ಹಣತೆ

ಮುದವಾರಲು, ಅಳಲೇರಲು,
ಭಯ ಮಸಗಲು- ತುಡಿದು,
ಮನ ದೇವಗೆ ಮೊರೆಯಿಡುವುದು
ನರನೊಲುಮೆಯ ಜರೆದು.

ಹರುಷವಿದ್ದರೆ ದೇವನೇತಕೆ?
ಹರಕೆಯಾತ್ರೆಗಳೇಕೆ?
ಮನುಜಗಾಸೆಗಳಿಂಗಿಹೋದರೆ
ಹರಿಯ ಹಂಗವಗೇಕೆ?

ಸ್ವಾರ್‍ಥತ್ಯಾಗದ ನಲವನರಿಯಲು
ಮೋಕ್ಷದೊಳು ನೆಚ್ಚೇಕೆ?
ಮರ್‍ತ್ಯನೊಲುಮೆಗೆ ಕಂಗಳಿದ್ದರೆ
ದೇವನೊಲುಮೆಯದೇಕೆ?

ಆಸೆ ಸಲ್ಲಿಸಲು ಪಾಪಕೆಳಸಲು
ದಹಿಸಲು ಪರಿತಾಪ,
ಬುವಿಯೊಳೆಲ್ಲಿಯು ದೊರೆಯದೆಯೆ ಇರೆ
ಕ್ಷಮೆ, ದಯೆ, ಅನುತಾಪ,
ಸ್ವಾರ್‍ಥಸ್ವಾರ್‍ಥದ ತುಮುಲಯುದ್ಧದಿ
ಬಯಲಾಗಲು ಬಯಕೆ,
ಅಂದು ದೇವಗೆ ಮೊರೆಯನಿಡುವುದು-
“ಎರೆ, ಶಾಂತಿಯ ಮನಕೆ!”

ದೇವ, ಹಣತೆಯ ಹೊತ್ತಿಸಿರುವೆನು
ನಿನಗೆ ನನ್ನೆದೆಮನೆಯೊಳ್‌,
ಆಸೆ, ಕಂಬನಿ, ಭಯ, ಬಯಕೆಗಳ
ತೈಲ ತುಂಬಿಹೆ ಸೊಡರೊಳ್‌.
ನೆಲೆಯ ದೀಪವು ಮಿಣುಗುವನಕವೂ
ಮೊರೆಯನಿಡುವೆನು ಮಾನ್ಯ!
ತೈಲ ಬತ್ತಲು, ಸೊಡಲಿದಾರಲು,
ನೀನೆಲ್ಲಿಹೆ – ಶೂನ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸ ಜೈನರ ಮಡದಿ
Next post ಗಿಳಿಯು ಓದಿದರೇನು ಫಲ?

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys