Home / ಕವನ / ಕವಿತೆ / ಮನಸ ಜೈನರ ಮಡದಿ

ಮನಸ ಜೈನರ ಮಡದಿ

ಮನಸ ಜೈನರ ಮಡದೆಽ ಬಾಽ
ಘನಮನಸಿನ ಗಂಬಿರಳಽ ಬಾಽ
ಘನಮನಸೆಂಬೊ ಗರತ್ಯಾರು ಮೆಚ್ಚಿ
ನೀಲಽ ಬಾಽಽ ನೀಲಽ ಸೀಲಽಽ ಬಾಽಽ
ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧||

ಅನಂದರಾಯರ ಇಗತೇ ಬಾ
ಆದಿಪುರುಷರ ಸತಿಯಳು ಬಾ
ಅದರ ಮ್ಯಾಲ ಪೂರ್ಮಾ ನೀರ್ಮ್ಯಾಲ ಗುರುಳಿ
ಜೂಜ ಬಾಽ ಬಾ ಬಾ ಮೇತ್ರಿ ಬಾಽಽ
ಪುನ್ಯಫಲ ಮೇತ್ರಿ ನೀ ಬಾರಽ ಹಸಿಯ ಜಗಽಽಲೀಗೇ ಸೋ ||೨||

ನಾಗೀಂದ್ರನರಗಲ್ಲವು ಬಾ
ಅರಗಲ್ಲದ ರೂಪವು ಬಾ
ಹೋಯಿತು ಸರ್ಪಾ
ಎಡದಲಿ ಕುಳಿತ
ಕಲ್ಪ ಬಾಽ ಬಾ ಬಾ ಫಣಿಯವು ಬಾ
ಸೋಗಿನ ಗೊಂಬೆ ನೀ ಬಾರ ಹಸಿಯ ಜಗಽಽಲೀಗೇ ಸೋ ||೩||

ಮಂದಗಮನೆ ಮೋವನ್ನೇ ಬಾ
ಗಂಧ ಕಸ್ತುರಿ ಪರಿಮಳ ಬಾ
ನನ್ನಾಣೆ ಬಾಽ ಕಟ್ಟಾಣೆ ಬಾ
ಧನ ಧನಿಯಳು ಬಾಽ
ಕೂಕಮದಾಗಿನ ಭರಣೆ ಬಾರೊಂದ್ಹ ಸೀ ಜಗಽಽಲೀಗೇ ಸೋ ||೪||

ಮಾಣಿಕದಾಗಿನ ಏಣವು ಬಾ
ಜೋಡಮುತ್ತಿನ ಜಾಣೇ ಬಾ
ಚಂದ್ರನ ಸೊಸಿಯೇ ಬಾ
ಇಂದ್ರನ ಸತಿಯಳು ಬಾ
ಭಂಗರದಾಗಿನೆ ಭರಣೆ ಬುರೊಂದ್ಹಸಿಯ ಜಗಽಽಲೀಗೆ ಸೋ ||೫||

ಮಂಗಳ ಮಹಿಮನ ರುಣೀ ಬಾ
ಶ್ರಿಂಗಾರದ ಮುದ್ದಾನೇ ಬಾ
ಕುಂಬಕುಚಗಳು ನಲನಲಿದಾಡುತ
ರಂಬೇ ಬಾ ದೇಶದ ಗೊಂಬೆ ಬಾ
ಅಂಗೈನಿಂಗ ನೀ ಬಾರಽ ಹೆಸಿಯ ಜಗಽಽಲೀಗೇ ಸೋ ||೬||
*****

ಸೋಬಾನದ ಹಾಡುಗಳು

ಮಾನವದೇಹದಲ್ಲಿ ಪೂರ್ಣಸೌಂದರ್ಯವು ಪ್ರಕಟವಾಗುವ ಕಾಲಗಳು ಎರಡು. ಒಮ್ಮೆ ಎಳಗೂಸಿದ್ದಾಗ, ಇನ್ನೊಮ್ಮೆ ಪ್ರಾಯವೇರುವಾಗ. ಯೌವನದ ಬೆಡೆಗು ಶೃಂಗಾರರಸಕ್ಕೆ ಉದ್ದೀಪಕ. ಹೆಣ್ಣಿನ ಶೃಂಗಾರವನ್ನು ಹೆಣ್ಣುಮಕ್ಕಳೇ ಬಣ್ಣಿಸಿದ್ದು ಸೋಬಾನದ ಹಾಡುಗಳಲ್ಲಿ ನೋಡಲಿಕ್ಕೆ ಸಿಗುವಂತಿದೆ. ಶೃಂಗಾರವನ್ನು “ನೈಸರ್ಗಿಕವಾಗಿ ಲಜ್ಜಾಶೀಲರಾದ ನಾರಿಯರು ವರ್ಣಿಸಿದ ರೀತಿಗೂ ಸ್ವಚಂದತೆಗಾಸ್ಪದವಿರುವ್ ಪುರುಷರು ವರ್ಣಿಸಿದ ರೀತಿಗೂ ಮಹದಂತರವಿರುತ್ತದೆ. ಲಾವಣಿಯೊಳಗಿನ ಶೃಂಗಾರಕ್ಕೂ ಸೋಬಾನದ ಹಾಡುಗಳೊಳಗಿನ ಶೃಂಗಾರಕ್ಕೂ ಸರಿಹಚ್ಚಿ ನೋಡಿದರೆ ನಮ್ಮ ಈ ಅಭಿಪ್ರಾಯವು ಸ್ಪಷ್ಟವಾಗುವುದು. ಕವಿಚರಿತ್ರೆಯಲ್ಲಿ ಬಂದ ಕುಮಾರವ್ಯಾಸನ ದ್ರೌಪದಿಯ ಚೆಲುವಿಕೆಯ ವರ್ಣನೆಗೂ ರಾಜಶೇಖರವಿಳಾಸ ಮುಂತಾದ ಕಾವ್ಯಗಳೊಳಗಿನ ವೇಶ್ಯೆಯರ ವರ್ಣನೆಗೂ ಇರುವ ವ್ಯತ್ಯಾಸವನ್ನು ಲಕ್ಷ್ಯಕ್ಕೆ ತಂದುಕೊಂಡರೆ ಮೇಲ್ಕಂಡ ನಮ್ಮ ಮಾತಿನ ಭಾವವು ಇನ್ನಿಷ್ಟು ಸ್ಫುಟವಾಗುವುದು.

