ಹಣ

ಹಣ
ವಸ್ತು ವಿನಿಮಯದ ಮಾಧ್ಯಮ-
ಆಗಿದೆ ಜೀವನದ ಗುರಿ.
ಗಳಿಸಲುಂಟು ನೂರಾರು ದಾರಿ
ಭಿಕ್ಷೆಯಿಂದ ಹಾದರದವರೆಗೆ
ಲಂಚ, ಕಳವು, ಜೂಜೂ ಸೇರಿ,
ದುಡಿಮೆಯದಕೆ ತುಚ್ಛ ದಾರಿ!
ಬಾಳಲೆಂದು ಗಳಿಸ ಹೋಗಿ,
ಗಳಿಸಲೆಂದೇ ಬಾಳುತಿಹರು.
ಸೇರಿದವರಿಗೇ ಹೆಚ್ಚೆಚ್ಚು ಸೇರುವುದು
ಬಡವನ ಹತ್ತಿರವೂ ಸುಳಿಯದು.
ಕೆಲವರ ತಿಜೋರಿಯಲ್ಲಿ ಕೊಳೆತು
ಕಪ್ಪು ಹಣವೆನಿಸಿಕೊಳ್ಳುವುದು
ಮತ್ತೆ ಕೆಲವರಿಗದು ಗಗನ ಕುಸುಮ.

ಹಿಪ್ ಪಾಕೆಟಿನಲ್ಲಿ ಬೆರಳು ತೂರಿಸಿ
ಕೆದಕಿದಾಗ, ಕೈಗೆ ತಗಲದ ಹಣ,
ಊಟಕ್ಕಿಲ್ಲದ ಉಪ್ಪಿನಕಾಯಿ.
ಹಣವಿದ್ದರುಂಟು ಸರ್ವ ಸುಖ.
‘ಸರ್ವೇ ಗುಣಾಃ ಕಾಂಚನ ಮಾಶ್ರಯಂತಿ’
ಹಣರಹಿತ ಬಾಳು ಸಾದ್ಯವಿದ್ದಿದ್ದರೆ?
ದೊರಕೀತು ಮನಕೆ ನೆಮ್ಮದಿ,
ಧುಮುಕದೆ ಹರಿದೀತು ಬಾಳ ನದಿ.
*****
೧೭-೦೫-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನೂರಿನ ಸಂವೇದನೆ
Next post ಮಾಯದ ಮುತ್ತು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…