ಪುಟ್ಟೂ

ಪುಟ್ಟೂ

ಮೈಸೂರಲ್ಲಿ ನವರಾತ್ರಿ ಬಂತು. ಶಾಲೆಗಳನ್ನೆಲ್ಲಾ ಮುಚ್ಚಿದರು. ಮುಚ್ಚುವ ದಿನಸ ಉಪಾಧ್ಯಾಯರು-ಬಂದು “ನಾಡಿದ್ದು ಶ್ರಿಮನ್ಮಹಾರಾಜರು ಒಂಭತ್ತು ಘಂಟೆ ಸರಿಯಾಗಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುವರು. ಆ ವೇಳೆಯಲ್ಲಿ “ನಾವೆಲ್ಲರೂ ಹೋಗಿ ಆ ಮಹೋತ್ಸವವನ್ನು ನೋಡಲಿ’ ಎಂದು ಅರಮನೆಯ ಮುಂದೆ ಮರದ ಮೆಟ್ಟಲು ಹಾಕಿಸಿರುವರು. ನಾವು ಅಲ್ಲಿ ಹೋಗಿ ಕುಳಿತುಕೊಳ್ಳ ಬೇಕಾದರೆ ಎಂಟಕ್ಕೆ ಸರಿಯಾಗಿ ಹೋಗಬೇಕು. ನೀವೆಲ್ಲರೂ ಸರಿಯಾಗಿ ಇಲ್ಲಿಗೆ ಏಳೂವರೆ ಘಂಟೆಗೆ ಬಂದು ಬಿಡಿ. ಹೊತ್ತಾಗಿ ಬಂದವರಿಗೆ ನೋಟವು ತಪ್ಪಿ ಹೋಗುವುದು” ಎಂದು ಹೇಳಿದರು.

ನವರಾತ್ರಿಯ ಪಾಡ್ಯದ ದಿನ ಎಲ್ಲರೂ ಸರಿಯಾಗಿ ಏಳೂವರೆಗೆ ಬಂದರು. ಪುಟ್ಟೂಗೆ ನೋಟವನ್ನು ನೋಡಲು ಹೋಗುವೆನೆಂಬ ಸಂತೋಷ. ಕಂಡಕಂಡವರಿಗೆಲ್ಲ “ಮಹಾರಾಜರು ಸಿಂಹಾಸನದ ಮೇಲೆ ಕುಳಿತುಕೊಳ್ಳುವುದನ್ನು ನೋಡಲು ನಾವೆಲ್ಲ ಹೋಗುತ್ತೇವೆ” ಎಂದು ಹೇಳಿಕೊಂಡು ಹೊರಟನು. ಇವನು ಶಾಲೆಗೆ ಬರುವುದರೊಳಗೆ ಎಂಟುಘಂಟೆ ಆಗಿ ಹೋಯಿತು. ಎಲ್ಲಾ ಹುಡುಗರನ್ನೂ ಕರೆದುಕೊಂಡು ಉಪಾಧ್ಯಾಯರು ಹೊರಟು ಹೋಗಿದ್ದರು. ಪುಟ್ಟೂಗೆ ಬಹಳ ದುಃಖವಾಯಿತು. ಅರಮನೆಯ ಮುಂದಕ್ಕಾದರೂ ಹೋಗೋಣ ಎಂದುಕೊಂಡು ಆತುರದಿಂದ ಓಡಿಹೋದನು. ಅಲ್ಲಿಯೂ ಹೊತ್ತಾಗಿ ಹೋಗಿತ್ತು. ಉಪಾಧ್ಯಾಯರು ಎಲ್ಲರನ್ನೂ ಕರೆದುಕೊಂಡು ಹೋಗಿ ಮರದ ಮೆಟ್ಟಿಲಿನ ಮೇಲೆ ಕುಳಿತುಬಿಟ್ಟಿದ್ದರು. ಎಲ್ಲಿ ನೋಡಿದರೂ ಜನ. ಎತ್ತಲಾಗಿ ಹೋದರೂ ಪೋಲೀಸಿನವರು. ಇವನನ್ನು ಕೇಳುವವರೇ ಇಲ್ಲ. ಪುಟ್ಟೂ ಪೆಚ್ಚು ಮುಖ ಹಾಕಿಕೊಂಡು ಎಲ್ಲಿಯೋ ನಿಂತಿದ್ದು ಮನೆಗೆ ಹೋದನು.

ಆವತ್ತು ತಾನು ಪಟ್ಟ ದುಃಖವನ್ನು ಮರೆಯಲಿಲ್ಲ. ಅಂದಿನಿಂದ ಅವನು ಎಲ್ಲಿಗೆ ಹೋಗಬೇಕಾಗಿರಲಿ ಹೊತ್ತಿಗೆ ಸರಿಯಾಗಿ ಹೋಗುವನು. ಶಾಲೆಗಂತೂ ಅವನು ಯಾವತ್ತೂ ಹೊತ್ತು ಮೀರಿ ಹೋಗಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮಸ್ತೇ!
Next post ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys