ರಾಮಾಯಣ

ಬರಲಿದ್ದಾನೆ ರಾಮ ಲಂಕೆಗೆ
ತಾಯೀ
ಬುಡವಿಲ್ಲ ನಿನ್ನ ಶಂಕೆಗೆ

ಹಾಗಾದರೆ ಹೇಳು ಸಖಿಯೇ ?
ನನ್ನ ಶ್ರೀರಾಮ ಅತ್ತ ಸುಖಿಯೇ ?

ವಾನರರು ಕಟ್ಟಿದ್ದಾರೆ ಸೇತುವೆ
ಇತ್ತ – ರಾಕ್ಷಸನ ಕಣ್ಣುಗಳು ಬಾತಿವೆ

ಹೆಜ್ಜೆ ಹೆಜ್ಜೆಗೂ ಗೂಢಚಾರ
ತರುತ್ತಿದ್ದಾನೆ ಸಮಾಚಾರ

ಹಾಗಾದರೆ ಹೇಳು ಸಖಿಯೇ
ನನ್ನ ಶ್ರೀರಾಮ ಅತ್ತ ಸುಖಿಯೇ ?

ಇನ್ನೇನು ನಡೆಯುತ್ತದೆ ಯುದ್ಧ
ಸೀತಾರಾಮನಿಗೇ ಜಯವು ಸಿದ್ಧ

ಅಯೋಧ್ಯಾ ರಾಜ್ಯಭಾರ
ರಾಮನಿಗೆ
ಇನ್ನಿಲ್ಲ ಬಹಳ ದೂರ

ಹಾಗಾದರೆ ಹೇಳು ಸಖಿಯೇ,
ಆಗಲಾದರೂ ನಾನು ಸುಖಿಯೇ ?

*
ನಾ ಹೇಳಲಾರೆ ಸೀತೆ
ತಾಯೀ
ನಾ ಹೇಳಲಾರೆ ಸೋತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ
Next post ಮನಸ್ಸು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys