ನೇಪಥ್ಯದಿಂದ

ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ ; ಹಗಲು
ಬೇರೆ. ಆ ತಾರೆಗಳೆ ಇಲ್ಲೂ ಹೊಳೆವುವು ; ಇರುಳು
ಬೇರೆ. ಅದೆ ಮಳೆಗಾಳಿ ಕೊರೆವ ಚಳಿ ಮರಿಬಿಸಿಲು;
ಹದ ಬೇರೆ. ಒಂದೆ ಅನುಭವ, ಬೇರೆ ಮೈ ಹಲವು.
ಉಂಡ ಮನಸಿನ ರಾಗ ಸುಖ ದುಃಖ ಧಗೆಯೆಲ್ಲ
ಒಂದೆ ಇಡಿ ಲೋಕಕ್ಕೆ. ಭಾಷೆ ಬೇರಾದರೂ,
ಫರದೆ ತೆಳು, ಕಾಣುವುವು ಆಚೆ ನೋಟಗಳೆಲ್ಲ,
ಪೂರ ನೆಚ್ಚಿದ ಜೀವ ಒಳಗೊಳಗೆ ಕೈಬಿಡಲು
ಏನು ಉಳಿಯಿತು? ಭಾವಗೆಡಲು ಎದೆ, ಮನೆಯೊಳಗೆ,
ಹಾವು ಎಲ್ಲೋ ಅಡಗಿದಂತೆ. ಬಗೆ ಬಗೆ ಶಂಕೆ
ತೋಡುವುವು ಮನವ; ಬೆಳೆವುದು ಕಾಡೆ ಎದೆಯೊಳಗೆ,
ಕೂಗಿ ಹಾಯುವುವು ಬೆಚ್ಚಿಸಿ ತೋಳ ಹುಲಿ ಚಿರತೆ.

ಗೆದ್ದೆ ಹೋರಾಡಿ ಬಿಡು; ಸುಡಲೆದ್ದ ಕಿಚ್ಚನ್ನು
ಮಣಿಹಾರ ಮಾಡಿ ಕವಿಸಿದೆ ನಮಗೆ ಹುಚ್ಚನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೇರಿಲು ಹಣ್ಣಿನ ಕಥೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೯

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…