ಭರವಸೆ

ರಾಮಾ, ಮನದಲಿ ಹರಿದು ಬರಲಿ
ನೆನೆಯುವೆ ನಿತ್ಯ ನಿನ್ನ ನಾಮಾ
ನಿನ್ನೊಂದು ನೆನಪೆ ನನಗೀಗ
ಪಾವನವಾಗಿದೆ ನಾಮಾ

ಬದುಕು ಬವಣೆಗಳ ಮಧ್ಯ
ಸ್ವಾರ್ಥಗಳನು ಸಾಕಿ ಸಲುಹಿದೆ
ನನ್ನವರ ಬಾಳಿಸಲು ನಿತ್ಯವೂ
ಏನೆಲ್ಲ ಗಳಿಕೆಗೆ ತಿರುಗಿದೆ

ಯಾವ ಕ್ಷಣಕ್ಕೂ ಬರಲಿಲ್ಲ
ಆ ನಿನ್ನ ನೆನಪು ಧ್ಯಾನ
ನಶ್ವರದ ಬಾಳಿಗೆ ನಾ ನಂಬಿದೆ
ಮರೆತು ಸತ್ಯದ ಜ್ಞಾನ

ಎಲ್ಲೊ ಹುಟ್ಟು ಎಲ್ಲೊ ಮರಣವೊ
ಅಂಗೈ ರೇಖೆಯಲಿ ಚಿತ್ರಿಸಿದೆ
ಹಣೆಬರಹಗಳ ತಿದ್ದಿ ಕೊಳ್ಳುತ್ತನಾ
ಬದುಕಿನಾಳಕ್ಕೂ ನನ್ನನ್ನೆ ಮುದ್ರಿಸಿದೆ

ಈಗ ಮನದಲ್ಲಿಲ್ಲ ಆಸೆ ಸ್ನೇಹ
ಮತ್ತೆ ಬಾಳಲಿಲ್ಲ ಭವದ ಲಾಲಸೆ
ರಾಮ ಎನ್ನನ್ನು ಭವದಿ ಕಾಪಾಡು
ಮಾಣಿಕ್ಯ ವಿಠಲನಾಗಿ ಭರವಸೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮರಿಗೆ
Next post ಪಾಪಿಯ ಪಾಡು – ೨

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys