Home / ಬಾಲ ಚಿಲುಮೆ / ಕಥೆ / ತಂದೆಯೂ ಮಕ್ಕಳೂ

ತಂದೆಯೂ ಮಕ್ಕಳೂ

ಆಶ್ರಮದಲ್ಲಿ ಅರಳಿಯ ಮರದ ಕೆಳಗೆ ಒಂದು ಜಿಂಕೆಯ ಚರ್‍ಮದ ಮೇಲೆ ವಿಶ್ವಾಮಿತ್ರರು ಕುಳಿತಿದ್ದರು. ಆಗ ಒಬ್ಬ ಹುಡುಗನು ಏದುತ್ತಾ ಓಡಿಬಂದು ಅವರ ಕಾಲಿಗೆ ಬಿದ್ದನು. ಅವರೂ “ಯಾರು? ಶುನಶ್ಶೇಫನೇನೋ? ಎಲಾ! ಕೊನೆಗೆ ಬದುಕಿಕೂಂಡೆಯಾ? ಭಲೆ! ಸಂತೋಷ! ಬಾ! ಕುಳಿತುಕೋ” ಎಂದರು. ಅವನೂ ಕೈ ಮುಗಿದು ಗುರುಗಳೇ! ತಮ್ಮ ಕೃಪೆಯಿಂದ ನಾನು ಉಳಿದುಕೊಂಡೆನು. ಇನ್ನು ಮುಂದಕ್ಕೆ ತಾಯಿ, ತಂದೆ, ಬಂಧು, ಬಳಗಗಳೆಲ್ಲವೂ ತಾವೇ! ನಾನೂ ತಮ್ಮ ಮಕ್ಕಳಲ್ಲಿ ಒಬ್ಬನಾಗಿ ಸೇವೆ ಮಾಡಿಕೊಂಡು ಇರುತ್ತೇನೆ. ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು. ಅವನ ಕಣ್ಣುಗಳಿಂದ ನೀರು ಹರಿಯುತ್ತ ಇತ್ತು. ಅದನ್ನು ನೋಡಿ ವಿಶ್ವಾಮಿತ್ರರಿಗೆ ಮನಸ್ಸು ಕರಗಿ ಹೋಯಿತು. “ಹೂ! ಹಾಗೆಯೇ ಆಗಲಿ ಇರು!” ಎಂದರು. ಅವನನ್ನು ಕೊಲ್ಲಬೇಕೆಂದು ಯಾರೋ ಹಿಡಿದುಕೊಂಡು ಹೋಗಿದ್ದರು. ವಿಶ್ವಾಮಿತ್ರರ ಕೃಪೆಯಿಂದ ಅವನು ಅವರ ಕಯ್ಯಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದನು.

ಅವರಿಗೆ ಆವೇಳೆಗಾಗಲೆ ಆರು ಜನ ಮಕ್ಕಳಿದ್ದರು. ಮೊದಲಿನ ಮೂವರು ಯಾವಾಗಲೂ ತಂದೆಯು ಹೇಳಿದಕ್ಕೆ ಪ್ರತಿಯನ್ನೇ ಹೇಳುವರು. ಕೊನೆಯ ಮೂವರು ತಂದೆಯ ಮಾತು ಎಂದರೆ, ಏನೇ ಆಗಲಿ ಎರಡು ಮಾತು ಆಡುತ್ತಿರಲಿಲ್ಲ. ಆರು ಜನರನ್ನೂ ಕರೆಸಿ “ಅಯ್ಯಾ! ಈ ಶುನಶ್ಶೇಫನು ಗುರುಹಿರಿಯರಲ್ಲಿ ಭಕ್ತಿಯುಳ್ಳವನು. ಇವನು ನಿಮ್ಮೆಲ್ಲರಿಗಿಂತಲೂ ವಿದ್ಯೆಯಲ್ಲಿಯೂ, ತಪಸ್ಸಿನಲ್ಲಿಯೂ ಹಿರಿಯನು. ಇವನೂ ನಿಮ್ಮಲ್ಲಿ ಒಬ್ಬನಾಗಿ ಇದ್ದು ಕೊಂಡಿರಲಿ” ಎಂದು ಹೇಳಿದರು.

ಮೊದಲ ಮೂವರು ಎಂದಿನಂತೆ ಎದುರು ಆಡಿದರು. ವಿಶ್ವಾಮಿತ್ರರೂ ಒಂದು ಸಲ ಹೇಳಿದರು. ಎರಡು ಸಲ ಹೇಳಿದರು. ಮೂರನೆಯ ಸಲವೂ ಹೇಳಿದರು. ಅವರು ಕೇಳಲಿಲ್ಲ. “ನಿಮ್ಮ ಮನೆಯೇ ಬೇಡ” ಎಂದು ಎಲ್ಲಿಗೋ ಹೊರಟು ಹೋದರು.

ಕೊನೆಯ ಮೂವರು “ತಂದೆಯೇ! ನೀನೇ ನಮಗೆ ದೇವರು. ನೀನು ಹೇಳಿದುದೇ ನಮಗೆ ವೇದವಾಕ್ಯವು. ನಿನ್ನ ಇಷ್ಟದಂತೆಯೇ ಆಗಲಿ. ಶುನಶ್ಶೇಫನೇ ನಮಗೆಲ್ಲ ಹಿರಿಯವನಾಗಲಿ” ಎಂದು ಒಪ್ಪಿಕೊಂಡರು. ವಿಶ್ವಾಮಿತ್ರರಿಗೆ ಸಂತೋಷವಾಯಿತು. ಆ ನಾಲ್ವರಿಗೂ ಸಕಲ ವಿದ್ಯೆಗಳನ್ನೂ ಉಪದೇಶಿಸಿ, ಸಿದ್ಧಿಯಾಗುವಂತೆ ಅನುಗ್ರಹಿಸಿದರು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...