ಹಣ

ಹಣ
ವಸ್ತು ವಿನಿಮಯದ ಮಾಧ್ಯಮ-
ಆಗಿದೆ ಜೀವನದ ಗುರಿ.
ಗಳಿಸಲುಂಟು ನೂರಾರು ದಾರಿ
ಭಿಕ್ಷೆಯಿಂದ ಹಾದರದವರೆಗೆ
ಲಂಚ, ಕಳವು, ಜೂಜೂ ಸೇರಿ,
ದುಡಿಮೆಯದಕೆ ತುಚ್ಛ ದಾರಿ!
ಬಾಳಲೆಂದು ಗಳಿಸ ಹೋಗಿ,
ಗಳಿಸಲೆಂದೇ ಬಾಳುತಿಹರು.
ಸೇರಿದವರಿಗೇ ಹೆಚ್ಚೆಚ್ಚು ಸೇರುವುದು
ಬಡವನ ಹತ್ತಿರವೂ ಸುಳಿಯದು.
ಕೆಲವರ ತಿಜೋರಿಯಲ್ಲಿ ಕೊಳೆತು
ಕಪ್ಪು ಹಣವೆನಿಸಿಕೊಳ್ಳುವುದು
ಮತ್ತೆ ಕೆಲವರಿಗದು ಗಗನ ಕುಸುಮ.

ಹಿಪ್ ಪಾಕೆಟಿನಲ್ಲಿ ಬೆರಳು ತೂರಿಸಿ
ಕೆದಕಿದಾಗ, ಕೈಗೆ ತಗಲದ ಹಣ,
ಊಟಕ್ಕಿಲ್ಲದ ಉಪ್ಪಿನಕಾಯಿ.
ಹಣವಿದ್ದರುಂಟು ಸರ್ವ ಸುಖ.
‘ಸರ್ವೇ ಗುಣಾಃ ಕಾಂಚನ ಮಾಶ್ರಯಂತಿ’
ಹಣರಹಿತ ಬಾಳು ಸಾದ್ಯವಿದ್ದಿದ್ದರೆ?
ದೊರಕೀತು ಮನಕೆ ನೆಮ್ಮದಿ,
ಧುಮುಕದೆ ಹರಿದೀತು ಬಾಳ ನದಿ.
*****
೧೭-೦೫-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನೂರಿನ ಸಂವೇದನೆ
Next post ಮಾಯದ ಮುತ್ತು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys