ಹಗೆಯ ಗೆಳೆಯ


ಜಯವು ಶಾಂತಿಯ ಶರಣ, ಭಾರತ-
ಪಾರತಂತ್ರ್ಯ ನಿವಾರಣಾ!
ಜಯ ಮಹಾತ್ಮಾ, ಜಯವು ಮೋಹನ,
ಪತಿತಜನ ಸಂಜೀವನಾ !


ಬೆಳಕು ಬಿದ್ದಿತು ಭರತಭುವಿಯಲಿ
ಜನ್ಮಿಸಲು ಗುರುಗಾಂಧಿಯು,
ಕಳಕಳನೆ ನಗೆಯೆದ್ದು ನಿಂತಿತು,
ಶಾಂತಿ-ಸೌಖ್ಯದ ನಾಂದಿಯು !


ಭರತಮಾತೆಯ ಪೂರ್ವಪುಣ್ಯವೆ
ಪುರುಷರೂಪವ ತಳೆಯಿತೋ,
ಕರಮಚಂದರ ಮನೆಯೊಳಾಡುತ
ಅರಿವನುಣ್ಣುತ ಬೆಳೆಯಿತೋ !


ಪುಣ್ಯ ಪುರುಷನ ತೆರೆದ ಕಂಗಳು
ಕಂಡವೈ ಜನದವನತಿ ;
ತನ್ನ ತಾಯ್‌ನೆಲ ಅನ್ನಿಗರ ವಶ-
ಅಣ್ಣ-ತಮ್ಮರ ದುರ್‍ಗತಿ !


ಪೊಡವಿ ತಮ್ಮದು, ದುಡಿಮೆ ತಮ್ಮದು,
ಕಡೆಯಿರದ ಸಿರಿ ತಮ್ಮದು….
ಒಡಲಿಗನ್ನವು ಉಡಲು ವಸನವು
ಇರದೆ ಜನ ಬಾಯ್‌ಬಿಡುವುದು !


ನೋಡಿದನು ಗುರುಗಾಂಧಿದೇವನು-
ನಾಡಿಗರ ಪರಿತಾಪವ ;
ಓಡಿಸುವೆ ಪರದಾಸ್ಯಭೂತವ-
ನೆಂದು ಹಿಡಿದನು ಚಾಪವ!


ಕತ್ತಿಯಿಲ್ಲದ ನೆತ್ತರಿಲ್ಲದ
ಸತ್ಯಸಮರದ ನೀತಿಯ-
ಒತ್ತಿಸಾರುತ ಕಿತ್ತಿಸಿದನಿವ
ಹಗೆಯ ಹಿಂಸೆಯ ಭೀತಿಯ!


ಭರತಧರಣಿಯೊಳೆಲ್ಲ ತಿರುಗುತ
ಮುರಲಿಯೂದಿದ ಮೋಹನ;
ಕುರಿಜನರು ನರಹರಿಗಳಾದರು,
ಅರಿತರೋ ತಮ್ಮಾಳ್‌ತನ !


ಹಗೆಯು ಸೋತನು, ಶರಣುಬಂದನು,
ಜಗದ ಗುರು ನೀನೆಂದನು ;
ನಗುತ ಗಾಂಧಿಯು ಹಗೆಯನುಪ್ಪುತ
ಗೆಳೆಯನಾಗಿಯೆ ನಿಂದನು.

೧೦
ಇಂದು ಗಾಂಧಿಯ ಗೆಯ್ಮೆಯಿಂದಲಿ
ಬಂಧಮುಕ್ತಳು ಭಾರತಿ,
ಎಂದೆ ಕಂದರು ಸೇರಿ ಗಾಂಧಿಗೆ
ಬೆಳಗುವೆವು ನಾವಾರತಿ!

೧೧
ಜಯವು ಶಾಂತಿಯ ಶರಣ ಭಾರತ-
ಪಾರತಂತ್ರ್ಯನಿವಾರಣಾ !
ಜಯ ಮಹಾತ್ಮಾ ಜಯವು ಮೋಹನ
ಪತಿತಜನ ಸಂವಾಹನಾ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು
Next post ಗಿಳಿವಿಂಡು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…