Home / ಬಾಲ ಚಿಲುಮೆ / ಕಥೆ / ನೇರಿಲು ಹಣ್ಣಿನ ಕಥೆ

ನೇರಿಲು ಹಣ್ಣಿನ ಕಥೆ

ಪಾಂಡವರು ಹನ್ನೆರಡು ವರ್‍ಷ ಕಾಡಿನಲ್ಲಿ ವಾಸ ಮಾಡಿದರು. ಆಗ ಒಂದು ದಿನ ಭೀಮಸೇನನು, ಆನೆಯ ಗಾತ್ರವಿದ್ದ ಒಂದು ನೇರಿಲು ಹಣ್ಣನ್ನು ತಂದನು. ಧರ್‍ಮರಾಯನು ಅಷ್ಟು ದೊಡ್ಡ ಹಣ್ಣನ್ನು ಕಂದು ಆಶ್ಚರ್‍ಯಪಟ್ಟು, “ಇದೇನು? ಇಷ್ಟು ದೊಡ್ಡದಾಗಿರುವುದಲ್ಲ!” ಎಂದು ಅಲ್ಲಿದ್ದ ಋಷಿಗಳನ್ನು ವಿಚಾರಿಸಿದನು. ಅವರು, “ಅಯ್ಯಾ! ಇದು ಕಣ್ವಋಷಿಯ ಆಶ್ರಮದ ಹಣ್ಣು. ಆಲ್ಲಿ ವರ್‍ಷಕ್ಕೊಂದು ಸಲ ಇಂತಹುದೊಂದು ದೊಡ್ಡ ಹಣ್ಣಾಗುವುದು. ಆಗ ಋಷಿಯು ಕಣ್ಣು ಬಿಟ್ಟು ಕೈ ಚಾಚುವನು. ಹಣ್ಣು ಹೋಗಿ ಅವನ ಕೈಯ್ಯಲ್ಲಿ ಕೂಡುವುದು. ಆತನು ಇದನ್ನು ತಿಂದು, ಮತ್ತೆ ತಪಸ್ಸಿಗೆ ಕುಳಿತುಕೊಳ್ಳುವನು” ಎಂದರು.

ಇದನ್ನು ಕೇಳಿ ಧರ್‍ಮರಾಯನಿಗೆ “ಭೀಮನು ಋಷಿಯ ಹಣ್ಣನ್ನು ತಂದು ಬಿಟ್ಟನು. ಇನ್ನಾತನು ಕಣ್ಣು ತೆರೆವ ವೇಳಗೆ ಹಣ್ಣು ಇಲ್ಲದೆ ಇರಲು, ಆತನು ಎಷ್ಟುನೊಂದು ಕೊಳ್ಳುವನೋ! ಇನ್ನೇನು ಗತಿ?” ಎಂದು ದಿಗಿಲಾಯಿತು. ಕೂಡಲೆ ತನಗೆ ದಿಕ್ಕಾದ ಶ್ರೀಕೃಷ್ಣನನ್ನು ನೆನೆದನು. ಆತನೂ ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಂದನು. ಕೂಡಲೆ ಧರ್‍ಮರಾಯನು “ಕೃಷ್ಣಾ! ಹೀಗಾಗಿ ಹೋಯಿತು. ಭೀಮನು ಹಣ್ಣು ತಂದು ಬಿಟ್ಟನು. ಇನ್ನೇನು ಗತಿ” ಎಂದು ಅತ್ತನು. ಶ್ರೀಕೃಷ್ಣನು “ಇರಲಿ. ಬಾ” ಎಂದು ಅವರನ್ನೆಲ್ಲಾ ಆ ಮರದ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಪಾಂಡವರನ್ನು ಕುರಿತು “ಅಯ್ಯಾ! ಈ ಹಣ್ಣು ಮೊದಲಿನಂತೆ ತೊಟ್ಟಿಗೆ ಸೇರಿತೊಳ್ಳಬೇಕಾದರೆ, ನಿಮ್ಮ ನಿಮ್ಮ ಮನಸ್ಸಿನಲ್ಲಿರುವುದನ್ನು ಮುಚ್ಚು ಮರೆಯಿಲ್ಲದೆ ಹೇಳಬೇಕು. ನೀವು ಹಾಗೆ ದಿಟ ಹೇಳಿದರೆ, ಅದು ತಾನೇ ಹೋಗಿ ತೊಟ್ಟಿಗೆ ಸೇರಿಕೊಳ್ಳುತ್ತದೆ. ಸುಳ್ಳು ಹೇಳಿದರೆ ಬಿದ್ದು ಹೋಗುತ್ತದೆ” ಎಂದನು.

ಎಲ್ಲರೂ “ಹಾಗೆ ಆಗಲಿ” ಎಂದರು. ಧರ್ಮರಾಯನು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದನು. ಹಣ್ಣು ಒಂದಾಳು ಎತ್ತರ ಮೇಲಕ್ಕೆ ಹೋಯಿತು. ಭೀಮನು ನಿಜವನ್ನೇ ನುಡಿದನು. ಇನ್ನೂ ಒಂದಾಳು ಎತ್ತರ ಮೇಲಕ್ಕೆ ಹೋಯಿತು. ಅರ್‍ಜುನನು ಸತ್ಯವನ್ನು ಆಡಿದನು. ಮತ್ತೂ ಒಂದಾಳು ಎತ್ತರ ಹತ್ತಿತು. ನಕುಲ ಸಹದೇವರೂ ನಿಶ್ಚಯವನ್ನೇ ನುಡಿದರು. ದ್ರೌಪದಿಯೂ ತನ್ನ ಮನಸ್ಸಿನಲ್ಲಿ ಇದ್ದುದನ್ನು ಕೊಂಚವೂ ಮುಚ್ಚದೆ ಹೇಳಿದಳು. ಹಣ್ಣು ಹೋಗಿ ತನ್ನ ಎಡೆಯನ್ನು ಸೇರಿತು.

ಪಾಂಡವರು ಬದುಕಿದೆವೆಂದು ಕೃಷ್ಣನನ್ನು ಕೊಂಡಾಡಿದರು. ಕೃಷ್ಣನು “ಅಯ್ಯಾ! ನನ್ನನ್ನು ಏಕೆ ಹೊಗಳುವಿರಿ? ಇದು ನೀವು ಆಡಿದ ದಿಟದ ಮಹಿಮೆ!” ಎಂದು ಹೇಳಿದನು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...