Home / ಕವನ / ತತ್ವಪದ / ಭರವಸೆ

ಭರವಸೆ

ರಾಮಾ, ಮನದಲಿ ಹರಿದು ಬರಲಿ
ನೆನೆಯುವೆ ನಿತ್ಯ ನಿನ್ನ ನಾಮಾ
ನಿನ್ನೊಂದು ನೆನಪೆ ನನಗೀಗ
ಪಾವನವಾಗಿದೆ ನಾಮಾ

ಬದುಕು ಬವಣೆಗಳ ಮಧ್ಯ
ಸ್ವಾರ್ಥಗಳನು ಸಾಕಿ ಸಲುಹಿದೆ
ನನ್ನವರ ಬಾಳಿಸಲು ನಿತ್ಯವೂ
ಏನೆಲ್ಲ ಗಳಿಕೆಗೆ ತಿರುಗಿದೆ

ಯಾವ ಕ್ಷಣಕ್ಕೂ ಬರಲಿಲ್ಲ
ಆ ನಿನ್ನ ನೆನಪು ಧ್ಯಾನ
ನಶ್ವರದ ಬಾಳಿಗೆ ನಾ ನಂಬಿದೆ
ಮರೆತು ಸತ್ಯದ ಜ್ಞಾನ

ಎಲ್ಲೊ ಹುಟ್ಟು ಎಲ್ಲೊ ಮರಣವೊ
ಅಂಗೈ ರೇಖೆಯಲಿ ಚಿತ್ರಿಸಿದೆ
ಹಣೆಬರಹಗಳ ತಿದ್ದಿ ಕೊಳ್ಳುತ್ತನಾ
ಬದುಕಿನಾಳಕ್ಕೂ ನನ್ನನ್ನೆ ಮುದ್ರಿಸಿದೆ

ಈಗ ಮನದಲ್ಲಿಲ್ಲ ಆಸೆ ಸ್ನೇಹ
ಮತ್ತೆ ಬಾಳಲಿಲ್ಲ ಭವದ ಲಾಲಸೆ
ರಾಮ ಎನ್ನನ್ನು ಭವದಿ ಕಾಪಾಡು
ಮಾಣಿಕ್ಯ ವಿಠಲನಾಗಿ ಭರವಸೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...