ಗಿಳಿಯು ಓದಿದರೇನು ಫಲ?

ಗಿಳಿಯು ಓದಿದರೇನು ಫಲ?

ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು
ಜಗವೆಲ್ಲವ ಕಾಬ ಕಣ್ಣು
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು
ಇದಿರ ಗುಣ ಬಲ್ಲೆವೆಂಬರು
ತಮ್ಮ ಗುಣವತಾವರಿಯರು
ಕೂಡಲಸಂಗಮದೇವಾ

ಗಿಳಿ ಹೇಳಿಕೊಟ್ಟದ್ದನ್ನು ಹೇಳುತ್ತದೆ, ಆಡುತ್ತದೆ. ಗಿಳಿಯ ಶಾಸ್ತ್ರವೆನ್ನುವುದು ಗಿಳಿಯು `ಓದಿ’ ಹೇಳುವ ಭವಿಷ್ಯವಾಣಿ. ಆದರೂ ಅದು ವಿವೇಕಿಯಲ್ಲ. ತನ್ನನ್ನು ಕೊಲ್ಲುವ ಬೆಕ್ಕು ಯಾವಾಗ ಬರುವುದೆಂದು ಅದಕ್ಕೆ ತಿಳಿಯುವುದೇ ಇಲ್ಲ. ಕಣ್ಣು ಎಲ್ಲವನ್ನೂ ನೋಡುತ್ತದೆ. ಆದರೆ ನೋಟದೊಳಗೇ ಇರುವ ವಕ್ರತೆಯನ್ನು (ಕೊಲ್ಲೆ), ದೋಷವನ್ನು ಕಾಣಲರಿಯದು. ಜನರೂ ಅಷ್ಟೇ, ಬೇರೆಯವರ ಗುಣ ದೋಷಗಳು ತಮಗೆ ತಿಳಿಯುತ್ತವೆ ಎನ್ನುತ್ತಾರೆ, ತಮ್ಮ ಗುಣವೇ ತಮಗೆ ಗೊತ್ತಿರುವುದಿಲ್ಲ. ಗಿಳಿಗಿಂತಲೂ ಅತ್ತತ್ತ ಅಲ್ಲವೇ ಎಂದು ಬಸವಣ್ಣ ಕೇಳುತ್ತಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣತೆ
Next post ಉಮರನ ಒಸಗೆ – ೫

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…