Home / ಕವನ / ಕವಿತೆ / ಅನುಮಾನ

ಅನುಮಾನ

ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ
ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ
ಯಾವುದು ಪ್ರಬಲ ಯಾವುದು ನಿತ್ಯಸತ್ಯ
ಎಂಬುದು ನನಗಿನ್ನೂ ಅನುಮಾನ
ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ
ನಿಂತ ಕೆಲವು ಕಡೆ ಹಳಸಿ ನಾತವಾಗಿ ಯಾರಿಗೂ ಬೇಡವಾಗುತ್ತವೆ
ಅಲ್ಲಿ ಕಟಗುಟ್ಟುವ ಕಪ್ಪೆಸದ್ದೊಂದೆ ಕಿವಿಕೊರೆಯುತ್ತದೆ

ರೋಗಿಯ ವಾಸಿ ಮಾಡಿ ಬಂದವನೇ
ರೋಗಿಗಿಂತ ಮುಂಚೆ ತಾನೇ ಗೊಟಕ್ಕೆಂದನೇನೋ
ತೊಳೆಯ ಬಂದ ತೋಟಿಗ ಬಗ್ಗಡವಾದ ಕೆಸರ ಹಳ್ಳದಲ್ಲಿ
ತಾನೇ ಕೊಳೆ ಹಚ್ಚಿಕೊಂಡು ಕೊಚ್ಚಿ ಹೋದನೇನೋ
ತೊಳೆಸಿಕೊಳ್ಳುವವರೆ ಕಿಸಕ್ಕನೆ ನಕ್ಕು
ಎಮ್ಮೆ ಹಂದಿಗಳಂತೆ ಹಾಗೆಯೇ ಬಿದ್ದುಕೊಂಡರೇನೋ

ಕತ್ತಲಲ್ಲಿ ನಡೆಸಲೆಂದು ದೀಪ ತಂದವನ
ಹಿಂದೆ ಹಿಂದೆ ಹಿಂಬಾಲಿಸಿ ಉಫ್ಫೆಂದೂದಿ ದೀಪವನಾರಿಸಿ
ಬೆಳಕಿನವನನ್ನೇ ಕತ್ತಲ ಕಂದಕದಲ್ಲಿ ನೂಕಿದರೇನೋ

ಪರ್ಣಶಾಲೆಗಳ ಮರಗಳ ಕೆಳಗೆ ಕುಳಿತು ಎಲೆ ಸಂದುಗಳಲ್ಲಿ
ಕಾಣುವ ಕಿರಣ ಕನಸೇ ಬೆಳಕೆಂಬ ಭ್ರಮೆಯಾಯಿತೇನೋ ಅಥವಾ
ಇವೆರಡರ ಕಣ್ಣು ಮುಚ್ಚುಲೆಯಾಟವನಾಡಿಸುವ
ಬೆಳಕಿನ ಬೆಳಕೋ ಕತ್ತಲೆಯ ಕತ್ತಲೋ
ಏನೂ ಬೇರೆಯೇ ಇದೆಯೇನೋ
ನನಗಿನ್ನೂ ಅನುಮಾನ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...