ಮಹಾತ್ಮರಿಗೆ

ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು
ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು
ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು
ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು.

ಎಲ್ಲ ಹೃದಯವ ಹೊಕ್ಕು – ಅಳೆದು ಜನುಮಗಳನ್ನು
ಎಲ್ಲ ಶೂಲೆಯನರಿದು – ಎರೆದು ಓಷಧಿಗಳನು
ಎಲ್ಲ ಹಿಂಸೆಯ ತೊಡೆದು – ಮುರಿದು ದುರ್ಗುಣಗಳನು
ಸೊಲ್ಲು ಸೊಲ್ಲಿಗೆ ಸತ್ಯ – ಕಾಣಿಸುವ ಗುರು ಶರಣು.

ನೀನು ನಡೆದುದೆ ಧರ್ಮ- ನೀನು ನುಡಿದುದೆ ಸತ್ಯ.
ನೀನಹಂಕಾರಗಳ – ಮೋಹ ರೋಷದ ಮಿಥ್ಯ
ಮಾನಾಭಿಮಾನಗಳ – ಹಾಯ್ದು ಕಂಡಿಹೆ ಸತ್ಯ.
ನೀನು ಪ್ರೇಮದ ಮೂರ್ತಿ – ಜಾಗ್ರತನು ನೀ ನಿತ್ಯ.

ಕೃಷ್ಣಟನಾಡಿತಮೆಲ್ಲ – ಹಾಸುಹೊಕ್ಕಾಗಿಹುದು
ಕೃಷ್ಣ ನೀನಾಗಿರಲು – ವಿಜಯರಾವಹುದಹುದು
ಈ ಕುರುಕ್ಷೇತ್ರದಲಿ – ನೀನು ಸಾರಥಿಯಾಗಿ
ಲೋಕ ರಕ್ಷಿಸು ಗಾಂಧಿ – ಸನ್ಮಹಾತ್ಮನೆ ಸಾಗಿ.

ಸತ್ವರಜತಮಗುಣವ – ಹಸುರು ಬಿಳಿ ಕೆಂಪುಗಳ
ನಿತ್ಯಕೇತನವೆತ್ತಿ – ಸ್ನೇಹದಿಂ ಲೋಕಗಳ
ಅತ್ಯಧಿಕ ವಾತ್ಸಲ್ಯ – ಅಭಯ ವಿಶ್ವಾಸಗಳ
ಸ್ತುತ್ಯ ಮೂರುತಿ ಶರಣು – ನೆನೆವೆ ನಿನ್ನಂಘ್ರಿಗಳ.

ಹತ್ತು ದಿಕ್ಕುಗಳಲ್ಲಿ – ಕರುಣವಾಹಿನಿ ಹರಿಸಿ
ಮತ್ತೆ ಬಿಂಬಿಸಿ ನಿನ್ನ – ನೆಲ್ಲ ಹೃದಯದೊಳಿರಿಸಿ
ಓ ಹಸನ್ಮುಖಿ ಬಾರ – ಶಾಂತಿ ಲೋಕದಿ ಸುರಿಸಿ
ಶ್ರೀಹಸಾದವ ನೀಡು- ಓ ಮಹಾತ್ಮನೆ ಹರಸಿ-

ವಾಣಿಯಲ್ಲಿ ಶ್ರೀರಾಮ – ರಾಮಚಂದ್ರನನಾಮ
ಕ್ಷೋಣಿಯಲಿ ರಘುರಾಮ – ನಾಮ ಪಾವನನಾಮ
ಸಕಲಕೆಲ್ಲಕು ಮರ್ದು – ರಾಂ ರಹೀಮರನಾಮ
ನಿಖಿಳದೇವರ ನಿಜವ – ನೊರೆವ ಸಾಧು ಸನಾಮ.

ನಿನ್ನ ಬಾಳೀ ಜಗದ- ರಕ್ಷಣೆಗೆ ಮುಡುಪಾಯ್ತು
ಸನ್ನುತನೆ ಭಾರತಿಯ – ಬಿಡುಗಡೆಗೆ ಎಡೆಯಾಯ್ತು
ಉನ್ನತಾಮಲ ಕೀರ್ತಿ – ಮಾನಿನಿಗೆ ಚಿರಮಾಯ್ತು.
ಮುನ್ನ ಸ್ವಾತಂತ್ರ್ಯಕ್ಕೆ – ಸುಸ್ಥಿರದ ಜಯಮಾಯ್ತು.

ಲೋಕವೇ ನಿನದಾಯ್ತು – ನೀನು ಸರ್ವರೊಳಿರಲು
ಶ್ರೀಕರಾಂಘ್ರಿಯ ರೇಣು – ಎಮ್ಮ ಶಿರದೊಳಗಿರಲು
ಸಾಕು ನಿನ್ನ ಸ್ಮರಣೆ – ಸಕಲರನ್ನೆಬ್ಬಿಸಲು
ಶೋಕದಳಿವುದು ದೇವ – ನಿನ್ನ ಕೃಪೆಯೊಂದಿರಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಶುಪಾಲ ವಧೆ
Next post ಭರವಸೆ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys