Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ಕೆನೆವೆಳಕಿನ ಸೊನೆಯ ಚಂದ್ರ-
ನಾದನು ಕಪ್ಪಿಡಿದ ಲಾಂದ್ರ
ಪವನವಾಯ್ತು ತಾಮ್ರದ ವೈ
ಕತ್ತಲೆಯೇ ಎತ್ತಿದ ಕೈ.
ಮರುಳೆಂದವು – ಸೈ, ಸೈ, ಸೈ!
ದೆವ್ವ ಕುಣಿಯೆ : ಹೈ, ಹೈ, ಹೈ!
ತಬ್ಬಿಬ್ಬಾದವು ತಾರೆ
ಮಬ್ಬಿಡಿಯಲು ಹೌಹಾರೆ!

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ!
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ತುಂಬುದೆರೆಯ ತಂಬುಲವನು
ತುಂಬ ಮೆಲುವ ಹಂಬಲವನು
ತಳೆದರಂತೆ ರಾಹು ಕೇತು :
ನೋಡಿದೆಂಧ ಹೇತು, ಬೇತು !
ಕಾಡಿನಲ್ಲಿ ಕಗ್ಗತ್ತಲೆ,
ಮನೆ ಮನೆಯಲಿ ಮಡಿಬತ್ತಲೆ !
ಬಂದಿತಾವುದೋ ವಿಪತ್ತು
ಮಂದಿ ತಿಳಿಯರದರ ಗತ್ತು.

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ.
ಇಂದೆ ಚಂದ್ರಗ್ರಹಣೋ !
ಇಂದೆ ಚಂದ್ರಗ್ರಹಣ.

ಮೇಳದ ಹಿರಿಯ

ರಾಹು ಕೇತು ರಗಳೆ, ಕಂತೆ;
ಅಂಜಿಕೆಗಳ ಬಂಜೆ ಸಂತೆ.
ಮಣ್ಣಿಗರಿಗೆ ಹೊಳೆದಿರುವುದು,-
ಸತ್ಯಕಥೆಯು ತಿಳಿದಿರುವುದು :
ಹೊಂಗದಿರನಿಗೆದುರಾಗಿ
ಭೂಮಿಯು ಬರುತಿರಲಾಗಿ
ಬೀಳುತಿರುವ ಕಪ್ಪುನೆಳಲು-
ಅದುವೆ ಚಂದ್ರನಳಲು-ಬಳಲು
ಹುಣ್ಣಿಮೆಯನೆ ನುಂಗುವಂಥ
ರಾಹು ನಾವು, ನಮ್ಮ ಪಂಥ
ಪಂಧಾನವ ಸುತ್ತಿದೆ,
ಮುದ್ದು ಮುಗಿಲ ಮುತ್ತಿದೆ :
ಭೂಮಂಡಲ ಕೆಣಕುತಿದೆ,
ಗ್ರಹಮಂಡಲ ಹೆಣಗುತಿದೆ :
ಸಾಯ್ವೆಳಕದು ಮಿಣುಕುತಿದೆ:-

ಮೇಳ

ಒಂದು ಗ್ರಹಕೆ ಬಂತು ಗ್ರಹಣ,
ಇಂದೆ ಚಂದ್ರಗ್ರಹಣ
ಉಳಿದವಕೂ ತುಂಬಿದೆ ದಿನ.
ನಾಳೆ ಸೂರ್‍ಯಗ್ರಹಣ.

ಮೇಳದ ಹಿರಿಯ

ದೇ ದಾನ್ ! ಸುಟೇ ಗ್ರಾನ್ !
ದೇ ದಾನ್ ! ಸುಟೇ ಗ್ರಾನ್ !
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...