ಪುಟ್ಟೂ

ಮೈಸೂರಲ್ಲಿ ನವರಾತ್ರಿ ಬಂತು. ಶಾಲೆಗಳನ್ನೆಲ್ಲಾ ಮುಚ್ಚಿದರು. ಮುಚ್ಚುವ ದಿನಸ ಉಪಾಧ್ಯಾಯರು-ಬಂದು “ನಾಡಿದ್ದು ಶ್ರಿಮನ್ಮಹಾರಾಜರು ಒಂಭತ್ತು ಘಂಟೆ ಸರಿಯಾಗಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುವರು. ಆ ವೇಳೆಯಲ್ಲಿ “ನಾವೆಲ್ಲರೂ ಹೋಗಿ ಆ ಮಹೋತ್ಸವವನ್ನು ನೋಡಲಿ’ ಎಂದು ಅರಮನೆಯ ಮುಂದೆ ಮರದ ಮೆಟ್ಟಲು ಹಾಕಿಸಿರುವರು. ನಾವು ಅಲ್ಲಿ ಹೋಗಿ ಕುಳಿತುಕೊಳ್ಳ ಬೇಕಾದರೆ ಎಂಟಕ್ಕೆ ಸರಿಯಾಗಿ ಹೋಗಬೇಕು. ನೀವೆಲ್ಲರೂ ಸರಿಯಾಗಿ ಇಲ್ಲಿಗೆ ಏಳೂವರೆ ಘಂಟೆಗೆ ಬಂದು ಬಿಡಿ. ಹೊತ್ತಾಗಿ ಬಂದವರಿಗೆ ನೋಟವು ತಪ್ಪಿ ಹೋಗುವುದು” ಎಂದು ಹೇಳಿದರು.

ನವರಾತ್ರಿಯ ಪಾಡ್ಯದ ದಿನ ಎಲ್ಲರೂ ಸರಿಯಾಗಿ ಏಳೂವರೆಗೆ ಬಂದರು. ಪುಟ್ಟೂಗೆ ನೋಟವನ್ನು ನೋಡಲು ಹೋಗುವೆನೆಂಬ ಸಂತೋಷ. ಕಂಡಕಂಡವರಿಗೆಲ್ಲ “ಮಹಾರಾಜರು ಸಿಂಹಾಸನದ ಮೇಲೆ ಕುಳಿತುಕೊಳ್ಳುವುದನ್ನು ನೋಡಲು ನಾವೆಲ್ಲ ಹೋಗುತ್ತೇವೆ” ಎಂದು ಹೇಳಿಕೊಂಡು ಹೊರಟನು. ಇವನು ಶಾಲೆಗೆ ಬರುವುದರೊಳಗೆ ಎಂಟುಘಂಟೆ ಆಗಿ ಹೋಯಿತು. ಎಲ್ಲಾ ಹುಡುಗರನ್ನೂ ಕರೆದುಕೊಂಡು ಉಪಾಧ್ಯಾಯರು ಹೊರಟು ಹೋಗಿದ್ದರು. ಪುಟ್ಟೂಗೆ ಬಹಳ ದುಃಖವಾಯಿತು. ಅರಮನೆಯ ಮುಂದಕ್ಕಾದರೂ ಹೋಗೋಣ ಎಂದುಕೊಂಡು ಆತುರದಿಂದ ಓಡಿಹೋದನು. ಅಲ್ಲಿಯೂ ಹೊತ್ತಾಗಿ ಹೋಗಿತ್ತು. ಉಪಾಧ್ಯಾಯರು ಎಲ್ಲರನ್ನೂ ಕರೆದುಕೊಂಡು ಹೋಗಿ ಮರದ ಮೆಟ್ಟಿಲಿನ ಮೇಲೆ ಕುಳಿತುಬಿಟ್ಟಿದ್ದರು. ಎಲ್ಲಿ ನೋಡಿದರೂ ಜನ. ಎತ್ತಲಾಗಿ ಹೋದರೂ ಪೋಲೀಸಿನವರು. ಇವನನ್ನು ಕೇಳುವವರೇ ಇಲ್ಲ. ಪುಟ್ಟೂ ಪೆಚ್ಚು ಮುಖ ಹಾಕಿಕೊಂಡು ಎಲ್ಲಿಯೋ ನಿಂತಿದ್ದು ಮನೆಗೆ ಹೋದನು.

ಆವತ್ತು ತಾನು ಪಟ್ಟ ದುಃಖವನ್ನು ಮರೆಯಲಿಲ್ಲ. ಅಂದಿನಿಂದ ಅವನು ಎಲ್ಲಿಗೆ ಹೋಗಬೇಕಾಗಿರಲಿ ಹೊತ್ತಿಗೆ ಸರಿಯಾಗಿ ಹೋಗುವನು. ಶಾಲೆಗಂತೂ ಅವನು ಯಾವತ್ತೂ ಹೊತ್ತು ಮೀರಿ ಹೋಗಲಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...