ಹೆಣ್ಣುಮಕ್ಕಳು ವರ್ಣಿಸಿದ ಶೃಂಗಾರದಲ್ಲಿ ಒಂದು ಸಹೆಜವಾದ ಜೋಕೆಯಿದೆ. ಗಂಡಸರ ಹಾಡುಗಳಲ್ಲಿ ರೂಪವರ್ಣನೆಯು ಮೂರು ವಿಧದಲ್ಲಿ ಮಾಡಲ್ಪಟ್ಟಿದೆ. “ಮನಸ ಜೈನರ ಮಡದಿ” ಎಂಬ ಈ ಹಾಡಿನಲ್ಲಿ ಇಡೀ ಯೌವನಕ್ಕೆ ಸಂಬಂಧವಾಗುವ ಉಪಮೆಗಳಿವೆ. ಇದು ಒಂದು ವಿಧ. “ಹಿಂಬಳಿ ಮುಂಬಳಿ” ಮತ್ತು “ರನ್ನದುಡುಗುಣಿ” ಎಂಬೆರಡು ಹಾಡುಗಳಲ್ಲಿ ಮೈ ಮೇಲಿನ ಅಲಂಕಾರಗಳ ವರ್ಣನೆಯಿಂದ ಶೃಂಗಾರಕ್ಕೆ ಬಣ್ಣ ಕೊಡಲು ಯತ್ನಿಸಲಾಗಿದೆ. ಇದು ಎರಡನೆಯ ವಿಧ. ಇನ್ನು “ಹಸುಮಗಳಽ ನೀಲಮ್ಮ” ಮತ್ತು “ಹಣಿ ಎಂಬು ಭಾಂವಕ” ಎಂಬೆರಡು ಹಾಡುಗಳಲ್ಲಿ “ಅಕ್ಕ ಭಾವಽಗ ವರನಂದ” “ನಾರೀಗಿ ತಮಗ ವರನಂದ” ಮುಂತಾದ ಮಾತುಗಳಿಂದ ಪರ್ಯಾಯದಿಂದ ರೂಪವನ್ನು ವರ್ಣಿಸಿದಂತಿದೆ. ಇದು ಮೂರನೆಯ ವಿಧ.

“ಬಾಲಿ ತಾ ಮೈನೆರದು” ಎಂಬ ಹಾಡಿನ ಮೊದಲಿನ ನಾಲ್ಕು ನುಡಿಗಳಲ್ಲಿ ಖುತುಸಮಯದ ತಾತ್ಕಾಲಿಕ ಮುಖಲಕ್ಷಣ ಮುಂತಾದವುಗಳ ಸೊಗಸಾದ ವರ್ಣನೆಯಿದೆ. ಇದು ನಾಲ್ಕನೆಯ ವಿಧವೆಂದು ಹೇಳಬಹುದು.

“ಮನಸ ಜೈನರ ಮಡದಿ”

ಈ ಹಾಡಿನಲ್ಲಿ ಮೊದಲಿನಿಂದ ಕೊನೆಯವರೆಗೆ ಒಂದೇ ಸಂದರ್ಭದ ವರ್ಣನೆಯಿರುವುದರಿಂದ ತಿಳಿದುಕೊಳ್ಳಲಿಕ್ಕೆ ನಡುವೆ ಎಲ್ಲಿಯೂ ತೊಂದರೆ ಬರುವಂತಿಲ್ಲ.

ಛಂದಸ್ಸು:- ಮಂದಾನಿಲರಗಳೆಗೆ ಸಮೀಪವಾಗಿದೆ.

ಶಬ್ದ ಪ್ರಯೋಗಗಳು:- ಮನಸ ಜೈನರು=ಹಿಂದಕ್ಕೆ ಬಹಳ ಘನವಂತಿಕೆಯಿದ್ದ ಒಂದು ಜಾತಿ. ಗಂಬಿರಳ=ಗಂಭೀರಳು. ಸೋಗಿನ=ವಯ್ಯಾರದ. ಇಗತಿ=ಯುಕ್ತಿ ಯುಳ್ಳವಳು. ಜೂಜ=ಪಂಥಗಾರ್ತಿ. ಹಸಿಯ ಜಗಲಿ=ಲಗ್ನ ಫಲಶೋಭನಗಳ ಪೀಠ. ನಾಗೀಂದ್ರನ ಅರಗಲ್ಲ=ಹಾವಿನ ಹೆಡೆಯೊಳಗಿನ ಮಣಿ. ಅರಗಲ್ಲು=ಅರಸುಗಲ್ಲು (ರತ್ನ). ಕಲ್ಪ=ತಲ್ಪ(?) ಮಾಣಿಕದಾಗಿನ ಏಣ, ಭಂಗರದಾಗಿನ ಭರಣೆ=ಮಾಣಿಕದ ಏಣು, ಭಂಗಾರದ ಭರಣೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...