ಹಣತೆ

ಮುದವಾರಲು, ಅಳಲೇರಲು,
ಭಯ ಮಸಗಲು- ತುಡಿದು,
ಮನ ದೇವಗೆ ಮೊರೆಯಿಡುವುದು
ನರನೊಲುಮೆಯ ಜರೆದು.

ಹರುಷವಿದ್ದರೆ ದೇವನೇತಕೆ?
ಹರಕೆಯಾತ್ರೆಗಳೇಕೆ?
ಮನುಜಗಾಸೆಗಳಿಂಗಿಹೋದರೆ
ಹರಿಯ ಹಂಗವಗೇಕೆ?

ಸ್ವಾರ್‍ಥತ್ಯಾಗದ ನಲವನರಿಯಲು
ಮೋಕ್ಷದೊಳು ನೆಚ್ಚೇಕೆ?
ಮರ್‍ತ್ಯನೊಲುಮೆಗೆ ಕಂಗಳಿದ್ದರೆ
ದೇವನೊಲುಮೆಯದೇಕೆ?

ಆಸೆ ಸಲ್ಲಿಸಲು ಪಾಪಕೆಳಸಲು
ದಹಿಸಲು ಪರಿತಾಪ,
ಬುವಿಯೊಳೆಲ್ಲಿಯು ದೊರೆಯದೆಯೆ ಇರೆ
ಕ್ಷಮೆ, ದಯೆ, ಅನುತಾಪ,
ಸ್ವಾರ್‍ಥಸ್ವಾರ್‍ಥದ ತುಮುಲಯುದ್ಧದಿ
ಬಯಲಾಗಲು ಬಯಕೆ,
ಅಂದು ದೇವಗೆ ಮೊರೆಯನಿಡುವುದು-
“ಎರೆ, ಶಾಂತಿಯ ಮನಕೆ!”

ದೇವ, ಹಣತೆಯ ಹೊತ್ತಿಸಿರುವೆನು
ನಿನಗೆ ನನ್ನೆದೆಮನೆಯೊಳ್‌,
ಆಸೆ, ಕಂಬನಿ, ಭಯ, ಬಯಕೆಗಳ
ತೈಲ ತುಂಬಿಹೆ ಸೊಡರೊಳ್‌.
ನೆಲೆಯ ದೀಪವು ಮಿಣುಗುವನಕವೂ
ಮೊರೆಯನಿಡುವೆನು ಮಾನ್ಯ!
ತೈಲ ಬತ್ತಲು, ಸೊಡಲಿದಾರಲು,
ನೀನೆಲ್ಲಿಹೆ – ಶೂನ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸ ಜೈನರ ಮಡದಿ
Next post ಗಿಳಿಯು ಓದಿದರೇನು ಫಲ?

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…