ರಾಮಾಯಣ

ಬರಲಿದ್ದಾನೆ ರಾಮ ಲಂಕೆಗೆ
ತಾಯೀ
ಬುಡವಿಲ್ಲ ನಿನ್ನ ಶಂಕೆಗೆ

ಹಾಗಾದರೆ ಹೇಳು ಸಖಿಯೇ ?
ನನ್ನ ಶ್ರೀರಾಮ ಅತ್ತ ಸುಖಿಯೇ ?

ವಾನರರು ಕಟ್ಟಿದ್ದಾರೆ ಸೇತುವೆ
ಇತ್ತ – ರಾಕ್ಷಸನ ಕಣ್ಣುಗಳು ಬಾತಿವೆ

ಹೆಜ್ಜೆ ಹೆಜ್ಜೆಗೂ ಗೂಢಚಾರ
ತರುತ್ತಿದ್ದಾನೆ ಸಮಾಚಾರ

ಹಾಗಾದರೆ ಹೇಳು ಸಖಿಯೇ
ನನ್ನ ಶ್ರೀರಾಮ ಅತ್ತ ಸುಖಿಯೇ ?

ಇನ್ನೇನು ನಡೆಯುತ್ತದೆ ಯುದ್ಧ
ಸೀತಾರಾಮನಿಗೇ ಜಯವು ಸಿದ್ಧ

ಅಯೋಧ್ಯಾ ರಾಜ್ಯಭಾರ
ರಾಮನಿಗೆ
ಇನ್ನಿಲ್ಲ ಬಹಳ ದೂರ

ಹಾಗಾದರೆ ಹೇಳು ಸಖಿಯೇ,
ಆಗಲಾದರೂ ನಾನು ಸುಖಿಯೇ ?

*
ನಾ ಹೇಳಲಾರೆ ಸೀತೆ
ತಾಯೀ
ನಾ ಹೇಳಲಾರೆ ಸೋತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ
Next post ಮನಸ್ಸು

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…