ಶಕುಂತಲೆಗೆ

– ಪಲ್ಲವಿ –

ಪ್ರೇಮಸುಧಾಮಯಿ ಶಕುಂತಲೇ !
ಜೀವನಕೌಮುದಿ ಪೂರ್ಣಕಲೇ !


ಸುರಸೌಂದರ್ಯದ ಮನದೊಳು ಮೊಳೆದೆ,
ಪರಮತಪೋರಾಶಿಯ ಫಲ ತಳೆದೆ ;
ಧರಣಿಯ ಚೆಲುವಿನ ಕೆಳೆಯಲಿ ಬೆಳೆದೆ-
ಗುರುಕಾಶ್ಯಪಲಾಲಿತ ಬಾಲೇ,
ಪ್ರೇಮಸುಧಾಮಯಿ ಶಕುಂತಲೇ !


ನಿನ್ನ ಒಲವಿನೆದೆ ಅರಳಿದ ಹೂವೆ,
ನಿನ್ನ ಮುಳಿಸು ಹೆಡೆಯೆತ್ತಿದ ಹಾವೆ,
ನಿನ್ನ ನೀತಿಯ ನಾರಿಯರೋವೆ-
ಪಾವನತಾಮಣಿಗಣಮಾಲೆ,
ಪ್ರೇಮಸುಧಾಮಯಿ ಶಕುಂತಲೆ !


ರಾಯ ಭರತನನು ಬಸಿರಲಿ ಧರಿಸಿ,
ತಾಯ್‌ನೆಲಕಾತನ ಹೆಸರನು ಬರಿಸಿ,
ಸ್ತ್ರೀಯರ ಘನತೆಯ ಮಹಿಯಲಿ ಮೆರಸಿ-
ಅಮರಳಾಗಿ ನೀ ನಿಂದೆಯಲೆ
ಕವಿಕುಲಗುರುವಿನ ಲಲಿತಕಲೆ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿ.ಪಿ.
Next post ಚಂದ್ರಗ್ರಹಣ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…