Home / ಬಾಲ ಚಿಲುಮೆ / ಕಥೆ / ಹೊನ್ನು ಕೊಡುತ್ತಿದ್ದ ಹಾವಿನ ಕಥೆ

ಹೊನ್ನು ಕೊಡುತ್ತಿದ್ದ ಹಾವಿನ ಕಥೆ

ಒಂದಾನೊಂದು ಊರಿನಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಆತನು ಬೇಸಾಯ ಮಾಡುವನು. ಆ ಬೇಸಾಯವು ಯಾವಾಗಲೂ ಫಲವೇ ಆಗುತ್ತಿರಲಿಲ್ಲ. ಒ೦ದು ದಿನ ಆ ಬ್ರಾಹ್ಮಣನು ಸಂಜೆಯ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಒಂದು ಮರದಡಿ ಆಗ ಕೊಂಚ ದೂರವಿದ್ದ ಹುತ್ತದಿಂದ ಹೊರಕ್ಕೆ ಬಂದು ದೊಡ್ಡ ಹೆಡೆಯನ್ನು ಬಿಟ್ಟು ಕೊಂಡು ಆಡುತ್ತಿದ್ದ ಹಾವು ಕಾಣಿಸಿತು. ಆಗ ಅವನು ಯೋಚಿಸಿದನು:- “ಆಹಾ ಇದು ಈ ಕ್ಷೇತ್ರದ ದೇವತೆಯಾಗಿರಬೇಕು. ಇದನ್ನು ನಾನು ಇದುವರೆಗೂ ಪೂಜಿಸಿಲ್ಲ. ಅದರಿಂದಲೇ ಇರಬೇಕು, ನನ್ನ ಬೇಸಾಯವೆಲ್ಲ ನಿಷ್ಪಲವಾಗುತ್ತಿರುವುದು. ಇರಲಿ. ಇನ್ನು ಮೇಲಾದರೂ ಇದನ್ನು ಪೂಜಿಸುವೆನು” ಎಂದು ಕೊಂಡು, ಎಲ್ಲಿಂದಲೋ ಹಾಲು ತಂದು ಅದಕ್ಕೆ ಒಪ್ಪಿಸಿ, “ಕ್ಷೇತ್ರ ಪಾಲಕನೆ, ನೀನು ಇಲ್ಲಿರುವುದು ನನಗೆ ಇದುವರೆಗೂ ತಿಳಿದಿರಲಿಲ್ಲ. ಅದರಿಂದ ಪೂಜೆಯನ್ನು ಮಾಡಿರಲಿಲ್ಲ. ಕ್ಷಮಿಸು? ಎಂದು ನಮಸ್ಕಾರ ಮಾಡಿದನು.
ಆ ಬ್ರಾಹ್ಮಣನು ಮರುದಿವಸ ಬರುವ ವೇಳೆಗೆ ಹಾಲಿನ ಪಾತ್ರೆಯಲ್ಲಿ ಒಂದು ಹೊನ್ನು ಇತ್ತು. ಅಂದಿನಿಂದ ಅವನು ತಾನು ಒಬ್ಬನೇ ಬಂದು ಹಾಲಿಟ್ಟು ಹೋಗುವನು: ಬೆಳಿಗ್ಗೆ ಬಂದು ಹೊನ್ನನ್ನು ತೆಗೆದುಕೊಂಡು ಹೋಗುವನು.
ಹೀಗೆಯೇ ಇರುತ್ತಿರಲು ಒಂದು ದಿನ ಆ ಬ್ರಾಹ್ಮಣನು ಯಾವುದೋ ಊರಿಗೆ ಹೋಗಬೇಕಾಗಿ ಬಂತು. ಅದರಿಂದ ಹಾವಿಗೆ ಹಾಲಿಡುನ ಕೆಲಸವನ್ನು ಮಗನಿಗೆ ಒಪ್ಪಿಸಿ ಹೋದನು. ಮಗನು ಹಾಲಿಟ್ಟು ಹೊನ್ನು ತೆಗೆದುಕೊಳ್ಳುವಾಗ ಅವನಿಗೆ ಒ೦ದು ಯೋಚನೆ ಬಂತು. “ಈ ಹುತ್ತದಲ್ಲಿ ಹೊನ್ನು ಬೇಕಾದ ಹಾಗೆ ಇರಬೇಕು. ಈ ಹುತ್ತವನ್ನು ಅಗೆದು ಹಾವನ್ನು ಕೊಂದು ಎಲ್ಲವನ್ನೂ ತೆಗೆದುಕೊಂಡು ಬಿಡೋಣ” ಎಂದುಕೊಂಡು, ಎರಡನೆಯ ದಿನ ಹಾಲು ಕುಡಿಯುವುದಕ್ಕೆ ಬಂದ ಹಾವನ್ನು ದೊಣ್ಣೆಯಿಂದ ಹೊಡೆದನು. ಅದು ಏನೋ ತಪ್ಪಿ ಹಾವು ಉಳಿದುಕೊಂಡು ರೋಷದಿಂದ ಹಿಂತಿರುಗಿ ಅವನನ್ನು ಕಚ್ಚಿತು. ಆ ಹುಡುಗನು ಆ ಕೂಡಲೇ ಸತ್ತು
ಹೋದನ್ನು ನೆಂಟರು ಇಷ್ಟರು ಬಂದು ಅವನನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿಯೇ ಚಿತಿಯನ್ನು ಮಾಡಿ ಸುಟ್ಟರು.
ತನಗೆ ಶರಣಾಗಿ ಬಂದ ಜಂತುಗಳ | 
ಕಾಯದಿದ್ದಂಥ ಕರುಣ ಹೀನನಿಗೆ || 
ಇದ್ದ ಸತ್ಫಲವು ವಿಫಲವಾಗುವುದು | 
ಕೇಳಿ ಕಾಣೆಯಾ ಪದ್ಮನನ ಕಥೆಯಾ ॥ ೨೬ ॥ 
ನೆಂಟರು ಅದು ಹೇಗೆ ಎಂದು ಕೇಳಲು, ಹರಿದತ್ತನು ಹೇಳಿದನು:-
*****
ಪದ್ಮವನದ ಹಂಸಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...