ಪುಟ್ಟೂ

ಮೈಸೂರಲ್ಲಿ ನವರಾತ್ರಿ ಬಂತು. ಶಾಲೆಗಳನ್ನೆಲ್ಲಾ ಮುಚ್ಚಿದರು. ಮುಚ್ಚುವ ದಿನಸ ಉಪಾಧ್ಯಾಯರು-ಬಂದು “ನಾಡಿದ್ದು ಶ್ರಿಮನ್ಮಹಾರಾಜರು ಒಂಭತ್ತು ಘಂಟೆ ಸರಿಯಾಗಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುವರು. ಆ ವೇಳೆಯಲ್ಲಿ “ನಾವೆಲ್ಲರೂ ಹೋಗಿ ಆ ಮಹೋತ್ಸವವನ್ನು ನೋಡಲಿ’ ಎಂದು ಅರಮನೆಯ ಮುಂದೆ ಮರದ ಮೆಟ್ಟಲು ಹಾಕಿಸಿರುವರು. ನಾವು ಅಲ್ಲಿ ಹೋಗಿ ಕುಳಿತುಕೊಳ್ಳ ಬೇಕಾದರೆ ಎಂಟಕ್ಕೆ ಸರಿಯಾಗಿ ಹೋಗಬೇಕು. ನೀವೆಲ್ಲರೂ ಸರಿಯಾಗಿ ಇಲ್ಲಿಗೆ ಏಳೂವರೆ ಘಂಟೆಗೆ ಬಂದು ಬಿಡಿ. ಹೊತ್ತಾಗಿ ಬಂದವರಿಗೆ ನೋಟವು ತಪ್ಪಿ ಹೋಗುವುದು” ಎಂದು ಹೇಳಿದರು.

ನವರಾತ್ರಿಯ ಪಾಡ್ಯದ ದಿನ ಎಲ್ಲರೂ ಸರಿಯಾಗಿ ಏಳೂವರೆಗೆ ಬಂದರು. ಪುಟ್ಟೂಗೆ ನೋಟವನ್ನು ನೋಡಲು ಹೋಗುವೆನೆಂಬ ಸಂತೋಷ. ಕಂಡಕಂಡವರಿಗೆಲ್ಲ “ಮಹಾರಾಜರು ಸಿಂಹಾಸನದ ಮೇಲೆ ಕುಳಿತುಕೊಳ್ಳುವುದನ್ನು ನೋಡಲು ನಾವೆಲ್ಲ ಹೋಗುತ್ತೇವೆ” ಎಂದು ಹೇಳಿಕೊಂಡು ಹೊರಟನು. ಇವನು ಶಾಲೆಗೆ ಬರುವುದರೊಳಗೆ ಎಂಟುಘಂಟೆ ಆಗಿ ಹೋಯಿತು. ಎಲ್ಲಾ ಹುಡುಗರನ್ನೂ ಕರೆದುಕೊಂಡು ಉಪಾಧ್ಯಾಯರು ಹೊರಟು ಹೋಗಿದ್ದರು. ಪುಟ್ಟೂಗೆ ಬಹಳ ದುಃಖವಾಯಿತು. ಅರಮನೆಯ ಮುಂದಕ್ಕಾದರೂ ಹೋಗೋಣ ಎಂದುಕೊಂಡು ಆತುರದಿಂದ ಓಡಿಹೋದನು. ಅಲ್ಲಿಯೂ ಹೊತ್ತಾಗಿ ಹೋಗಿತ್ತು. ಉಪಾಧ್ಯಾಯರು ಎಲ್ಲರನ್ನೂ ಕರೆದುಕೊಂಡು ಹೋಗಿ ಮರದ ಮೆಟ್ಟಿಲಿನ ಮೇಲೆ ಕುಳಿತುಬಿಟ್ಟಿದ್ದರು. ಎಲ್ಲಿ ನೋಡಿದರೂ ಜನ. ಎತ್ತಲಾಗಿ ಹೋದರೂ ಪೋಲೀಸಿನವರು. ಇವನನ್ನು ಕೇಳುವವರೇ ಇಲ್ಲ. ಪುಟ್ಟೂ ಪೆಚ್ಚು ಮುಖ ಹಾಕಿಕೊಂಡು ಎಲ್ಲಿಯೋ ನಿಂತಿದ್ದು ಮನೆಗೆ ಹೋದನು.

ಆವತ್ತು ತಾನು ಪಟ್ಟ ದುಃಖವನ್ನು ಮರೆಯಲಿಲ್ಲ. ಅಂದಿನಿಂದ ಅವನು ಎಲ್ಲಿಗೆ ಹೋಗಬೇಕಾಗಿರಲಿ ಹೊತ್ತಿಗೆ ಸರಿಯಾಗಿ ಹೋಗುವನು. ಶಾಲೆಗಂತೂ ಅವನು ಯಾವತ್ತೂ ಹೊತ್ತು ಮೀರಿ ಹೋಗಲಿಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...