Home / ಬಾಲ ಚಿಲುಮೆ / ಕಥೆ / ರಾಮೂ ಶ್ಯಾಮೂ

ರಾಮೂ ಶ್ಯಾಮೂ

ರಾಮೂ ಶ್ಯಾಮೂ ಇಬ್ಬರೂ ಒಳ್ಳೆಯ ಸಂಗಾತಿಗಳು. ಯಾವಾಗಲು ಅವರು ಜತೆಯಲ್ಲೇ ಇರುವರು. ಅಡುವಾಗ ಇಬ್ಬರೂ ಒಟ್ಟಿಗೆ ಆಡುವರು. ಓದುವಾಗ ಇಬ್ಬರೂ ಓದುವರು ಆದರೂ ಇವರಿಬ್ಬರಿಗೂ ಒಂದು ಭೇದವಿತ್ತು. ರಾಮು ಹೊತ್ತಿಗೆ ಸರಿಯಾಗಿ ಶಾಲೆಗೆ ಬರುವನು. ಶ್ಯಾಮು ಹೊತ್ತು ಹೋಗಿಯೇ ಬರುವನು. ಎಂಟು ಘಂಟೆಗೆ ಬರಬೇಕಾದರೆ ಎಂಟೂವರೆಗೆ ಬರುವನು.

ಮಹಾರಾಜರ ವರ್‍ಧಂತಿ ಬಂತು. ಉಪಾಧ್ಯಾಯರು ಬಂದು “ಈ ದಿನ ಎಲ್ಲರಿಗೂ ಲಾಡು ಕೊಡುತ್ತದೆ. ಎಲ್ಲರೂ ಮೂರು ಘಂಟೆಯ ವೇಳೆಗೆ ಸರಿಯಾಗಿ ಇಲ್ಲಿಗೆ ಬಂದು ಇರಬೇಕು” ಎಂದು ಹೇಳಿದರು.

ರಾಮೂಗೆ ಗೊತ್ತು ಶ್ಯಾಮು ಹೊತ್ತಾಗಿ ಬರುತ್ತಾನೆ ಎಂದು. ಆದರೆ ಶ್ಯಾಮೂಗೆ ಲಾಡು ತಪ್ಪಿ ಹೋಗುವುದು ಅವನಿಗೆ ಇಷ್ಟವಿಲ್ಲ. ಅದಕ್ಕಾಗಿ ಅವನು ಶ್ಯಾಮು ಮನೆಗೆ ಒಂದೂವರೆಗೇ ಹೋದನು, ಅವನು ಇನ್ನೂ ಊಟವೇ ಮಾಡಿರಲಿಲ್ಲ. “ಶಾಲೆಗೆ ಬರುವುದಿಲ್ಲವೇನೋ? ಲಾಡು ಕೊಡುತ್ತಾರೆ” ಎಂದನು. “ಹೌದಪ್ಪ! ಬೇಗ ಹೋಗಬೇಕು” ಎಂದು ಶ್ಯಾಮೂ ಅವಸರಪಟ್ಟು, ಬೇಗ ಬೇಗ ಊಟಮಾಡಿದನು. ಮಡಿಬಟ್ಟೆಗಳನ್ನು ಉಟ್ಟು ತೊಟ್ಟು ಕೊಂಡನು. ರಾಮೂ ಜತೆಯಲ್ಲಿ ಶಾಲೆಗೆ ಬಂದನು. ಅವನಿಗೆ, ಏನೋ ಬಹಳ ಜಾಗ್ರತೆ ಬಂದಂತೆ ಇದ್ದರೂ, ಎರಡೂ ಮುಕ್ಕಾಲು ಘಂಟೆಯಾಗಿತ್ತು. ಶ್ಯಾಮು ಹೊತ್ತಿಗೆ ಸರಿಯಾಗಿ ಬಂದುದು ಎಲ್ಲರಿಗೂ ಆಶ್ಚರ್‍ಯ. ಮೂರು ಘಂಟೆಗೆ ಸರಿಯಾಗಿ ಘಂಟೆಯು ಬಾರಿಸಿತು. ಹುಡುಗರೆಲ್ಲರೂ ಬಂದು ಶಾಲೆಯ ಅಂಗಳದಲ್ಲಿ ಸೇರಿದರು. ಉಪಾಧ್ಯಾಯರು ಬಾಗಿಲಲ್ಲಿ ನಿಂತು, ಒಬ್ಬೊಬ್ಬರಿಗೆ ಒಂದೊಂದು ಲಾಡು ಕೊಟ್ಟು ಕಳುಹಿಸಿದರು.

ರಾಮೂ ಶ್ಯಾಮೂ ಲಾಡುವನ್ನು ಈಸಿ ಕೊಂಡು ಈಚೆಗೆ ಬಂದರು. ಬಾಗಿಲಲ್ಲಿ ಭೀಮನು ಅಳುತ್ತ ನಿಂತಿದ್ದನು. ಉಪಾಧ್ಯಾಯರು “ನಿನಗೆ ಅದೇ ಶಿಕ್ಷೆ! ಕೊಡುವುದಿಲ್ಲ ಹೋಗು” ಎನ್ನುತ್ತಿದ್ದರು. ಭೀಮನು ಅಳುತ್ತಿದ್ದನು. ರಾಮುವು “ಶ್ಯಾಮೂ! ನೋಡಿದೆಯಾ? ನಿನಗೂ ಹೀಗೆ ಆಗಬೇಕಾಗಿತ್ತು. ನೀನು ನಿತ್ಯ ಬರುತ್ತಿದ್ದ ಹಾಗೆ ಇವನು ಹೊತ್ತುಮೀರಿ ಬಂದನು. ಇವನಿಗೆ ಲಾಡು ತಪ್ಪಿ ಹೋಯಿತು” ಎಂದನು.

ಆವತ್ತು ಅವನಿಗೆ ತಾನು ಮಾಡುತ್ತಿದ್ದ ತಪ್ಪು ತಿಳಿಯಿತು. “ನಿತ್ಯವೂ ಹೊತ್ತಿಗೆ ಸರಿಯಾಗಿ ಶಾಲೆಗೆ ಹೋಗು” ಎಂದು ತಂದೆ ತಾಯಿಗಳು ಹೇಳುತ್ತಿದ್ದರು ಅವನೂ ಹೂ ಎಂದುಕೊಂಡಿದ್ದನು ಅಷ್ಟೆ. ಆದರೆ ಆವತ್ತು ಅವನಿಗೆ ತಿಳಿಯಿತು. ಇನ್ನು ಮೇಲೆ ಯಾವತ್ತೂ ಹೊತ್ತುಹೋಗಿ ಶಾಲೆಗೆ ಹೋಗುವುದಿಲ್ಲ ‌ಎಂದು ಮಸ್ಸಿನಲ್ಲಿ ಗಟ್ಟಿ ಮಾಡಿದನು. ಅದೇ ಮೇರೆಗೆ ಹೊತ್ತಿಗೆ ಸರಿಯಾಗಿ ಬರಲಾರಂಭಿಸಿದನು.

ಈಗ ಅದೇ ಶ್ಯಾಮು ದೊಡ್ಡ ವ್ಯಾಪಾರಿಯಾಗಿದ್ದಾನೆ. ಈಗ ಅವನನನ್ನು ಕೇಳಿದರೆ “ಹುಡುಗರು ಯಾವಾಗಲೂ ಹೊತ್ತು ಮೀರಿ ಹೋಗಬಾರದು” ಎಂದು ತನ್ನ ಕಥೆಯನ್ನು ಹೇಳುತ್ತಾನೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...