Home / ಕವನ / ಅನುವಾದ / ಇನ್ನಿಸ್ ಫ್ರೀ ದ್ವೀಪ

ಇನ್ನಿಸ್ ಫ್ರೀ ದ್ವೀಪ

ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ
ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ;
ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ
ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ.

ಶಾಂತಿ ಸಿಕ್ಕುವುದು ಅಂಥಲ್ಲೇ, ಅದು ತುಂತುರು ಹನಿಯುವ ಬಾಳಿನಲೇ
ನಸುಕನು ಕವಿದ ಮುಸುಕಿನಿಂದ ಜೀರುಂಡೆಯ ಜಿರ್ರನೆ ದನಿವರೆಗೆ;
ಮಬ್ಬು ಮಿನುಗುವುದು ನಟ್ಟಿರುಳು ಮಧ್ಯಾಹ್ನಕೆ ನೇರಳೆ ಹೊಳಪಲ್ಲಿ
ತುಂಬಿ ನಿಲ್ಲುವುವು ಸಂಜೆಗಳು ಕೋಗಿಲೆಗಳ ರೆಕ್ಕೆಯ ಬಡಿತದಲಿ.

ಹೋಗುವೆನೀಗಲೆ ಅಲ್ಲಿಗೆಂದು, ಯಾಕೆಂದರೆ ಹಗಲಿರುಳೂ ಅಲ್ಲಿ
ಸರೋವರದ ತೆರೆ ಗುಣುಗುಣಿಸುವುವು ಸವರುತ ದಡವನು ಅಂಚಿನಲಿ;
ನಿಲ್ಲುವೆ ದಾರಿಯ ನಡುವೆಯೆ, ಇಲ್ಲವೆ ಪಾದಚಾರಿಗಳ ಹಾದಿಯಲಿ,
ಹೃದಯದಿಂದಲೇ ಎದ್ದು ಬರುವ ಆ ಸದ್ದನು ಆಲಿಸಿ ಕೇಳುತಲಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಟಿಪ್ಪಣಿ:
ಏಟ್ಸ್ ತನ್ನ ಕಾವ್ಯಜೀವನದ ಆರಂಭದ ದಿನಗಳಲ್ಲಿ ಬರೆದ ಭಾವಗೀತಾತ್ಮಕವಾದ ಕವಿತೆ. ರೊಮ್ಯಾಂಟಿಕ್ ಮನೋಧರ್‍ಮವನ್ನು ಬಿಂಬಿಸುವ ಈ ಕವನ ಏಟ್ಸ್ ಮುಂದೆ ಬರೆದ ಪ್ರಸಿದ್ಧ ಕವನಗಳ ಶೈಲಿ ರುಚಿಗಳಿಗೆ ಹೊರತಾದದ್ದು. ಆದರೂ ಕವಿಗೆ ಮುಜುಗರ ತರುವಷ್ಟು ಜನಪ್ರಿಯವಾದದ್ದು. ‘ನನ್ನದೇ ಆದ ಗೀತಲಯ ಕೊಂಚವಾದರೂ ಇರುವ ನನ್ನ ಮೊದಲ ಭಾವಗೀತೆ’ ಎಂದು ಏಟ್ಸ್ ಅದರ ಬಗ್ಗೆ ಹೇಳುತ್ತಾನೆ. ಕವಿಯ ಸ್ವಂತ ಪದ್ಯಗಳ ವಾಚನದ ಧ್ವನಿಸುರುಳಿಯೊಂದರಲ್ಲಿ ಈ ಪದ್ಯವೂ ಸೇರಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...