Home / ಬಾಲ ಚಿಲುಮೆ / ಕಥೆ / ದೇವಶರ್ಮನ ಕಥೆ

ದೇವಶರ್ಮನ ಕಥೆ

ಒಂದಾನೊಂದು ಊರಿನಲ್ಲಿ ದೇವಶರ್ಮನೆಂಬ ಬ್ರಾಹ್ಮಣನಿದ್ದನು. ಅವನು ವೇದ ಶಾಸ್ತ್ರಗಳನ್ನು ಬಲ್ಲವನು.  ದಿನವೂ ವೇದಗಳನ್ನು ಓದುವನು. ಶಾಸ್ತ್ರದಲ್ಲಿ ಹೇಳಿರುವಂತೆ ನಡೆಯುವನು. ಆಹಿತಾಗ್ನಿಯು (ಮನೆಯಲ್ಲಿ ಅಗ್ನಿಯನ್ನು ಇಟ್ಟುಕೊಂಡು ದಿನವೂ ಬೆಳಿಗ್ಗೆ ಸಂಜೆ ತಪ್ಪದೆ ಹೋಮ ಮಾಡುವವರು.) ಆತನಿಗೆ ಪರಮ ಪತಿವ್ರತೆಯಾದ ಯಜ್ಞದತ್ತೆಯೆಂಬ ಹೆಂಡತಿಯಿದ್ದಳು. ಅವಳೊಮ್ಮೆ ಬಸುರಾಗಿ ಒಂದು ಗಂಡು ಮಗುವನ್ನು ಹೆತ್ತಳು. ಅದೇ ದಿನವೇ ಅವರ ಮನೆಯಲ್ಲಿದ್ದ ಮುಂಗುಸಿಯೂ ಒಂದು ಮರಿಯನ್ನು ಹಾಕಿತು. ಆ ಬ್ರಾಹ್ಮಣಿಯು ತನ್ನ ಮಗುವಿನಂತೆ ಆ ಮರಿಯನ್ನು ವಿಶ್ವಾಸದಿಂದ ಸಾಕುತ್ತಿದ್ದಳು:
ಅದೂ ಮಗುವಿನಲ್ಲಿ ಬಲು ಅಕ್ಕರೆಯಿಂದ ಇದ್ದರೂ ಆಕೆಗೆ “ಇದು ಕೆಟ್ಟಜಾತಿ. ಯಾವಾಗಲಾದರೂ ಮಗುವಿಗೆ. ಕೇಡುಮಾಡಿದರೂ ಮಾಡೀತು ಎಂದು ಬಲು ಎಚ್ಚರಿಕೆಯಿಂದ ಇರುತ್ತಿದ್ದಳು.
ಒಂದುದಿನ ಆಕೆಯು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಗಂಡನನ್ನು ಕೂಗಿ, “ನಾನು ಕೆರೆಗೆ ಹೋಗಿ ನೀರು ತರುವೆನು. ನೀವು ಈ ಮಗುನನ್ನು ನೋಡಿಕೊಳ್ಳಿ, ಮುಂಗುಸಿಯೂ ಇಲ್ಲಿಯೇ  ಇದೆ. ಎಚ್ಚರಿಕೆ.” ಎಂದು ಹೇಳಿ ಒಪ್ಪಿಸಿ ಕೊಡವನ್ನು ತೆಗೆದುಕೊಂಡು ನೀರಿಗೆ ಹೋದಳು. ಆ ವೇಳೆಗೆ ಆ ಊರಿನ ಅರಸು “ದಾನಕ್ಕಾಗಿ ಬರಬೇಕು” ಎಂದು ಆಳುಗಳನ್ನು ಕಳುಹಿಸಿದನು. ಆ ದೇವಶರ್ಮನು ಅರಸನ ಮಾತು ಮೀರಲಾರದೆ ಅಲ್ಲಿಗೆ ಹೋದನು.
ಇತ್ತ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಂದು ನಾಗರಹಾವು ತನ್ನ ಬಿಲದಿಂದ ಈಚೆಗೆ ಬಂತು. ಮುಂಗುಸಿಯು ಅದನ್ನು ಕಂಡು ಅದರಮೇಲೆ ಬಿದ್ದು ಕಾದಾಡಿ ಅದನ್ನು ಕೊಂದಿತು.
ಹಾಗೆ ಹಗೆಯನ್ನು ಕೊಂದೆನೆಂಬ ತನ್ನ ಸಂತೋಷವನ್ನು ತಾಯಿಗೆ ಹೇಳಲು ಅದು ಅಕೆಗೆ ಎದುರಾಗಿ ಬಂತು. ಆಕೆಯು ಅದರ ಮುಸುಡಿಯಲ್ಲಿದ್ದ ಮಾಂಸ ರಕ್ತಗಳನ್ನು ನೋಡಿ ಮಗುವನ್ನು ಕೊಂದು ಬಂದಿರುವುದು ಎಂದುಕೊಂಡು, ಆ ಕೋಪ ದುಃಖಗಳಲ್ಲಿ ತಾನು ತಂದಿದ್ದ ನೀರಿನ ಕೊಡವನ್ನು ಅದರ ತಲೆಯ ಮೇಲೆ ಕುಕ್ಕಿದಳು. ಅದು ಅಲ್ಲಿಯೇ ಸತ್ತು ಬಿದ್ದಿತು.
ಬ್ರಾಹ್ಮಣಿಯು ಮನೆಗೆ ಬಂದು ನೋಡಿದಳು. ಮಗುವು ತೊಟ್ಟಿಲಲ್ಲಿ ಸುಖವಾಗಿ ಆಡಿಕೊಂಡಿತ್ತು. ತೊಟ್ಟಿಲಿನ ಮಗ್ಗುಲಲ್ಲಿಯೇ ನಾಗರಹಾವು ತುಂಡಾಗಿ ಬಿದ್ದಿತ್ತು ಆ ವೇಳೆಗೆ ಗಂಡನೂ ಬಂದನು. ಬ್ರಾಹ್ಮಣಿಯು ಬಲವಾಗಿ ಅತ್ತು. “ನಿಮ್ಮನ್ನು ಕಾದಿಕೊಂಡಿರಿ ಎಂದರೆ ನೀವು ಕೇಳಲಿಲ್ಲ. ದಾನದಮೇಲಿನ ಆಸೆಯಿಂದ ನೀವು ಹೊರಟು ಹೋದಿರಿ. ಅದರ ಫಲವಾಗಿ ಇಷ್ಟೂ ಆಯಿತು. ನಾನು ಬರುವವರೆಗೂ ತಡೆಯಬಾರದಾಗಿತ್ತೇ? ಮಗುವಂತಿದ್ದ ಮುಂಗುಸಿಯು ಅನ್ಯಾಯವಾಗಿ ಮೃತ್ಯುವಿನ ಪಾಲಾಯಿತು. ಅಷ್ಟಲ್ಲದೆ ಹೇಳಿದರೇ?
ಲೋಭ ಬಲಿತತಿಯಾಗಬಾರದು | ಲೋಭವನು ಪೂರ್ಣ ಬಿಡಬಾರದು ॥
ಲೋಭವು ಅತಿಯಾಗಲು ಫಲವಾಗಿ | ಆಯಿತು ಚಕ್ರವು ಮಸ್ತಕದಲ್ಲಿ ॥೮॥
ಬ್ರಾಹ್ಮಣನು ಹೇಳಿದನು: – “ಅದು ಹೇಗೆ?” ಎಂದು
ಆಕೆಯು ಹೇಳಿದಳು:-
*****
ಚಕ್ರಧರನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...