Home / ಕವನ / ಕವಿತೆ / ಪ್ರತೀಕ್ಷೆ

ಪ್ರತೀಕ್ಷೆ

ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು
ಗಾಳಿ ಆಡದ ಕೋಣೆ
ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ
ಸರಾಗ ಸರೋಗ ವಾತಾಯನ ವ್ಯವಸ್ಥೆ
ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ
ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ
ಶಿಣ್ಣು, ಬೇಡು, ಗಂಟೆಗಳ ಸಜೀವ ಆರ್ತನಾದ
ಒಳ್ಳೆಯ ಆಲಾಪ ಪ್ರಾಯೋಗಿಕ
ಕತೆ ಕವಿತೆ ಕಾದಂಬರಿಗಳಿಗೆ
ಕರುಳಬಳ್ಳಿಯ ಕತ್ತರಿಸಿದ ಪ್ರನಾಳ
ನಿರ್ನಾಳ ಶಿಶು ಪಶುಗಳಿಗೆ
ಕೃತಕ ಸುಂದರ ಹೂವುಗಳ ಇಲ್ಲದ ಪರಿಮಳ
ಸತ್ತ ಜೀವದ ಒಳಗೆ ಕುಪಿಸದ ಶ್ವಾಸ
ಅರೆ ಜೀವ ತೂಕಡಿಕೆ
ಜೀಕಳಿಕೆ

ಇಂಥಲ್ಲಿ
ನಿಂಥಲ್ಲೇ ಇನ್ನಿಲ್ಲವಾಗುವ ನಾನು
ನನ್ನ ಕೊಳೆಯುವ ಹೆಣ
ಆಗದ ಸಂಸ್ಕಾರ
ಮುಚ್ಚಿದ ಮೂಗುಗಳ ಒಳಗೂ
ದಾಳಿ ಇಡುವ ದುರ್ನಾತ
ಓಡೋಡಿ ಬರುವುವು ನಾಯಿ
ಕುಕ್ಕಲು ಹದ್ದು
ಎಲೆ ಇರದ ರೆಂಬೆಯ ಮೇಲೆ ಕಾಯುತ್ತಿದ್ದು
ಇದೋ ಈಗ
ನುಗ್ಗುವ ಫಟ ಫಟ ಸದ್ದು

ಆಗ ತಕ್ಷಣ ಎದ್ದು
ಬಡಿಯುವೆ ಬಾಗಿಲು
ತೆರೆಯದಿದ್ದರೆ ಒದ್ದೇ ಬಿಡುವೆ
ಇನ್ನೆಷ್ಟು ದಿನ ಇಲ್ಲಿ ಕಾಯುತ್ತಿರಲಿ?
ಪುನಃ ಪುನಃ ನಾನು ಸಾಯುತ್ತಿರಲಿ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...