ರಾಷ್ಟ್ರೀಯ ಶಿಕ್ಷಣದ ಸಪ್ತಾಹದ ಕರೆ

ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು
ತಾಯೆ ಎಂದರಚಲುಂ ಮಿಸುಕದಿರೆ ರಸನೆ,
ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು
ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪

ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು
ತನ್ನ ತಾನರಿತೆದ್ದು ನಿಡುನಿಲ್ಲಲಹುದೇ?
ರವಿ ಚಿತ್ರಿಪಂತೆ ಚಿತ್ರಿಪನೆ ಪುಷ್ಪಮನಿಂದು?
ನೀನೀನ ಜೀವ ದಾಯಿಯಿನೆಮಗೆ ಬಹುದೇ? ೮

ತಾಯೆ ನಿನ್ನಯ ಪುಣ್ಯಪೀಯೂಷಸ್ತನ್ಯಂ
ಸೂಸುತಿದೆ, ರಾಷ್ಟ್ರೀಯ ಶಿಕ್ಷಣಮನನ್ಯಂ ?
ನವಜೀವನದ ಬುಗ್ಗೆಯಿದನೊಂದನೆಮ್ಮ
ಹೃದಯದ ನಿದಾಘದಿಂ ಬತ್ತಿಸದಿರಮ್ಮ! ೧೨

ಕತ್ತಲೆ ಕವಿದ ನಮ್ಮ ಕಂಗಳಿಗೆ ಪರೆ ನೆರೆಯೆ,
ನಮ್ಮ ನಾವ್ಮರೆತು ನಮ್ಮವರ ಮರೆವನ್ನಂ,
ಚೆದರಿ ನಮ್ಮೊಳಗೆ ಜಗಳಾಡಲೇನಚ್ಚರಿಯೆ?
ಸಾಕಿನಿತು! ರಾಷ್ಟ್ರೀಯ ಶಿಕ್ಷಣಮೆ ನಿನ್ನ ೧೬

ದೀಧಿತಿಯಿನೆಮ್ಮಯ ಮನೋನಯನಮಂ ತೆರೆದು,
ಭೇದಗಳ ಬಿರುವರೆಯ ಹೆರೆಯಿಸುವುದಲ್ಲಿ!
ನಾನೆ ನಾ ನೀನೆ ನೀನಿದನೆಮ್ಮೆದೆಯಿನರೆದು
ನಾವು ನಾವೆಂಬ ಭಾಷೆಯ ಕೆತ್ತಿಸಲ್ಲಿ! ೨೦

ಕ್ರೈಸ್ತ ಪಾರಸಿ ಜೈನ ಮುಸಲಮಾನ್‌ ಹಿಂದು
ವೆಮಗೆಲ್ಲರಿಗೆ ನಮ್ಮ ಭಾರತಮಿದೊಂದು
ತವರು ಗಡ! ರಾಷ್ಟ್ರೀಯ ಶಿಕ್ಷಣಮೆ ಬಂದು
ಒಟ್ಟಿನ ತವರ್‍ತನವನೆಸಗಿನ್ನು ಮುಂದು! ೨೪

ಎದ್ದೇಳಿರೈ ಬಂಧುಗಳಿರ! ಕೆಲವರಿಯುತಿದೆ
ರಾಷ್ಟ್ರೀಯ ಶಿಕ್ಷಣದ ಸಪ್ತಾಹಮಿಂದು!
ತಂತನೂಳಿಗವ ಗೆಯ್ಯಿರಿಮೆಂದು ಕರೆಯುತಿದೆ,
ಬಂಗಾರಮಪ್ಪುದು ಭವಿಷ್ಯ ವಲಮೆಂದು! ೨೮

ತನ್ನ ತಾಯ್ನುಡಿಯಿಂದ ದುಡಿದ ಬಿಜ್ಜೆಯೆ ಬಿಜ್ಜೆ!
ಹೆರರ ನಾಲಗೆಯೆಂಜಲೆನ್ನೆಗಂ ಸವಿಯೊ?
ತನ್ನ ಮುಂಗತಿ ತೋರೆ ತನ್ನ ಹಿರಿಯರ ಹೆಜ್ಜೆ!
ಹೆರರ ಬೆಳಕೊಳೆ ಕಾಂಬ ತನ್ನವರ ೧ ಕವಿಯೊ? ೩೨

ಅವರವರ ನುಡಿಗಳಿಂದವರವರ ಜಾಣಿ
ಕೆಯನೆಚ್ಚರಿಸುವ ನುಡಿಗಳ ತಾಯೆ ವಾಣಿ!
ನಿರವಶೇಷ ಜ್ಞಾನದರ್‍ಜನವನೆಮ್ಮ
ನುಡಿಯಿನೆಮಗಿತ್ತು ಭಾರತವ ಸಲಹಮ್ಮ! ೩೬
*****
ದ್ರುಷ್ಟಾರ (seer)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋಡಲು ಕ್ರಿಕೇಟು ಮ್ಯಾಚು
Next post ಭಾರತ ಕಮ್ಮಿಯಿಲ್ಲ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…