ಘರ್ಷಣೆ

ಹಸಿವೆ-ನೀರಡಿಕೆಯಲಿ
ಜೀವಂತ ಹೆಣವಾಗುತ
ವಂಚನೆಗೆ ಬಲಿಯಾಗಿ
ಬಳಲುತ… ಬಿದ್ದಿಹರು

ಜಾತಿ-ಧರ್ಮಗಳ-ಭೇದದಲಿ
ದ್ವೇಷ-ಬೆಸೆದು ಭಗ್ನಗೊಳಿಸುತ…
ಬಾಂಧವ್ಯದ ಹಸಿರು ಬಳ್ಳಿಯ
ಕಡಿದು ಬರಡುಗೊಳಿಸಿಹರು

ತಾಳ್ಮೆ-ನೋವುಂಡ ಜೀವಕ್ಕೆ
ಸಹನೆ-ಮೀರಿದ ಬದುಕಿಗೆ
ಕೊನೆ ಹೇಗಾದರೇನು…
ಮಿತಿ ಎಲ್ಲೆಂದು ಕೇಳರು

ಪ್ರೀತಿ-ವಾತ್ಸಲ್ಯಗಳ…
ನಾಚಿಕೆ ಕೋಟೆ ಬಿರಿದು
ಬಿರುಗಾಳಿ ಬೆಂಕಿಯುಗುಳುತ
ಶತ ಶತಮಾನವುಂಡ ದೌರ್ಜನ್ಯ-ನೋವು
ಕಟ್ಟಿಹಾಕಲು ಎದೆಸೆಟೆಸಿ ನಿಂತ ನಮ್ಮವರ

ನೋವಿನ ಕೂಗಿಗೆ ನಕ್ಸಲೈಟೆನ್ನುತ
ತುಳಿತದಿ ನೊಂದು ಮೇಲೇಳುವ ಬದುಕಿಗೆ
ಬೆಂಕಿಯಿಡುತ ಕೊಚ್ಚುವ
ರಕ್ತಾಸುರ… ಬೀಜಾಸುರರು… ನಾವು.

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಿಗೆ ಆಯುಧ ಪೂಜೆ
Next post ಪ್ರತೀಕ್ಷೆ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys