡಿತು ಜೀವ!

ಅಲ್ಲೂ ಇಲ್ಲ ಇಲ್ಲೂ ಇಲ್ಲ
ಕನ್ನಡಾಂಬೆ ಎಲ್ಲೆಲ್ಲೂ ಇಲ್ಲ

ಅವಳ ಸುಳಿವನು ಕೊಟ್ಟಂತವರಿಗೆ
ಕಾದಿದೆ ಬಹುಮಾನ! ನನ್
ಎದೆಯಲಿ ಸನ್ಮಾನ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...