ಹಗೆಯ ಗೆಳೆಯ


ಜಯವು ಶಾಂತಿಯ ಶರಣ, ಭಾರತ-
ಪಾರತಂತ್ರ್ಯ ನಿವಾರಣಾ!
ಜಯ ಮಹಾತ್ಮಾ, ಜಯವು ಮೋಹನ,
ಪತಿತಜನ ಸಂಜೀವನಾ !


ಬೆಳಕು ಬಿದ್ದಿತು ಭರತಭುವಿಯಲಿ
ಜನ್ಮಿಸಲು ಗುರುಗಾಂಧಿಯು,
ಕಳಕಳನೆ ನಗೆಯೆದ್ದು ನಿಂತಿತು,
ಶಾಂತಿ-ಸೌಖ್ಯದ ನಾಂದಿಯು !


ಭರತಮಾತೆಯ ಪೂರ್ವಪುಣ್ಯವೆ
ಪುರುಷರೂಪವ ತಳೆಯಿತೋ,
ಕರಮಚಂದರ ಮನೆಯೊಳಾಡುತ
ಅರಿವನುಣ್ಣುತ ಬೆಳೆಯಿತೋ !


ಪುಣ್ಯ ಪುರುಷನ ತೆರೆದ ಕಂಗಳು
ಕಂಡವೈ ಜನದವನತಿ ;
ತನ್ನ ತಾಯ್‌ನೆಲ ಅನ್ನಿಗರ ವಶ-
ಅಣ್ಣ-ತಮ್ಮರ ದುರ್‍ಗತಿ !


ಪೊಡವಿ ತಮ್ಮದು, ದುಡಿಮೆ ತಮ್ಮದು,
ಕಡೆಯಿರದ ಸಿರಿ ತಮ್ಮದು….
ಒಡಲಿಗನ್ನವು ಉಡಲು ವಸನವು
ಇರದೆ ಜನ ಬಾಯ್‌ಬಿಡುವುದು !


ನೋಡಿದನು ಗುರುಗಾಂಧಿದೇವನು-
ನಾಡಿಗರ ಪರಿತಾಪವ ;
ಓಡಿಸುವೆ ಪರದಾಸ್ಯಭೂತವ-
ನೆಂದು ಹಿಡಿದನು ಚಾಪವ!


ಕತ್ತಿಯಿಲ್ಲದ ನೆತ್ತರಿಲ್ಲದ
ಸತ್ಯಸಮರದ ನೀತಿಯ-
ಒತ್ತಿಸಾರುತ ಕಿತ್ತಿಸಿದನಿವ
ಹಗೆಯ ಹಿಂಸೆಯ ಭೀತಿಯ!


ಭರತಧರಣಿಯೊಳೆಲ್ಲ ತಿರುಗುತ
ಮುರಲಿಯೂದಿದ ಮೋಹನ;
ಕುರಿಜನರು ನರಹರಿಗಳಾದರು,
ಅರಿತರೋ ತಮ್ಮಾಳ್‌ತನ !


ಹಗೆಯು ಸೋತನು, ಶರಣುಬಂದನು,
ಜಗದ ಗುರು ನೀನೆಂದನು ;
ನಗುತ ಗಾಂಧಿಯು ಹಗೆಯನುಪ್ಪುತ
ಗೆಳೆಯನಾಗಿಯೆ ನಿಂದನು.

೧೦
ಇಂದು ಗಾಂಧಿಯ ಗೆಯ್ಮೆಯಿಂದಲಿ
ಬಂಧಮುಕ್ತಳು ಭಾರತಿ,
ಎಂದೆ ಕಂದರು ಸೇರಿ ಗಾಂಧಿಗೆ
ಬೆಳಗುವೆವು ನಾವಾರತಿ!

೧೧
ಜಯವು ಶಾಂತಿಯ ಶರಣ ಭಾರತ-
ಪಾರತಂತ್ರ್ಯನಿವಾರಣಾ !
ಜಯ ಮಹಾತ್ಮಾ ಜಯವು ಮೋಹನ
ಪತಿತಜನ ಸಂವಾಹನಾ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು
Next post ಗಿಳಿವಿಂಡು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys