ಹುಲಿಯೂ ಬೆಕ್ಕೂ

ಹುಲಿಯೂ ಬೆಕ್ಕೂ

ಹುಲಿಯು ಚೆಕ್ಕಿನ ಹತ್ತಿರ ವಿದ್ಯೆಯನ್ನು ಕಲಿಯುವುದಕ್ಕೆ ಹೋಯಿತು. ಬೆಕ್ಕು “ಅಯ್ಯಾ! ನಿನಗೆ ಸಿಟ್ಟು ಬಹಳ, ನೀನು ಆ ಸಿಟ್ಟು! ಬಿಟ್ಟರೆ ಆಗಬಹುದು” ಎಂದಿತು. ಹುಲಿಯು “ಹಾಗೇ ಆಗಲಿ” ಎಂದು ಒಪ್ಪಿ ಕೊಂಡಿತು. ಬೆಕ್ಕು ಅಕ್ಕರೆಯಿಂದ ಕಲಿಸಲು ಮೊದಲು ಮಾಡಿತು.

ಆದರೆ ಬೆಕ್ಕಿಗೆ ಬಹಳ ಬುದ್ಧಿ. ತನಗಿಂತ ಗಾತ್ರದಲ್ಲಿ ದೊಡ್ಡದಾದ ಹುಲಿಯು ಮೇಲೆ ಬಿದ್ದರೆ ತಾನು ಉಳಿಯುವುದು ಅನುಮಾನವೆಂದು, ದೂರದಲ್ಲಿಯೇ ಇರುತ್ತಿತ್ತು. ಗುಟ್ಟರೆ ಹಾಕುವುದು, ಸದ್ದಾಗದಂತೆ ನಡೆಯುವುದು, ಪೊದೆಗಳಲ್ಲಿ ಅವಿತುಕೊಳ್ಳುವುದು, ಗುರಿಯಿಟ್ಟು ಹಾರುವುದು ಮೊದಲಾದ ವಿದ್ಯೆಗಳನ್ನು ಹೇಳಿಕೊಟ್ಟಿತು. ಹುಲಿಯು ಬಹಳ ವಿಧೇಯನಾಗಿ ಎಲ್ಲವನ್ನೂ ಕಲಿತುಕೊಂಡಿತು. ಅಲ್ಲಿಗೆ ಒಂದು ವರುಷವಾಯಿತು.

ಎರಡನೆಯ ವರುಷ ಕೊಂಚ ಕಷ್ಟದ ಪಾಠಗಳಿಗೆ ಆರಂಭವಾಯಿತು. ಕತ್ತಲಲ್ಲಿ ನೋಡುವುದು, ಹೊಂಚು ಹಾಕುವುದು, ಬಾಲವನ್ನು ನೆಲಕ್ಕಪ್ಪಳಿಸುವುದು, ಇವೆಲ್ಲವನ್ನೂ ಕಲಿತುಕೊಂಡಿತು.

ಮೂರನೆಯ ವರುಷ ಇನ್ನೂ ಕಷ್ಟದ ಪಾಠಗಳು. ಆದರೆ ಆಲ್ಲಿ ಕಲಿಯುವುದು ಹೆಚ್ಚಾಗಿರಲಿಲ್ಲ. ಆ ವರ್‍ಷ, ಉಗುರುಗಳನ್ನು ಬೇಕಾದಾಗ ಈಚೆಗೆ ಬಿಡುವುದು, ಬೇಡವಾದಾಗ ಒಳಗೆ ಎಳೆದುಕೊಳ್ಳುವುದು ಇದೊಂದು, ಮರ ಹತ್ತುವುದೊಂದು, ಹೀಗೆ ಎರಡೇ ಕಲಿಯಬೇಕಾಗಿದ್ದುದು. ಹುಲಿಯು ಉಗುರನ್ನು ಬಿಟ್ಟು ಎಳೆದುಕೊಳ್ಳುವುದನ್ನು ಕಲಿತುಕೊಂಡಿತು. ಬೆಕ್ಕು ಮರವನ್ನು ಹತ್ತುವುದನ್ನು ಹೇಳಿಕೊಡುತ್ತದೆ. ಎಷ್ಟುಸಲ ಹೇಳಿದರೂ ಹುಲಿಯು ಎಲ್ಲೋ ನೋಡಿಕೊಂಡಿತ್ತು. ಅದಕ್ಕೆ ತಿಳಿಯಲಿಲ್ಲ. ಅದಕ್ಕಾಗಿ ಬೆಕ್ಕು ಅದನ್ನು ಬೆತ್ತದಿಂದ ಹಾಗೆಂದಿತು, ಹುಲಿಯು ತಿರುಗಿ ತಟ್ಟನೆ ಮೇಲೆ ಬಿತ್ತು. ಆದರೆ ಬೆಕ್ಕು ಬಹಳ ಎಚ್ಚರಿಕೆಯಿಂದಿತ್ತು. ಹುಲಿಗೆ ಸಿಕ್ಕಲಿಲ್ಲ. ತಟ್ಟನೆ ಮರವನ್ನು ಹತ್ತಿ ಕೊಂಡಿತು. ಹುಲಿಗೆ ಮರ ಹತ್ತಲು ಆಗಲಿಲ್ಲ. ಆಗ ಅದಕ್ಕೆ “ನನಗೆ ಮರವನ್ನು ಹತ್ತುವುದು ಬರುವುದಿಲ್ಲ” ಎಂಬುದು ನೆನಪಿಗೆ ಬಂತು.

ಮತ್ತೆ ಬೆಕ್ಕು ಅವಿಧೇಯನಾದ ಹುಲಿಯನ್ನು ನಂಬಲಿಲ್ಲ. ತನ್ನ ಕೆಟ್ಟ ನಡತೆಗಾಗಿ ಹುಲಿಯು ಬಹಳ ನೊಂದುಕೊಂಡಿತು. ತಾನು ವಿಧೇಯನಾಗಿರುವೆನೆಂದು ಹೇಳಿಕೊಂಡಿತು. ಬೆಕ್ಕು “ನೀನು ಅವಿಧೇಯ. ಹೇಳಿದ ಹಾಗೆ ಕೇಳುವವನಲ್ಲ. ನಿನಗೆ ನಾನು ಪಾಠ ವನ್ನು ಹೇಳುವುದಿಲ್ಲ” ಎಂದು ಹೇಳಿಬಿಟ್ಟಿತು. ಹುಲಿಯು ಅತ್ತು, ಕಣ್ಣೀರು, ಕರೆಯಿತು. ಆದರೂ ಬೆಕ್ಕು ಮರ ಹತ್ತುವುದನ್ನು ಅದಕ್ಕೆ ಕಲಿಸಿ ಕೊಡಲಿಲ್ಲ. “ನನಗೆ ಮರ ಹತ್ತುವುದು ಬರುನುದಿಲ್ಲ” ಎಂದು ಹುಲಿಯು ಈಗಲೂ ಅಳುವುದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಳಿವಿಂಡು
Next post ಷೇಕ್ಸ್‌ಪಿಯರನನ್ನು ಕುರಿತು

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…