ಶಕುಂತಲೆಗೆ

– ಪಲ್ಲವಿ –

ಪ್ರೇಮಸುಧಾಮಯಿ ಶಕುಂತಲೇ !
ಜೀವನಕೌಮುದಿ ಪೂರ್ಣಕಲೇ !


ಸುರಸೌಂದರ್ಯದ ಮನದೊಳು ಮೊಳೆದೆ,
ಪರಮತಪೋರಾಶಿಯ ಫಲ ತಳೆದೆ ;
ಧರಣಿಯ ಚೆಲುವಿನ ಕೆಳೆಯಲಿ ಬೆಳೆದೆ-
ಗುರುಕಾಶ್ಯಪಲಾಲಿತ ಬಾಲೇ,
ಪ್ರೇಮಸುಧಾಮಯಿ ಶಕುಂತಲೇ !


ನಿನ್ನ ಒಲವಿನೆದೆ ಅರಳಿದ ಹೂವೆ,
ನಿನ್ನ ಮುಳಿಸು ಹೆಡೆಯೆತ್ತಿದ ಹಾವೆ,
ನಿನ್ನ ನೀತಿಯ ನಾರಿಯರೋವೆ-
ಪಾವನತಾಮಣಿಗಣಮಾಲೆ,
ಪ್ರೇಮಸುಧಾಮಯಿ ಶಕುಂತಲೆ !


ರಾಯ ಭರತನನು ಬಸಿರಲಿ ಧರಿಸಿ,
ತಾಯ್‌ನೆಲಕಾತನ ಹೆಸರನು ಬರಿಸಿ,
ಸ್ತ್ರೀಯರ ಘನತೆಯ ಮಹಿಯಲಿ ಮೆರಸಿ-
ಅಮರಳಾಗಿ ನೀ ನಿಂದೆಯಲೆ
ಕವಿಕುಲಗುರುವಿನ ಲಲಿತಕಲೆ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿ.ಪಿ.
Next post ಚಂದ್ರಗ್ರಹಣ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…