Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ಕೆನೆವೆಳಕಿನ ಸೊನೆಯ ಚಂದ್ರ-
ನಾದನು ಕಪ್ಪಿಡಿದ ಲಾಂದ್ರ
ಪವನವಾಯ್ತು ತಾಮ್ರದ ವೈ
ಕತ್ತಲೆಯೇ ಎತ್ತಿದ ಕೈ.
ಮರುಳೆಂದವು – ಸೈ, ಸೈ, ಸೈ!
ದೆವ್ವ ಕುಣಿಯೆ : ಹೈ, ಹೈ, ಹೈ!
ತಬ್ಬಿಬ್ಬಾದವು ತಾರೆ
ಮಬ್ಬಿಡಿಯಲು ಹೌಹಾರೆ!

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ!
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ತುಂಬುದೆರೆಯ ತಂಬುಲವನು
ತುಂಬ ಮೆಲುವ ಹಂಬಲವನು
ತಳೆದರಂತೆ ರಾಹು ಕೇತು :
ನೋಡಿದೆಂಧ ಹೇತು, ಬೇತು !
ಕಾಡಿನಲ್ಲಿ ಕಗ್ಗತ್ತಲೆ,
ಮನೆ ಮನೆಯಲಿ ಮಡಿಬತ್ತಲೆ !
ಬಂದಿತಾವುದೋ ವಿಪತ್ತು
ಮಂದಿ ತಿಳಿಯರದರ ಗತ್ತು.

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ರಾಹು ಕೇತು ರಗಳೆ, ಕಂತೆ;
ಅಂಜಿಕೆಗಳ ಬಂಜೆ ಸಂತೆ.
ಮಣ್ಣಿಗರಿಗೆ ಹೊಳೆದಿರುವುದು,-
ಸತ್ಯಕಥೆಯು ತಿಳಿದಿರುವುದು :
ಹೊಂಗದಿರನಿಗೆದುರಾಗಿ
ಭೂಮಿಯು ಬರುತಿರಲಾಗಿ
ಬೀಳುತಿರುವ ಕಪ್ಪುನೆಳಲು-
ಅದುವೆ ಚಂದ್ರನಳಲು-ಬಳಲು
ಹುಣ್ಣಿಮೆಯನೆ ನುಂಗುವಂಥ
ರಾಹು ನಾವು, ನಮ್ಮ ಪಂಥ
ಪಂಧಾನವ ಸುತ್ತಿದೆ,
ಮುದ್ದು ಮುಗಿಲ ಮುತ್ತಿದೆ :
ಭೂಮಂಡಲ ಕೆಣಕುತಿದೆ,
ಗ್ರಹಮಂಡಲ ಹೆಣಗುತಿದೆ :
ಸಾಯ್ವೆಳಕದು ಮಿಣುಕುತಿದೆ:-

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಉಳಿದವಕೂ ತುಂಬಿದೆ ದಿನ.
ನಾಳೆ ಸೂರ್‍ಯಗ್ರಹಣ.

ಮೇಳದ ಹಿರಿಯ

ದೇ ದಾನ್ ! ಸುಟೇ ಗ್ರಾನ್ !
ದೇ ದಾನ್ ! ಸುಟೇ ಗ್ರಾನ್ !
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...