ಶಿಲಾದಿತ್ಯ

ಶಿಲಾದಿತ್ಯ

ಶಿಲಾದಿತ್ಯ ವಲ್ಲಭಿಯ ದೊರೆಯು. ಆತನ ಅರಮನೆಯಲ್ಲಿ ಒಂದು ಸರೋವರವಿತ್ತು. ಆತನು ಯುದ್ಧಕ್ಕೆ ಯೋಗಬೇಕಾದರೆ ತಾನು ಮಿಂದು ಮಡಿಯುಟ್ಟು ಶುಚಿಯಾಗಿ ಬಂದು ಆ ಕೊಳವನ್ನು ಪೂಜಿಸುವನು. ಆಗ ಅಲ್ಲಿಂದ ಏಳುಬಣ್ಣದ ಕುದುರೆಯು ಎದ್ದು ಮೇಲಕ್ಕೆ ಬರುವದು. ಆತನು ಅದನ್ನು ಹತ್ತಿ ಯುದ್ಧಕ್ಕೆ ಹೋಗುವನು. ಅಲ್ಲಿ ಯಾರ ಆಯುಧವೂ ಆತನನ್ನು ಗಾಯ ಪಡಿಸಲಾರದು. ಆತನು ಎಲ್ಲರನ್ನೂ ಗೆದ್ದು ಬಿಡುವನು. ಹೀಗೆಯೇ ಆತನು ಎಷ್ಟೋ ಯುದ್ಧಗಳನ್ನು ಗೆದ್ದು ಚಕ್ರವರ್‍ತಿಯಾಗಿದ್ದನು.

ಒಂದು ಸಲ ಅರಸನು ಅಲ್ಲಿ ಪೂಜೆಗೆ ಹೋಗುವಾಗ ಹಗೆಯವನು ಒಬ್ಬನು ಬಂದು ಕೊಳಕು ಬಟ್ಟೆಯ ಚೂರು ಒಂದನ್ನು ಇಟ್ಟುಕೊಂಡಿದ್ದು, ಅದನ್ನು ಆತನಿಗೆ ಕಾಣದಂತೆ ಉಡಿಯಲ್ಲಿ ಹಾಕಿಬಿಟ್ಟನು. ಅರಸನು ಎಂದಿನಂತೆ ಭಕ್ತಿಯಿಂದ ಪೂಜೆ ಮಾಡಿದರೂ ಏಳು ಬಣ್ಣದ ಕುದುರೆಯು ಬರಲಿಲ್ಲ. ಓಹೋ! ಏನೋ ಮೈಲಿಗೆಯಾಗಿರಬಹುದೆಂದು ನೋಡಲು, ಆತನು ಆರಿಯದಂತೆಯೇ ಆತನ ಉಡಿಯಲ್ಲಿ ಒಂದು ಚೂರು ಮೈಲಿಗೆ ಬಟ್ಟೆಯಿತ್ತು. ಅರಸನಿಗೆ ಆಗ ಕೊಳದಿಂದ ಕುದುರೆಯು ಬರದೆ ಇರಲು ಕಾರಣವೇನು ಎಂಬುದು ತಿಳಿಯಿತು. ಮತ್ತೆ ಮಿಂದು ಮಡಿಯುಟ್ಟು ಪೂಜಿಸಿದನು. ಆದರೂ ಕುದುರೆಯು ಬರಲಿಲ್ಲ. ಒಂದು ಸಲ ಮೈಲಿಗೆ ಸೋಕಿ, ಕೊಳದ ಮಹಿಮೆಯೇ ಹೋಗಿಬಿಟ್ಟಿತು.

ಅಂದಿನ ದಿನವೂ ಯುದ್ಧವಿತ್ತು. ಶಿಲಾದಿತ್ಯನೂ ಹೋದನು. ಆದರೆ ಆತನಿಗೆ ಅಂದಿನ ಯುದ್ಧವೇ ಕೊನೆಯಾಯಿತು. ಆತನು ಅಂದಿನ ರಣರಂಗದಿಂದ ಹಿಂತಿರುಗಲೇ ಇಲ್ಲ. ಆತನು ಅಲ್ಲಿಯೇ ಮಡಿದು ಹೋದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಪಣರ ಬಾಳು
Next post ಇನ್ನಿಸ್ ಫ್ರೀ ದ್ವೀಪ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…