ಭೂಮಿ

ನೆಲದೊಡಲಾಳದ ಭಾವಬೇರುಗಳ
ಹೊಯ್ದಾಟ ಚಡಪಡಿಕೆ ನೋವು ಹತಾಶೆ
ಕಿಡಿಬಿದ್ದರೆ ಕೊನೆ, ಭಯ ಆತಂಕ

ಕಾದು ಕಾದು ಬೆಂಡಾದ ಕಣ್ಣುಗಳಿಗೆ
ಬೆಂದ ಎದೆಗೂಡು ಹಸಿದೊಡಲುಗಳಿಗೆ
ತುಂಬಿನಿಂತ ಕಪ್ಪನೆಯ ಮೋಡಗಳ ಕಂಡು ಸಂಭ್ರಮ

ಒಳಗೊಳಗೆ ಹನಿಹನಿಗೆ ಹಪಿಹಪಿಸಿ
ಉಸುರಿಗೆ ಕೈಚಾಚಿ ಬೇಡಿ ಕಾಡುವ ಧೈನ್ಯತೆ
ಪ್ರೀತಿ ಇಲ್ಲದಿರೆ ಹುಲ್ಲು ಚಿಗುರುವುದೆಂತು?

ಬೇಕು ಮುತ್ತಿನ ಸ್ಪರ್ಶ, ಸ್ಪೂರ್ತಿಯ ಚಿಲುಮೆ
ಕೊರಡು ಕೊನರುವುದು ಹಸಿರು ತುಂಬುವುದು
ತಂಪಡರುವುದು ಒಡಲಾಳ

ರಾತ್ರಿ ಹಗಲು ನಿರಂತರ ಮಳೆ ಹನಿಯತೊಡಗಿದ್ದು
ಪಾತರಗಿತ್ತಿಗೆ ಸಂಭ್ರಮ ಒಡಲತುಂಬ ತುಂಬಿ
ಬೇರು ನೂರು ಸಾವಿರದ ಟಿಸಿಲಾಗಿ
ಚಿಗುರೊಡೆದಿತ್ತು ಅಂಗಳಂಗಳಕೆ
ಆಸೆ ಹಸಿರಾಗಿತ್ತು ಎಲೆ‌ಎಲೆಗೆ
*****

ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗಳಗಂಟ ಸಾಯ್ತಿಗಳ ಹಗ್ಗ ಜಗ್ಗಾಟ
Next post ರಾಮಾಯಣ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys