ನೇಪಥ್ಯದಿಂದ

ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ ; ಹಗಲು
ಬೇರೆ. ಆ ತಾರೆಗಳೆ ಇಲ್ಲೂ ಹೊಳೆವುವು ; ಇರುಳು
ಬೇರೆ. ಅದೆ ಮಳೆಗಾಳಿ ಕೊರೆವ ಚಳಿ ಮರಿಬಿಸಿಲು;
ಹದ ಬೇರೆ. ಒಂದೆ ಅನುಭವ, ಬೇರೆ ಮೈ ಹಲವು.
ಉಂಡ ಮನಸಿನ ರಾಗ ಸುಖ ದುಃಖ ಧಗೆಯೆಲ್ಲ
ಒಂದೆ ಇಡಿ ಲೋಕಕ್ಕೆ. ಭಾಷೆ ಬೇರಾದರೂ,
ಫರದೆ ತೆಳು, ಕಾಣುವುವು ಆಚೆ ನೋಟಗಳೆಲ್ಲ,
ಪೂರ ನೆಚ್ಚಿದ ಜೀವ ಒಳಗೊಳಗೆ ಕೈಬಿಡಲು
ಏನು ಉಳಿಯಿತು? ಭಾವಗೆಡಲು ಎದೆ, ಮನೆಯೊಳಗೆ,
ಹಾವು ಎಲ್ಲೋ ಅಡಗಿದಂತೆ. ಬಗೆ ಬಗೆ ಶಂಕೆ
ತೋಡುವುವು ಮನವ; ಬೆಳೆವುದು ಕಾಡೆ ಎದೆಯೊಳಗೆ,
ಕೂಗಿ ಹಾಯುವುವು ಬೆಚ್ಚಿಸಿ ತೋಳ ಹುಲಿ ಚಿರತೆ.

ಗೆದ್ದೆ ಹೋರಾಡಿ ಬಿಡು; ಸುಡಲೆದ್ದ ಕಿಚ್ಚನ್ನು
ಮಣಿಹಾರ ಮಾಡಿ ಕವಿಸಿದೆ ನಮಗೆ ಹುಚ್ಚನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೇರಿಲು ಹಣ್ಣಿನ ಕಥೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೯

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys