ಭರವಸೆ

ರಾಮಾ, ಮನದಲಿ ಹರಿದು ಬರಲಿ
ನೆನೆಯುವೆ ನಿತ್ಯ ನಿನ್ನ ನಾಮಾ
ನಿನ್ನೊಂದು ನೆನಪೆ ನನಗೀಗ
ಪಾವನವಾಗಿದೆ ನಾಮಾ

ಬದುಕು ಬವಣೆಗಳ ಮಧ್ಯ
ಸ್ವಾರ್ಥಗಳನು ಸಾಕಿ ಸಲುಹಿದೆ
ನನ್ನವರ ಬಾಳಿಸಲು ನಿತ್ಯವೂ
ಏನೆಲ್ಲ ಗಳಿಕೆಗೆ ತಿರುಗಿದೆ

ಯಾವ ಕ್ಷಣಕ್ಕೂ ಬರಲಿಲ್ಲ
ಆ ನಿನ್ನ ನೆನಪು ಧ್ಯಾನ
ನಶ್ವರದ ಬಾಳಿಗೆ ನಾ ನಂಬಿದೆ
ಮರೆತು ಸತ್ಯದ ಜ್ಞಾನ

ಎಲ್ಲೊ ಹುಟ್ಟು ಎಲ್ಲೊ ಮರಣವೊ
ಅಂಗೈ ರೇಖೆಯಲಿ ಚಿತ್ರಿಸಿದೆ
ಹಣೆಬರಹಗಳ ತಿದ್ದಿ ಕೊಳ್ಳುತ್ತನಾ
ಬದುಕಿನಾಳಕ್ಕೂ ನನ್ನನ್ನೆ ಮುದ್ರಿಸಿದೆ

ಈಗ ಮನದಲ್ಲಿಲ್ಲ ಆಸೆ ಸ್ನೇಹ
ಮತ್ತೆ ಬಾಳಲಿಲ್ಲ ಭವದ ಲಾಲಸೆ
ರಾಮ ಎನ್ನನ್ನು ಭವದಿ ಕಾಪಾಡು
ಮಾಣಿಕ್ಯ ವಿಠಲನಾಗಿ ಭರವಸೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮರಿಗೆ
Next post ಪಾಪಿಯ ಪಾಡು – ೨

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…