Home / ಕವನ / ಕವಿತೆ / ಗಿಳಿವಿಂಡು

ಗಿಳಿವಿಂಡು

ಒಂದರಳೆ ಮರದಲ್ಲಿ
ಸಂಜೆಯಾಗಿರುವಲ್ಲಿ
ಒಂದೊಂದೆ ಮರಳುವವು ಸಾಲುಗೊಂಡು :
ಒಂದೊಂದೆ ಮರಳುವವು
ಗಿಳಿಯೆಲ್ಲ ತೆರಳುವವು
ಗೂಡುಗೊಂಡಿಹ ಮರವನಿದಿರುಗೊಂಡು.

ಸಂಧ್ಯೆಯಿಂದೀಚೆಗೆನೆ
ಸ್ಮರನೆಚ್ಚ ಶರಗಳೆನೆ
ತಾಗುತಿದೆ ಗಿಳಿಹಿಂಡು ಬಂದು ಮರಕೆ.
ಕೊಂಬೆಮೇಲೆಳೆಮರಿಯು
ನಂಬಿ ತಾಯಿಯನರಿಯು-
ತಿರೆ ಮಿಡಿಯಿತೆನ್ನೆದೆಯು ದೀನ ಸ್ವರಕೆ.

ಮರ, ಸ್ಮರನ ಬೀಡೆಂದು-
ಗಿಳಿಗಾವಲಿಹುದೆಂದು-
ಗಳಹುತಿದ್ದನು ಹಳೆಯ ದಿನದ ಕವಿಯು :
ಅಂದಿನಾ ಬಾಳಿನಾ
ಇಂದಿನಾ ಹಾಳಿನಾ
ಗತಿ ಬೇರೆ ಶ್ರುತಿ ಬೇರೆ,-ಕಹಿಯು ಸವಿಯು,

ನೂರಾರು ಗಿಳಿಯ ಮನೆ-
ಯೊಳಗೊಂಡ ಮರದ ಕೊನೆ-
ಯೆಲೆಗಳಲಿ ತೂರಾಡಿ ಚೀರಾಡುತ
ಒಂದು ಗಿಳಿಯಿನ್ನೊಂದ-
ನಲ್ಲಿ ಭೀ ಥೂ ಎಂದು,
ತನ್ನದಿದು ತನಗೆಂದು ಹೋರಾಡುತ

ಬರೆ, ಕೇಳಿ ಚೀರ್‍ದನಿಯ,
ನೋಡಿಲ್ಲಿ! ಹೂಗಣೆಯ
ಹಬ್ಬ ವಿಹುದೆನಬಹುದೆ ಕಣ್ಣು ಮುಚ್ಚಿ?
ಒಂದು ಗಿಳಿಯಿನ್ನೊಂದ-
ನೆದುರಿಸಲು ಕಡುನೊಂದು
ಕದನವೆಸಗುತ ಕೂಕ್ಕೆ ಚುಚ್ಚಿ ಚುಚ್ಚಿ?

ಒಂದೊಂದು ಗಿಳಿಗೊಂದು
ಮನೆಯಿಹುದು ಇದ್ದರೂ
ಗಿಳಿಯ ಗೊಂದಣನಿಂತು ಹಾರ್‍ವುದೇಕೆ?
ಬೇರೊಂದು ಗಿಳಿಯ ಮನೆ-
ಯನ್ನು ಸೇರುತ ಕಲಹ-
ವೆಸಗಿ ತಿಳಿವಿಲ್ಲದಲೆ ಸಾರ್‍ವುದೇಕೆ?

ಎಲ್ಲರಿಗೆ ಸವಿಗನಸು,
ಎಲ್ಲರಿಗೆ ಸವಿತಿನಸು,
ಎಲ್ಲರಿಗದೆಲ್ಲವನು ಕೊಡುವಳಿಳೆಯು.
ಕಲ್ಲೆದೆಯವರು ಕೆಲರು
ಮೆಲ್ಲುವರದೆಲ್ಲವನು
ಇಲ್ಲಿಹುದು ನೋಡು ಅನ್ಯಾಯದೆಳೆಯು!

ಬಳಿಗೆ ಸುಳಿವಳು ರಾತ್ರಿ
ಇವಳೆ ಎಲ್ಲರ ಧಾತ್ರಿ!
ತಲೆಗೊಂದು ಮಂಚವನು ಮಲಗಲಿತ್ತು
ಹಗಲೆಲ್ಲ ಹಿರಿ ವಯಣ,
ಮುಗಿಲುದ್ದ ಕುಡ್ಯಾಣ-
ಕಣಿಗೊಳಿಸುವಳು ಗಿಳಿಯ, ಕ್ರಾಂತಿವೆತ್ತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...