ಮುಖಾಮುಖಿ

ಮನಸಿನಾಳದಿಂದ
ಎದ್ದ ಬುದ್ಧ ಈಗ
ಮತ್ತೆ ಬಂದಿದ್ದಾನೆ.

ಮೊದಲಿನಂತೆಯೇ
ರಾತ್ರಿಯಿಡೀ ದಿಟ್ಟಿಸಿನೋಡುತ್ತಾ
ನೂರು ಗೊಂದಲಗಳ
ಮೂಡಿಸಿ ಕಾಡುತ್ತಾನೆ.

ಕೇಳುತ್ತಾನೆ ಒಂದೇ ಪ್ರಶ್ನೆ
“ಈಗ… ಈಗ ಬರುವೆಯಾ ನನ್ನೊಡನೆ?”

ನನ್ನದು ಮತ್ತದೇ
ಹಳಸಲು ಕಾರಣಗಳು
ಅವನಿಂದ ತಪ್ಪಿಸಿಕೊಳ್ಳಲು
ಬದುಕಿನಾಮಿಷದ ನೆವಗಳು!
ನಗುತ್ತಾ ಒಳಹೋಗಿ ಬಿಡುತ್ತಾನೆ
ಆ ನಗೆಗೆಷ್ಟು ಅರ್ಥಗಳು!

ನಿತ್ಯವೂ ಕಾದೆಣ್ಣೆಯಲಿ
ಸಿಡಿದು ಸತ್ತರೂ
ಸಾವಿರ ಸಾಸಿವೆಗಳು
ವೈರಾಗ್ಯೋದಯವಾಗುವುದಿಲ್ಲ

ಹೊತ್ತಿಗೆಯ ಕೊನೆಯ
ಪುಟದವರೆಗೂ ತಿರುವದೇ
ಕೊಡ ತುಂಬಬೇಕಲ್ಲಾ!

ಆದರೂ ಅಂದಿನಂತೆಯೇ
ಮತ್ತೆ ಮತ್ತೆ
ಮನಸಿನಾಳದಿಂದೆದ್ದು
ಬುದ್ಧ ಬರುತ್ತಾನೆ
‘ಈಗ… ಬರುವೆಯಾ?’ ಕೇಳುತ್ತಾನೆ.

ನಾನೀಗ ಅನುಮಾನಿಸುತ್ತಾ
ಮತ್ತದೇ ಸತ್ತ ಉತ್ತರ
ಗಳಹುತ್ತೇನೆ
ಆದರೆ ಏಕೋ
ಇತ್ತೀಚೆಗವನು ನಗುವುದಿಲ್ಲ!
ಮಹಾಮೌನಿಯಾಗಿದ್ದಾನೆ
ನಾನು ಹೆದರುತ್ತೇನೆ
ಬಹುಶಃ ಅವನು ಬೆಳೆದಿದ್ದಾನೆಂದು
ಅವನೊಂದಿಗೆ
ಆಳಕ್ಕಿಯುವುದು ಸುಲಭದ ಮಾತೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಮಾನ
Next post ಅಯ್ಯಪ್ಪ ಸಾಮಿ ಕಾಲ ಟಚ್ ಮಾಡಿದ್ಳಂತಲ್ಲಪ್ಪೋ ಜಯ್ಮಾಲ!

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…