Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ಕೆನೆವೆಳಕಿನ ಸೊನೆಯ ಚಂದ್ರ-
ನಾದನು ಕಪ್ಪಿಡಿದ ಲಾಂದ್ರ
ಪವನವಾಯ್ತು ತಾಮ್ರದ ವೈ
ಕತ್ತಲೆಯೇ ಎತ್ತಿದ ಕೈ.
ಮರುಳೆಂದವು – ಸೈ, ಸೈ, ಸೈ!
ದೆವ್ವ ಕುಣಿಯೆ : ಹೈ, ಹೈ, ಹೈ!
ತಬ್ಬಿಬ್ಬಾದವು ತಾರೆ
ಮಬ್ಬಿಡಿಯಲು ಹೌಹಾರೆ!

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ!
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ತುಂಬುದೆರೆಯ ತಂಬುಲವನು
ತುಂಬ ಮೆಲುವ ಹಂಬಲವನು
ತಳೆದರಂತೆ ರಾಹು ಕೇತು :
ನೋಡಿದೆಂಧ ಹೇತು, ಬೇತು !
ಕಾಡಿನಲ್ಲಿ ಕಗ್ಗತ್ತಲೆ,
ಮನೆ ಮನೆಯಲಿ ಮಡಿಬತ್ತಲೆ !
ಬಂದಿತಾವುದೋ ವಿಪತ್ತು
ಮಂದಿ ತಿಳಿಯರದರ ಗತ್ತು.

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ರಾಹು ಕೇತು ರಗಳೆ, ಕಂತೆ;
ಅಂಜಿಕೆಗಳ ಬಂಜೆ ಸಂತೆ.
ಮಣ್ಣಿಗರಿಗೆ ಹೊಳೆದಿರುವುದು,-
ಸತ್ಯಕಥೆಯು ತಿಳಿದಿರುವುದು :
ಹೊಂಗದಿರನಿಗೆದುರಾಗಿ
ಭೂಮಿಯು ಬರುತಿರಲಾಗಿ
ಬೀಳುತಿರುವ ಕಪ್ಪುನೆಳಲು-
ಅದುವೆ ಚಂದ್ರನಳಲು-ಬಳಲು
ಹುಣ್ಣಿಮೆಯನೆ ನುಂಗುವಂಥ
ರಾಹು ನಾವು, ನಮ್ಮ ಪಂಥ
ಪಂಧಾನವ ಸುತ್ತಿದೆ,
ಮುದ್ದು ಮುಗಿಲ ಮುತ್ತಿದೆ :
ಭೂಮಂಡಲ ಕೆಣಕುತಿದೆ,
ಗ್ರಹಮಂಡಲ ಹೆಣಗುತಿದೆ :
ಸಾಯ್ವೆಳಕದು ಮಿಣುಕುತಿದೆ:-

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಉಳಿದವಕೂ ತುಂಬಿದೆ ದಿನ.
ನಾಳೆ ಸೂರ್‍ಯಗ್ರಹಣ.

ಮೇಳದ ಹಿರಿಯ

ದೇ ದಾನ್ ! ಸುಟೇ ಗ್ರಾನ್ !
ದೇ ದಾನ್ ! ಸುಟೇ ಗ್ರಾನ್ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...