Home / ಬಾಲ ಚಿಲುಮೆ / ಕಥೆ / ಹೊನ್ನು ಕೊಡುತ್ತಿದ್ದ ಹಾವಿನ ಕಥೆ

ಹೊನ್ನು ಕೊಡುತ್ತಿದ್ದ ಹಾವಿನ ಕಥೆ

ಒಂದಾನೊಂದು ಊರಿನಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಆತನು ಬೇಸಾಯ ಮಾಡುವನು. ಆ ಬೇಸಾಯವು ಯಾವಾಗಲೂ ಫಲವೇ ಆಗುತ್ತಿರಲಿಲ್ಲ. ಒ೦ದು ದಿನ ಆ ಬ್ರಾಹ್ಮಣನು ಸಂಜೆಯ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಒಂದು ಮರದಡಿ ಆಗ ಕೊಂಚ ದೂರವಿದ್ದ ಹುತ್ತದಿಂದ ಹೊರಕ್ಕೆ ಬಂದು ದೊಡ್ಡ ಹೆಡೆಯನ್ನು ಬಿಟ್ಟು ಕೊಂಡು ಆಡುತ್ತಿದ್ದ ಹಾವು ಕಾಣಿಸಿತು. ಆಗ ಅವನು ಯೋಚಿಸಿದನು:- “ಆಹಾ ಇದು ಈ ಕ್ಷೇತ್ರದ ದೇವತೆಯಾಗಿರಬೇಕು. ಇದನ್ನು ನಾನು ಇದುವರೆಗೂ ಪೂಜಿಸಿಲ್ಲ. ಅದರಿಂದಲೇ ಇರಬೇಕು, ನನ್ನ ಬೇಸಾಯವೆಲ್ಲ ನಿಷ್ಪಲವಾಗುತ್ತಿರುವುದು. ಇರಲಿ. ಇನ್ನು ಮೇಲಾದರೂ ಇದನ್ನು ಪೂಜಿಸುವೆನು” ಎಂದು ಕೊಂಡು, ಎಲ್ಲಿಂದಲೋ ಹಾಲು ತಂದು ಅದಕ್ಕೆ ಒಪ್ಪಿಸಿ, “ಕ್ಷೇತ್ರ ಪಾಲಕನೆ, ನೀನು ಇಲ್ಲಿರುವುದು ನನಗೆ ಇದುವರೆಗೂ ತಿಳಿದಿರಲಿಲ್ಲ. ಅದರಿಂದ ಪೂಜೆಯನ್ನು ಮಾಡಿರಲಿಲ್ಲ. ಕ್ಷಮಿಸು? ಎಂದು ನಮಸ್ಕಾರ ಮಾಡಿದನು.
ಆ ಬ್ರಾಹ್ಮಣನು ಮರುದಿವಸ ಬರುವ ವೇಳೆಗೆ ಹಾಲಿನ ಪಾತ್ರೆಯಲ್ಲಿ ಒಂದು ಹೊನ್ನು ಇತ್ತು. ಅಂದಿನಿಂದ ಅವನು ತಾನು ಒಬ್ಬನೇ ಬಂದು ಹಾಲಿಟ್ಟು ಹೋಗುವನು: ಬೆಳಿಗ್ಗೆ ಬಂದು ಹೊನ್ನನ್ನು ತೆಗೆದುಕೊಂಡು ಹೋಗುವನು.
ಹೀಗೆಯೇ ಇರುತ್ತಿರಲು ಒಂದು ದಿನ ಆ ಬ್ರಾಹ್ಮಣನು ಯಾವುದೋ ಊರಿಗೆ ಹೋಗಬೇಕಾಗಿ ಬಂತು. ಅದರಿಂದ ಹಾವಿಗೆ ಹಾಲಿಡುನ ಕೆಲಸವನ್ನು ಮಗನಿಗೆ ಒಪ್ಪಿಸಿ ಹೋದನು. ಮಗನು ಹಾಲಿಟ್ಟು ಹೊನ್ನು ತೆಗೆದುಕೊಳ್ಳುವಾಗ ಅವನಿಗೆ ಒ೦ದು ಯೋಚನೆ ಬಂತು. “ಈ ಹುತ್ತದಲ್ಲಿ ಹೊನ್ನು ಬೇಕಾದ ಹಾಗೆ ಇರಬೇಕು. ಈ ಹುತ್ತವನ್ನು ಅಗೆದು ಹಾವನ್ನು ಕೊಂದು ಎಲ್ಲವನ್ನೂ ತೆಗೆದುಕೊಂಡು ಬಿಡೋಣ” ಎಂದುಕೊಂಡು, ಎರಡನೆಯ ದಿನ ಹಾಲು ಕುಡಿಯುವುದಕ್ಕೆ ಬಂದ ಹಾವನ್ನು ದೊಣ್ಣೆಯಿಂದ ಹೊಡೆದನು. ಅದು ಏನೋ ತಪ್ಪಿ ಹಾವು ಉಳಿದುಕೊಂಡು ರೋಷದಿಂದ ಹಿಂತಿರುಗಿ ಅವನನ್ನು ಕಚ್ಚಿತು. ಆ ಹುಡುಗನು ಆ ಕೂಡಲೇ ಸತ್ತು
ಹೋದನ್ನು ನೆಂಟರು ಇಷ್ಟರು ಬಂದು ಅವನನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿಯೇ ಚಿತಿಯನ್ನು ಮಾಡಿ ಸುಟ್ಟರು.
ತನಗೆ ಶರಣಾಗಿ ಬಂದ ಜಂತುಗಳ | 
ಕಾಯದಿದ್ದಂಥ ಕರುಣ ಹೀನನಿಗೆ || 
ಇದ್ದ ಸತ್ಫಲವು ವಿಫಲವಾಗುವುದು | 
ಕೇಳಿ ಕಾಣೆಯಾ ಪದ್ಮನನ ಕಥೆಯಾ ॥ ೨೬ ॥ 
ನೆಂಟರು ಅದು ಹೇಗೆ ಎಂದು ಕೇಳಲು, ಹರಿದತ್ತನು ಹೇಳಿದನು:-
*****
ಪದ್ಮವನದ ಹಂಸಗಳ ಕಥೆ ಓದಿ
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...