ಷೇಕ್ಸ್‌ಪಿಯರನನ್ನು ಕುರಿತು

ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು
ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು
ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ
ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ?
ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ
ಕೀರ್‍ತಿಗೂ, ನಿನಗಂಥ ಕಳಪೆ ಸಾಕ್ಷಿಯು ಸಲ್ಲ;
ನಮ್ಮ ಎದೆಯಲಿ ಉಕ್ಕಿ ಸುರಿವ ಸಂತಸ ಬೆರಗೆ
ನೀನು ನಿರ್‍ಮಿಸಿಕೊಂಡ ಚಿರಸ್ಮಾರಕವು ನಿನಗೆ.
ಕೃತಿಯ ಸಾಲೇ ಹರಿಸಿ ಕಲೆಯ ಬಲು ಮೆಲುನಡೆಯ
ಅಪಹಾಸ್ಯಕೆಳೆದ ಹಿರಿಕವಿಯೆ, ನಿನ್ನ ಅಮೂಲ್ಯ
ಪುಟಪುಟಗಳಿಂದಲೂ ಅಮೃತ ಸೂಕ್ತಿಗಳನ್ನ
ಹೆಕ್ಕಿಕೊಂಡಿದೆ ಜನರ ಹೃದಯ. ಓದಲು ನಿನ್ನ,
ನಮ್ಮಲ್ಪ ಕಲ್ಪನೆಯ ಕೊಚ್ಚಿ ಕವಿವುದು ಬೆರಗು,
ನಾವಾಗುವೆವು ಅಮೃತಶಿಲೆ ಪೂರ್‍ತಿ ಮೈಮರೆದು.

ಎಂಥ ಸ್ಮಾರಕ ನಿನಗೆ, ಏನು ಭವ್ಯ ಪ್ರಸಿದ್ಧ,
ರಾಜರೂ ಅದರ ಸಲುವಾಗಿ ಸಾಯಲು ಸಿದ್ಧ!

– ಜಾನ್ ಮಿಲ್ಟನ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲಿಯೂ ಬೆಕ್ಕೂ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೭

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys