ಭಾರತ ಕಮ್ಮಿಯಿಲ್ಲ

ಭಾರತ ಕಮ್ಮಿಯಿಲ್ಲ

“ಫಾರ್ಚೂನ್- ೫೦೦ ಲಾರ್‍ಜೆಸ್ಟ್ ಕಂಪೆನೀಸ್” ಪಟ್ಟಿಯಲ್ಲಿ ಇಡೀ ವಿಶ್ವದ ೫೦೦ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭವ್ಯ ಭಾರತದ ಏಳು ಅದ್ಭುತ ಕಂಪನಿಗಳೂ ಸ್ಥಾನಮಾನ ಪಡೆದುಕೊಂಡಿರುವುದೊಂದು ಹೆಗ್ಗಳಿಕೆಯ ವಿಷಯವಾಗಿದೆ.

೧ ಭವ್ಯ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ‌ಎನ್‌ಜಿಸಿ)

೨ ಭಾರತೀಯ ತೈಲ ನಿಗಮ (ಐ‌ಒಸಿ)

೩ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷಸನ್ ಲಿಮಿಟೆಡ್ (ಎಚ್ ಪಿಸಿ‌ಎಲ್)

೪ ರಿಲಿಯನ್ಸ್ ಇಂಡಸ್ಟ್ರೀಸ್

೫ ಟಾಟಾ ಮೋಟಾರ್‍ಸ್

೬ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿ‌ಐ)

೭ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿ‌ಎಲ್)

ಇವೆಲ್ಲ “ಫಾರ್ಚೂನ್ ೫೦೦ ಲಾರ್‍ಜ್‌ಸ್ಟ್ ಕಂಪನೀಸ್” ಪಟ್ಟಿಗೆ ಸೇರಿವೆ.

ಜಾಗತಿಕ ಮಟ್ಟದ ಈ ೫೦೦ ಬೃಹತ್ ಕಂಪನಿಗಳು ೨೦೧೪ ರಲ್ಲಿ ಒಟ್ಟಾರೆಯಾಗಿ ೩೧.೨ ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು ಒಟ್ಟು ೧.೭೦ ಲಕ್ಷ ಕೋಟಿ ಡಾಲರ್‌ಗಳಷ್ಟು ನಿವ್ವಳ ಲಾಭದತ್ತ ಮುನ್ನಡೆದಿದ್ದವು!

ಈ ೫೦೦ ಕಂಪನಿಗಳು ವಿಶ್ವದ ೩೬ ದೇಶವಿದೇಶಗಳಲ್ಲಿ ವಹಿವಾಟು ನಡೆಸಿದ್ದು ಒಟ್ಟಾರೆಯಾಗಿ ೬೫ ಲಕ್ಷ ಮಂದಿಗೆ ಈಗಾಗಲೇ ಉದ್ಯೋಗ ನೀಡಿವೆ.

ಈ ಫಾರ್ಚೂನ್ ೫೦೦ ಲಾರ್‍ಜೆಸ್ಟ್ ಕಂಪನೀಸ್- ಪಟ್ಟಿಯಲ್ಲಿ ವಾಲ್‌ಮಾರ್ಟ್ ಮೊತ್ತ ಮೊದಲ ಸ್ಥಾನದಲ್ಲಿದೆ.

ಚೀನಾದ ತೈಲ ಸಂಸ್ಕರಣೆ ಕಂಪನಿ ಆನ್ ಒಪೆಕ್ ಗ್ರೂಪ್ ಎರಡನೆಯ ಸ್ಥಾನದಲ್ಲಿದೆ.

ನೆದರ್‌ಲೆಂಡಿನ ರಾಯಲ್ ಡಚ್‌ಷಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಎಕ್ಸಾನ್ ಮೊಬಿಲ್ ನಂತರದ ಸ್ಥಾನಮಾನದಲ್ಲಿದೆ.

ಈ ೫೦೦ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಆಪಲ್ ೧೫ ನೇ ಸ್ಥಾನದಲ್ಲಿ ಜೆಪಿ ಮಾರ್ಗನ್ ಚೇಸ್ ೬೧ ನೇ ಸ್ಥಾನದಲ್ಲಿ, ಐಬಿ‌ಎಂ ೮೨ ನೆಯ ಸ್ಥಾನದಲ್ಲಿ, ಮೈಕ್ರೋಸಾಫ್ಟ್ ೯೫ ನೆಯ ಸ್ಥಾನದಲ್ಲಿ ಗೂಗಲ್ ೧೨೪ ನೆಯ ಸ್ಥಾನದಲ್ಲಿ ಪೆಪ್ಸಿ ೧೪೧ ನೆಯ ಸ್ಥಾನದಲ್ಲಿ ಇಂಟೆಲ್ ೧೮೨ ನೆಯ ಸ್ಥಾನದಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್ ೨೭೮ ನೆಯ ಸ್ಥಾನದಲ್ಲಿ ಇವೆಲ್ಲ ಕಂಪನಿಗಳು ಅಮೆರಿಕ ಮೂಲದವೇ ಆಗಿವೆ.

ಹೋದ ವರ್ಷದೊಂದಿಗೆ ತುಲನೆ ಮಾಡಿದಲ್ಲಿ ಈ ಬಾರಿ ಟಾಟಾ ಮೋಟಾರ್ಸ್ ಹಾಗೂ ಎಸ್‌ಬಿ‌ಐ, ಒ‌ಎನ್‌ಜಿಸಿ- ರಿಲಯನ್ಸ್- ಎಚ್‌ಪಿಸಿ‌ಎಲ್‌- ಬಿಪಿಸಿ‌ಎಲ್ ಇವೆಲ್ಲ ಫಾರ್ಚೂನ್ ಪಟ್ಟಿಯ ಬ್ಯಾಂಕಿಂಗ್‌ನಲ್ಲಿ ಕೆಳಕ್ಕಿಳಿದಿವೆ.

ಏನೇ ಇದ್ದರೂ ಭವ್ಯ ಭಾರತದ ಕಂಪನಿಗಳು ಬೇರೆ ಯಾವುದೇ ದೇಶದ ಕಂಪನಿಗಳಿಗಿಂತ, ಕಡಿಮೆ ಇಲ್ಲವೆಂಬುದೊಂದು ಹೆಗ್ಗಳಿಕೆಯಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ
Next post ಮನಸ ಜೈನರ ಮಡದಿ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…